Posts

Showing posts from August, 2024

Sakshigopala in VK

Image
  ಹಳ್ಳಿಯಲ್ಲೊಬ್ಬ ವೃದ್ಧನಿಗೆ ಮಥುರೆಯ ಕೃಷ್ಣನ ದರ್ಶನ ಮಾಡಬೇಕೆನ್ನುವ ಹೆಬ್ಬಯಕೆ. ಹೋಗಲು ಕೈಲಾಗುವುದಿಲ್ಲ. ಕೇರಿಯ ಯುವಕನೊಬ್ಬ ದರ್ಶನ ಮಾಡಿಸಿಕೊಂಡು ಬರುತ್ತೇನೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡೆನ್ನುತ್ತಾನೆ. ಹಿರಿಯ ಒಪ್ಪಿ ಭಾಷೆ ಕೊಡುತ್ತಾನೆ. ಯುವಕ ಆತನನ್ನು ಭುಜದಲ್ಲಿ ಹೊತ್ತು ಕಾಲ್ನಡಿಗೆಯಲ್ಲಿ ಒಡಿಶಾದ ಪುರಿಯಲ್ಲಿರುವ ಹಳ್ಳಿಯಿಂದ ಮಥುರೆಗೆ ಕರೆದುಕೊಂಡು ಹೋಗಿ ದೇವದರ್ಶನ ಮಾಡಿಸುತ್ತಾನೆ. ನಂತರ ವೃದ್ಧ ಮಗಳನ್ನು ಕೊಡಲು ನಿರಾಕರಿಸುತ್ತಾನೆ ತಾನು ಹಾಗೆ ಮಾತು ಕೊಟ್ಟಿದ್ದಕ್ಕೆ ಸಾಕ್ಷಿಯೇನಿದೆಯೆಂದು ಸವಾಲು ಹಾಕುತ್ತಾನೆ. ನೊಂದ ಯುವಕ ಸೀದಾ ಮಥುರೆಗೆ ಬಂದು ಕೃಷ್ಣ ನೀನೇ ತಾನೆ ನಮ್ಮ ನಡುವಿನ ಮಾತಿಗೆ ಸಾಕ್ಷಿಯಾಗಿದ್ದವನು ಈಗ ತನ್ನ ಹಳ್ಳಿಗೆ ಬಂದು ಸಾಕ್ಷಿ ನುಡಿಯೆನ್ನುತ್ತಾನೆ. ಯುವಕನ ಶ್ರದ್ಧಾ ಭಕ್ತಿಗೆ ಮೆಚ್ಚಿದ ಭಗವಂತ ನಿನ್ನ ಹಿಂದೆಯೇ ಬರುತ್ತಿರುತ್ತೇನೆ, ನೀನು ಹಿಂದಿರುಗಿ ನೋಡದೆ ಊರು ಸೇರಬೇಕು. ನಡುವಿನಲ್ಲಿ ಹಿಂದಿರುಗಿ ನೋಡಿದರೆ ನಾನಲ್ಲಿಯೇ ನಿಂತು ಬಿಡುತ್ತೇನೆ ಎನ್ನುವ ಷರತ್ತು ತೋರುತ್ತಾನೆ. ಗೋಪಾಲನ ಹೆಜ್ಜೆ ಸದ್ದನ್ನಾಲಿಸುತ್ತಾ ಯುವಕನ ಪಯಣ ಆರಂಭವಾಗುತ್ತದೆ. ಊರು ತಲುಪಲು ಒಂದಿಷ್ಟೇ ದೂರವಿದೆಯೆನ್ನುವಾಗ ಯುವಕ ಹಿಂದಿರುಗಿ ನೋಡುತ್ತಾನೆ. ಗೋಪಾಲಕೃಷ್ಣ ಅಲ್ಲಿಯೇ ಮೂರ್ತಿಯಾಗಿ ನಿಂತು ಬಿಡುತ್ತಾನೆ. ದು:ಖಿತನಾದ ಯುವಕ ಗ್ರಾಮಸ್ಥರಿಗೆ ಕಲ್ಲಾದ ದೇವರನ್ನು ತೋರಿದಾಗ ಅವನ ಸತ್ಯಸಂಧತೆಯನ್ನು ಒಪ್ಪಿ ವೃದ್ಧನ ಮಗ...

Inspiring story of Anitha Rathi

Image
  ನನ್ನ ದೇಹ ನನ್ನ ಹಕ್ಕು ಎಂದು ಹೇಳಿಕೊಳ್ಳೂವವರೆಗೂ ಮಹಿಳೆ ಮುಂದುವರೆದಿದ್ದಾಳೆ ಎಂದುಕೊಳ್ಳುತ್ತಿರುವ ಸಮೂಹದ ನಡುವೆಯೇ ಕಾಣಸಿಗುತ್ತಾರೆ ಯೌವ್ವನದ ಹೊಸಿಲಿನಲ್ಲೇ ಬದುಕನ್ನು ಎದುರಿಸಲು ಹೈರಾಣಾಗಿರುವ ಯುವತಿಯರು. ಮದುವೆಯಾದ ಕೂಡಲೇ ಜೀವನ ಸತ್ವವೇ ಅರ್ಧ ವಾಗಿ ಹೋಗುತ್ತದೆ ಎಂದು ನಂಬಿಕೊಂಡಿರುವ ಮತ್ತು ಹಾಗೆಯೇ ವರ್ತಿಸುವ ಸ್ನೇಹಿತೆಯರು ನಮ್ಮ ನಡುವೆಯೇ ಓಡಾಡುತ್ತಿರುತ್ತಾರೆ.   ಒಂದು ಮಗುವಾಗಿ ಬಿಟ್ಟರಂತೂ ಮುಗಿದೇ ಹೋಯಿತು.   ಸ್ವಬದುಕಿನೆಡೆಗೆ ಎಲ್ಲಾ ನಿಜಾರ್ಥದ ಆಸಕ್ತಿಯನ್ನು ಕಳೆದುಕೊಂಡು ಇಲ್ಲ ಸಲ್ಲದ ಕಾರಣ ಕೊಟ್ಟು ಮೈಯನ್ನು ಯದ್ವಾತದ್ವ ಬೆಳೆಸಿಕೊಂಡು ಮನಮುಟ್ಟದ appearance, approach ಮತ್ತು acceptance ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಇಂತಹ ಮಹಿಳೆಯರನ್ನು ಹೊಡೆದೆಬ್ಬಿಸಿ ಜೀವಜಲವನ್ನು ಸಿಂಪಡಿಸುವಂತೆ ಇದ್ದಾರೆ ಅನಿತಾ ರಾಠಿ.   42 ವರ್ಷ ವಯಸ್ಸಿನ ಅನಿತಾಗೆ ಮದುವೆಯಾಗಿ 22 ವರ್ಷಗಳು. ಮೂರು ಮಕ್ಕಳ ತಾಯಿ. ತೂಕ ಹೆಚ್ಚಾಗಿ ಆರೋಗ್ಯ ದೂರವಾಗಲು ಆರಂಭವಾದಾಗ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಅನಿತಾ ಜಿಮ್‍ಗೆ ಸೇರಿಕೊಳ್ಳುತ್ತಾರೆ. ಬೆಳಗಿನ ಝಾವ 4 ಗಂಟೆಗೆ ಎದ್ದು ಸಂಸಾರದ ಜವಾಬ್ದಾರಿ ನಿರ್ವಹಿಸಿ 3 ಗಂಟೆಗಳ ಕಾಲ ತಮ್ಮ ದೇಹದ ಮೆಲೆ ವ್ಯಯಿಸುವ ಅನಿತಾ ಭಾರ ಎತ್ತುವುದರಲ್ಲಿ ಗಟ್ಟಿಗಿತ್ತಿ ಎನ್ನುವುದನ್ನು ಮನಗೊಂಡ ಆಕೆಯ ಜಿಮ್ ತರಬೇತುದಾರರು ಹೆಚ್ಚಿನ ಗಮನಕೊಟ್ಟು ಆಕೆಯನ್ನು ಭಾರ ಎತ್...

BNS

 ತಮ್ಮಿಷ್ಟದ ನಾಯಕನ ಪರವಾಗಿ ನಿಲ್ಲಲು ಎಲ್ಲರೂ ಐವಾನ್ ಡಿಸೋಜಾ ತರಹ ಭಾರತವನ್ನು ಬಾಂಗ್ಲಾ ಮಾಡುತ್ತೇವೆ, ದಂಗೆ, ಮುತ್ತಿಗೆ ಹಾಕುತ್ತೇವೆ ಎನ್ನುವ ಮುನ್ನ; ಶರಟು ಪ್ಯಾಂಟು ಹರಿದುಕೊಂಡು ಚೀರುವ ಮುನ್ನ , ಸಾಮಾಜಿಕ ಜಾಲತಾಣದಲ್ಲಿ ಕತ್ತಿ ಝಳಪಿಸುವ ಮೊದಲು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152 ಅನ್ನು ಒಮ್ಮೆ ಓದಿದರೆ ತಮ್ಮತಮ್ಮ ಸ್ಥಾನ ಎಲ್ಲಿ ಎಂದು ಗುರುತಿಸಿಕೊಳ್ಳಲು ಅನುಕೂಲ ಆದೀತು. " ಉದ್ದೇಶಪೂರ್ವಕವಾಗಿ ಅಥವಾ ಪ್ರಜ್ಞಾಪೂರ್ವಕವಾಗಿ, ಮಾತುಗಳಿಂದ, ಬರಹದಿಂದ. ಚಿನ್ಹೆ, ಸಂಜ್ಞೆಗಳಿಂದ,ಅಥವಾ ಪ್ರತ್ಯಕ್ಷ ಪ್ರಾತಿನಿಧ್ಯದಿಂದ, ಅಥವಾ ಎಲೆಕ್ಟ್ರಾನಿಕ್ ಸಂವಹನದಿಂದ ಅಥವಾ ಹಣಕಾಸಿನ ಬಳಕೆಯಿಂದ ಅಥವಾ ಇತರ ಯಾವುದೇ ರೀತಿಯಿಂದ; ಪ್ರಚೋದಿಸುವ ಅಥವಾ ಪ್ರಚೋದಿಸಲು ಯತ್ನಿಸಿದರೆ, ಪ್ರತ್ಯೇಕತೆ ಅಥವಾ ಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳನ್ನು , ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಪ್ರೋತ್ಸಾಹಿಸಿದರೆ; ಅದರ ಮೂಲಕ ಭಾರತದ ಸಾರ್ವಭೌಮತ್ವ ಅಥವಾ ಏಕತೆ ಮತ್ತು ಸಮಗ್ರತೆಗೆ ಅಪಾಯ ಉಂಟಾದರೆ ಅಥವಾ ಅಂತಹ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅಥವಾ ಎಸಗಿದರೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ದಂಡವನ್ನೂ ವಿಧಿಸಲಾಗುತ್ತದೆ."  ಇದೊಂದು ಜಾಮೀನು ರಹಿತ ಅಪರಾಧವಾಗಿರುತ್ತದೆ. #BNS #BNSS #law #ಹೊಸಅಪರಾಧಕಾನೂನುಗಳು  https://www.f...

Training at Commissioner's office

Image
  ಸಮವಸ್ತ್ರದಲ್ಲಿ ಇರುವ ಪೊಲೀಸರಿಗೆ ಪಾಠ ಮಾಡುವುದು ಎಂದರೆ ವಿನಮ್ರತೆಗೆ ಹೊಸ ವ್ಯಾಖ್ಯಾನ ಕಂಡುಕೊಂಡಂತೆ.... ವೈಯಕ್ತಿಕವಾಗಿ ಸಂತೋಷ ಮತ್ತು ಸಮಾಧಾನ ಕೊಡುವ ವಿಷಯ ಯಾಕೆಂದರೆ ... ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಪೋಲೀಸರ ಜೊತೆ ಮಾತನಾಡುವುದು, ಅವರನ್ನು ಗಮನಿಸುವುದು ನನ್ನ ಆಸಕ್ತಿ. ಅದರಲ್ಲಿನ ಸಣ್ಣ ಅನುಭವದಿಂದ ರೂಪಿತವಾದ ಚಿಕ್ಕ ಅಭಿಪ್ರಾಯ ಎಂದರೆ ನಮ್ಮ ದೇಶದ ಪೊಲೀಸರು ವಿಪರೀತ ಬುದ್ಧಿವಂತರು, unfortunately ಅದು ಅವರಿಗೆ ಗೊತ್ತಿದೆ ಮತ್ತು ಗೊತ್ತಿಲ್ಲ ಕೂಡ. ಹಾಗಾಗಿ ವೇದಿಕೆ ಮೇಲೆ ನಿಂತು ಅವರಿಗೆ ಏನೇ ಹೇಳಬೇಕಾದಾಗ ಹೆಚ್ಚಿನ ಓದು, ಸಂಶೋಧನೆ, ಕರಾರುವಾಕ್ ಅಂಕಿಅಂಶ ಬೇಕಾಗುತ್ತದೆ. ಇದೆಲ್ಲಾ ತಯಾರಿ ಮಾಡಿಕೊಳ್ಳುವಾಗ ಜೀವ ವಿನೀತವಾಗಲೇ ಬೇಕು. ಇಲ್ಲಿನ ಫೋಟೋ ಹಿಂದೊಮ್ಮೆ ಬೆಂಗಳೂರಿನ ಕಮಿಷನರ್ ಕಚೇರಿಯಲ್ಲಿ ಪೊಲೀಸರಿಗೆ ಕಾನೂನು ವಿಷಯದ ತರಬೇತಿ ತೆಗೆದು ಕೊಂಡಾಗಿನದ್ದು. ಮಾಡು ಇಲ್ಲವೇ ನಡಿ ಎನ್ನುವ #FamilyCourtಕಲಿಕೆ

ಹೆಸರು ಬದಲಾವಣೆ ಮತ್ತು ಕಾನೂನು

Image
  ಮೊನ್ನೆ ಪಾರ್ಲಿಮೆಂಟಿನಲ್ಲಿ ಸಭಾಪತಿಗಳು ’ಜಯಾ ಅಮಿತಾಬ್ ಬಚ್ಚನ್ ಅವರೇ’ ಎಂದು ಸಂಭೋದಿಸಿದ ಕೂಡಲೆ ಸದಸ್ಯೆ ಜಯ ಬಾಧುರಿ ಅವರು ತಮ್ಮ ಎಂದಿನ ಖಡಕ್ ಶೈಲಿಯಲ್ಲಿ ’ಸಭಾಪತಿಗಳೇ ನನ್ನನ್ನು ಜಯಾ ಬಚ್ಚನ್ ಎಂದರೆ ಸಾಕು, ಹೀಗೆ ಗಂಡನ ಹೆಸರನ್ನು ಹಾಕಿಕೊಳ್ಳುವುದು ಇತ್ತೀಚಿನ ಫ್ಯಾಷನ್ ಆಗಿಬಿಟ್ಟಿದೆ’ ಎಂದರು. ಅಷ್ಟೇ ಅಲ್ಲ ಈ ಪುರುಷ ಪ್ರಧಾನ ಮನಃಸ್ಥಿತಿ ಇನ್ನೂ ಎಷ್ಟು ಬೆಳೆಯುತ್ತಿದೆ ಎಂದರೆ ಸರ್ವೋಚ್ಚ ನ್ಯಾಯಾಲಯವೇ ಯಾವ ಮಹಿಳೆಗೂ ತನ್ನ ಹೆಸರಿನ ಮುಂದೆ ಗಂಡನ ಅಥವಾ ತಂದೆಯ ಹೆಸರು ಸೇರಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ತೀರ್ಪು ಕೊಟ್ಟಿದ್ದರೂ ಸರ್ಕಾರಗಳು ಒತ್ತಾಯ ಮಾಡುತ್ತಿವೆ ದಾಖಲೆಗಳನ್ನು ಕೊಡಲು. ಒಮ್ಮೆ ಮಗು ಹುಟ್ಟಿ 15 ತಿಂಗಳಾದ್ರೂ ಬರ್ತ್ ಸರ್ಟಿಫಿಕೇಟ್ ಮಾಡಿಸಿರಲಿಲ್ಲ ಯಾಕೆ ಎಂದಿದ್ದಕ್ಕೆ ಬಂದ ಉತ್ತರ “3 ತಿಂಗಳ ಹಿಂದೇನೆ ಕೊಟ್ಟಿದ್ದೀವಿ ಆದರವರು ತಂದೆ ಹೆಸರು ಕೊಡದೆ ಮಾಡಲ್ಲ ಅಂತಿದ್ದಾರೆ. ತಾಯಿ ಲೈಂಗಿಕ ದೌರ್ಜನ್ಯದಿಂದ ನೊಂದವಳು ಎನ್ನುವ ಆದೇಶ ತೋರಿಸಿದರೂ ಆಫೀಸಿನಲ್ಲಿ ತಂದೆ ಹೆಸರು ಬೇಕು ಅಂತಿದ್ದಾರೆ”. ಇನ್ನೊಂದು ಪ್ರಕರಣದಲ್ಲಿ 5 ಮಕ್ಕಳನ್ನು ಭಿಕ್ಷಾಟನೆಯಿಂದ ರಕ್ಷಿಸಲಾಗಿತ್ತು. ಮಕ್ಕಳನ್ನು ಹಿಂದಿರುಗಿಸಿ ಎಂದು ತಾಯಂದಿರೋಡಿ ಬಂದರು. ದಾಖಲೆಗಳನ್ನು ತರಲು ಹೇಳಲಾಗಿತ್ತು. ಅವರೆಲ್ಲರೂ ತಮ್ಮ ರಾಜ್ಯದ ಅಧಿಕಾರಿಗಳಿಂದ ಮಕ್ಕಳ ಜನ್ಮದಾಖಲೆ ತಂದರು. ದಾಖಲೆಗಳಲ್ಲಿ ಐದೂ ಮಕ್ಕಳ ಅಮ್ಮಂದಿರ ಹೆಸರು ಬೇರೆಬೇರೆ ಇತ್ತು...