Posts

Showing posts from 2024

ನೂರು ಮಕ್ಕಳು ನೂರು ಪುಸ್ತಕ

Image
  " ನೂರು ಮಕ್ಕಳು ನೂರು ಪುಸ್ತಕ" ಈ ಯೋಜನೆಯ ಬಗ್ಗೆ ಬಹಳಷ್ಟು ಜನರು ಆಸಕ್ತಿ ತೋರಿಸಿ ಹೆಚ್ಚಿನ ವಿವರ ಕೇಳುತ್ತಿದ್ದೀರಿ. ನಿಮ್ಮೆಲ್ಲರಿಗೂ ನಾನು ಆಭಾರಿ. 🙏  ನೂರು ಮಕ್ಕಳು ನೂರು ಪುಸ್ತಕ ನನ್ನ ಸಂಸ್ಥೆ ಅಸ್ತಿತ್ವ ಲೀಗಲ್ ಟ್ರಸ್ಟ್ ನ ಯೋಜನೆಯಾಗಿದ್ದು ಡಿಸೆಂಬರ್ 2024ರ ಒಳಗೆ ನೂರು ಸ್ಥಳಗಳಲ್ಲಿ ನೂರು ಮಕ್ಕಳ ಕೈಯಲ್ಲಿ ನೂರು ಪುಸ್ತಕಗಳನ್ನು ಕೊಡಬೇಕು ಎನ್ನುವ ಆಸೆ ಇದೆ. ಈಗಾಗಲೇ ಆರು ಸ್ಥಳಗಳಲ್ಲಿ ಸುಮಾರು ಸಾವಿರದ ಇನ್ನೂರು ಮಕ್ಕಳನ್ನು ಪುಸ್ತಕ ಹಿಡಿದುಕೊಂಡು ಓದುವಂತೆ ಮಾಡಲಾಗಿದೆ. ಈ ಯೋಜನೆಯಲ್ಲಿ ತಾವುಗಳು ಭಾಗಿಯಾಗಿ ಪುಸ್ತಕಗಳನ್ನು ಕೊಡಿಸುವುದಾದರೆ ಅಥವಾ ಹಣ ಸಹಾಯ ಮಾಡುವುದಾದರೆ astitvalegal@gmail.com ಇಲ್ಲಿಗೆ email ಮಾಡಿ ವಿವರಗಳನ್ನು ನೀಡಲಾಗುತ್ತದೆ. ಈಗಾಗಲೇ ಈ ಯೋಜನೆಯಲ್ಲಿ ನಮ್ಮ ಬೆಂಬಲಕ್ಕೆ ನಿಂತು ಪುಸ್ತಕಗಳನ್ನು ಕೊಡಿಸಿರುವ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು 🙏😊 ಅಂಜಲಿ ರಾಮಣ್ಣ, ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು ' ಕೈಗೆ ಪುಸ್ತಕ ಕೊಡೋಣ, ಮಕ್ಕಳನ್ನು ಮನುಷ್ಯರನ್ನಾಗಿ ಮಾಡೋಣ ' 16- April -2024

My body my choice - ವಿಜಯಕರ್ನಾಟಕ

Image
  ಕಲಾರಾಧನೆಯ ಕಣ್ಣಿನಿಂದ, ಸೌಂದರ್ಯದ ಆಸ್ವಾದನೆಯ ಮನಸ್ಸಿನಿಂದ ನೋಡಿದಾಗ ಈ ವಿಡಿಯೋ ಅದ್ಭುತವಾಗಿ ಮೂಡಿ ಬಂದಿದೆ. ಇದನ್ನು ತಯಾರು ಮಾಡಿದವರೇ ಸಾರ್ವಜನಿಕವಾಗಿ ಹೇಳಿಕೊಂಡಂತೆ 'ಈ ವಿಡಿಯೋ ಮೂಲಕ ಮಹಿಳೆಯರಿಗೆ ಆಯ್ಕೆಯ ಹಕ್ಕು ಇದೆ ಎಂದು ಸಮಾಜಕ್ಕೆ ತಿಳಿಸುವುದಷ್ಟೇ ನಮ್ಮ ಉದ್ದೇಶ' ಎನ್ನುವ ಮಾತೂ ಬಹಳ ಆಕರ್ಷಣೀಯವಾಗಿದೆ. ಹಲವು ಕಾರಣಗಳಿಗೆ ವಿಡಿಯೋ ಗಂಭೀರವಾಗಿ ಗಮನ ಸೆಳೆದಿದೆ. ದೀಪಿಕಾ ಪಡುಕೋಣೆಯ ಬಗ್ಗೆ ಯಂತೂ ಬೆರಳು ತೋರಲು ಆಗುವುದೇ ಇಲ್ಲ. But... ಉದ್ದೇಶವನ್ನು ಸಾರಲು ಬಳಸಿಕೊಂಡಿರುವ ಪದಗಳು ಮನಸ್ಸಿರುವ ಮನುಷ್ಯ ರನ್ನು ಒಂದಷ್ಟರಮಟ್ಟಿಗೆ ಗೊಂದಲಕ್ಕೀಡು ಮಾಡುವುದಂತೂ ನಿಜ.  SEX ಎನ್ನುವ ಸುಂದರ ಮೂರಕ್ಷರದ ಪದವು ಇಲ್ಲಿ ಬಳಕೆಯಾಗಿರದಿದ್ದರೆ ಬಹುಶಃ ಇದಕ್ಕೆ ಈ ಪರಿಯ ಪ್ರಚಾರವೂ ದಕ್ಕುತ್ತಿರಲಿಲ್ಲವೇನೋ. ಮದುವೆಗೆ ಮೊದಲಿನ ಲೈಂಗಿಕ ಸಂಬಂಧ, ಮದುವೆಯಾಚೆಗಿನ ಸೆಕ್ಸ್, ಹೆಣ್ಣು ಹೆಣ್ಣನ್ನೇ ಕಾಮಿಸುವುದು, ಬೇಕಾಬಿಟ್ಟಿ ಮೈ ಬೆಳೆಸುವುದು, ಮನಸೋಯಿಚ್ಛೆ ಬಟ್ಟೆಧರಿಸುವುದು, ಮದುವೆ ಬೇಕೋ ಬೇಡವೋ, ಹೊತ್ತುಗೊತ್ತಿಗೆ ಗೂಡು ಸೇರುವುದೋ ಬೇಡವೋ, ಪ್ರೀತಿ ಸ್ಥಾಯಿಯಾಗಿರಬೇಕೋ ಜಂಗಮವಾಗಬೇಕೋ, ಹೀಗೆ ಇನ್ನೂ ಏನೇನನ್ನೋ 99 ಹೆಂಗಸರು 'ನನ್ನ ಆಯ್ಕೆ' ಎಂದು ಖಚಿತ ಧ್ವನಿಯಲ್ಲಿ ಸಾರಿ ಹೇಳುವಾಗ, ನನಗಂತೂ ತಪ್ಪು ಎನಿಸಲಿಲ್ಲ, ನಿಜ. ಹೆಣ್ಣಿಗೂ ಆಯ್ಕೆ ಎನ್ನುವ ಹಕ್ಕು ಇದೆ ಮತ್ತು ಅದು ಇತರರಿಗೆ ಇರುವಷ್ಟೇ ಸಮಾನವಾಗಿದೆ. ಎನ್ನುವುದನ್ನ

Adoption Human Trafficking

Image
  Sonu Gowda ಅವರ ನಡೆ ಕಾನೂನು ರೀತ್ಯಾ adoption ಅಂತೂ ಅಲ್ಲ. ಮಾನವ ಕಳ್ಳಸಾಗಾಣಿಕೆಯ ಕೋನವನ್ನೂ ಪರಿಗಣಿಸಬೇಕಿರುತ್ತದೆ. Talk in BTV on 22nd March 2023

Human Trafficking

Image
 14- ಮಾರ್ಚಿ, 2022 ದೂರದರ್ಶನ ಚಂದನ ವಾಹಿನಿಯಲ್ಲಿ ಬಾಲಕಾರ್ಮಿಕತೆಗಾಗಿ ಮಕ್ಕಳ ಸಾಗಾಣಿಕೆ ಬಗ್ಗೆ ನಡೆದ ಕಾರ್ಯಕ್ರಮದ ಲಿಂಕ್ ಇಲ್ಲಿದೆ. ನೋಡಿ, ಕೇಳಿ, ಅಭಿಪ್ರಾಯ ತಿಳಿಸಿ🙏 https://youtu.be/JwoA9JjEDKI?si=USY1AfqBHYXv-v9t

Pulse polio

Image
 3 ಮಾರ್ಚ್ 2024 ಇದೆ ಪಲ್ಸ್ ಪೋಲಿಯೋ ಅಭಿಯಾನ - ಮಗು ಹುಟ್ಟಿದಾಗಿನಿಂದ ತಾಯಿ - ಮಗು ಕಾರ್ಡಿನಲ್ಲಿ ಯಾವಯಾವ ಲಸಿಕೆ ಯಾವ ತಿಂಗಳು ಕೊಡಬೇಕು ಎಂದು ಬರೆದಿರುತ್ತಾರೆ. * ಅದರಂತೆಯೇ ಪೋಲಿಯೋ ಲಸಿಕೆ ಕೊಡಿಸುತ್ತಿದ್ದರೂ * ಎರಡು ದಿನಗಳ ಹಿಂದೆಯೇ ಪೋಲಿಯೋ ಡ್ರಾಪ್ಸ್ ಹಾಕಿಸಿದ್ದರೂ * ಅದೇ ವಾರದಲ್ಲಿ ಹಾಕಿಸುವ ದಿನಾಂಕ ಇದ್ದರೂ ' ಪಲ್ಸ್ ಪೋಲಿಯೋ ' ಗೆ ಅದರದೇ ಆದ ಮಹತ್ವ ಮತ್ತು ಅವಶ್ಯಕತೆ ಇದೆ.  ಹಾಗಾಗಿ ಐದು ವರ್ಷದ ಒಳಗಿನ ಶ್ರೀಮಂತ, ಬಡವ, ಮಧ್ಯಮ ಎಲ್ಲಾ ವರ್ಗದ, ಜಾತಿಯ, ಧರ್ಮದ ಮಕ್ಕಳಿಗೂ ' ಪಲ್ಸ್ ಪೋಲಿಯೋ ' ಹಾಕಿಸಲೇ ಬೇಕು. ಇಲ್ಲಿರುವ ವೈದ್ಯರುಗಳು ಮಗುವಿಗೆ ಪೋಲಿಯೋ ಲಸಿಕೆ ಹಾಕಿಸಿದ್ದರೂ ಪಲ್ಸ್ ಪೋಲಿಯೋ ಹನಿ ಕೊಡಿಸಬೇಕಿರುವ ಅವಶ್ಯಕತೆ ಬಗ್ಗೆ ದಯವಿಟ್ಟು ಕಾರಣ ಸಹಿತ ಬರೆಯಬೇಕು...ಇದನ್ನು ಓದಿದವರು, ಇದರ ಬಗ್ಗೆ ಮಾತನಾಡಬೇಕು. ಪೋಲಿಯೋ ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ಒಂದು ದೇಶ ಅದನ್ನು ನಿರ್ಮೂಲನೆ ಮಾಡಿದ್ದೇವೆ ಎಂದುಕೊಂಡು ಬೀಗುವ ಹಾಗಿಲ್ಲ. ದಯವಿಟ್ಟು ಎಲ್ಲರಿಗೂ ಹೇಳಿ...ಅವರ ಮನೆಯಲ್ಲಿ ಆ ವಯಸ್ಸಿನ ಮಕ್ಕಳು ಇಲ್ಲ ಎಂದು ಸುಮ್ಮನಿರಬೇಡಿ! #FamilyCourtಕಲಿಕೆ #ಮಕ್ಕಳಹಕ್ಕುಗಳಜಾಗೃತಿಸಪ್ತಾಹ

With Railway Police

Image
  ಬೆಂಗಳೂರು ಇನ್ನೂ ನೆಮ್ಮದಿಯಾಗಿ ಇದ್ದರೆ ಕಾರಣ ಇವರು. ಮಕ್ಕಳ ವಿಷಯದಲ್ಲಿ ಇವರಿಗೆ ಬೇಕಾದ್ದು "Three A s" ಎನ್ನುವ ಟಾನಿಕ್ (Apperence, Attitude, Approach). Railway ಪೊಲೀಸರಿಗೆ ಹೀಗೆ ಹೇಳಿ ಒಂದು ಸೆಲ್ಯೂಟ್ ಹಾಕಿ ಬಂದೆ. ಆಮೇಲೆ ಮಹಿಳಾ ಪೊಲೀಸರೊಡನೆ ಒಂದಷ್ಟು ಸಮಾಲೋಚನೆ. BOSCO Childline ಅವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜೊತೆಯಲ್ಲಿ ಇದ್ದವರು Mr. Ashok-DSP, Mr. Baramappa B Mallur - Inspector. 26th February 2019 Railway Superintendent of Police office , Bengaluru

ಸಬಲೀಕರಣ ಕಾನೂನು DISHA episode -1

Image
 Episode -1 DD ಚಂದನ ಸಬಲೀಕರಣ ಕಾನೂನುಗಳ.ಪರಿಚಯ

ದಿಶ - DISHA in Doordarshan

Image
  ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯವು  ಪ್ರಜಾ ಕೇಂದ್ರಿತ ನ್ಯಾಯದಾನ ವಿಧಾನವನ್ನು ರೂಪಿಸಲು ಹಾಕಿಕೊಂಡಿರುವ ಯೋಜನೆ 'ದಿಶ' (DISHA - Designing Innovative Solutions for  Holistic Access to Justice) ಮಹಿಳೆಯರು ಮಕ್ಕಳು ಅಲ್ಪಸಂಖ್ಯಾತರು  ಲಿಂಗತ್ವ ಅಲ್ಪಸಂಖ್ಯಾತರು ಹಿರಿಯ ನಾಗರಿಕರು ಮತ್ತು ಅಂಗವಿಕಲರು ಇವರುಗಳಿಗೆ ಕಾನೂನು ಮಾಹಿತಿಯನ್ನು ಕೊಡುವ ಯೋಜನೆಯಲ್ಲಿ ಈ ಸರಣಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ.  ದೂರದರ್ಶನ ಚಂದನ ವಾಹಿನಿಯ ಈ ಕಾರ್ಯಕ್ರಮದ ಉಸ್ತುವಾರಿ ಕೆಲಸ ನನಗೆ ನೀಡಿದೆ ಎನ್ನುವುದು ದೊಡ್ಡ ಖುಷಿ. ನಾಳೆಯಿಂದ ಪ್ರತೀ ಶನಿವಾರ ಪ್ರಸಾರವಾಗಿದೆ ಸರಣಿ. ನಾಳೆಯದರ ಬಗ್ಗೆ ಇಲ್ಲಿದೆ ವಿವರ. ದಯವಿಟ್ಟು ಕಾರ್ಯಕ್ರಮ ನೋಡಿ ಮತ್ತು ನೋಡಿಸಿ 🙏

Toilets in Government Offices

Image
2022 ರಲ್ಲೂ ಸರ್ಕಾರಿ ಕಚೇರಿಗಳಲ್ಲಿ ಮನುಷ್ಯರ ಉಪಯೋಗಕ್ಕೆ ಅರ್ಹ ಇರುವ ಶೌಚಾಲಯ ಇಲ್ಲ. ಕೂಡಲೇ ಕಟ್ಟಿಸಿ, ನಿರ್ವಹಿಸಿ ಎನ್ನುವ ಸರ್ಕಾರೀ ಆದೇಶ ಹೀಗಿದೆ.  ನೀವುಗಳು ಹೋದೆಡೆಯಲ್ಲಿ ಗಮನಿಸಿ, ದನಿ ಎತ್ತಿ please🙏 #ಕಂಡಲ್ಲಿಕೇಳು  

Post Valentine's day

Image
 18th February 2024  ’ನೀನಲ್ಲ ನೀನಲ್ಲಾ ಈ ಕರಿಮಣಿ ಮಾಲೀಕ ನೀನಲ್ಲಾ. . .’ ಎನ್ನುವ ರೀಲ್ಸ್‍ಗಳು ಅಂತರ್ಜಾಲದಲ್ಲಿ ಕೊರಳು ಕೊಂಕಿಸಿ, ಬೆರಳು ತಿರುಗಿಸಿ ಹಾಡಾಗುತ್ತಿರುವ ಹೊತ್ತಿನಲ್ಲಿ ಮತ್ತೊಂದು ವ್ಯಾಲೆಂಟೈನ್ ದಿವಸ ಬಂದು, ಮುಗಿದೂ ಹೋಗಿದೆ. ಮಾರನೆಯ ದಿನ ಕಸದ ಗಾಡಿಯಲ್ಲಿ ಬಗ್ಗಿ ನೋಡಿದಾಗ ಅಷ್ಟೊಂದು ಗುಲಾಬಿ ಶವಗಳು ಕಾಣಲಿಲ್ಲ. ಪ್ರೇಮಿಗಳು ಕಡಿಮೆಯಾಗಿಬಿಟ್ಟರೇನು! ಕ್ರಿಸ್ಮಸ್ ಮತ್ತು ವ್ಯಾಲೆಂಟೈನ್ ದಿವಸಗಳಲ್ಲಿ ಅವುಗಳದ್ದೇ ಕಥೆ ಹೊತ್ತು ತಯಾರಾಗುತ್ತವೆ ಹಲವಾರು ಇಂಗ್ಲೀಷ್ ರೋಮ್ಯಾಂಟಿಕ್ ಸಿನೆಮಾಗಳು. ಅರ್ಧ ವರ್ಷ ಅವುಗಳನ್ನು ನೋಡುತ್ತಾ ನಾ ಕೂಡ ಅದೇ ಭಾವದಲ್ಲಿ ಉಕ್ಕುತ್ತಿರುತ್ತೇನೆ. ಆದರೆ ಈ ಬಾರಿ ಅಂತಹ ಸಿನೆಮಾಗಳೂ ಬಂದಿಲ್ಲ. ಪ್ರೇಮಿಗಳು ರಜೆಯ ಮೇಲೆ ಹೋಗಿ ಬಿಟ್ಟರೋ ಏನೋ! ಒಂದಾನೊಂದು ಕಾಲದಲ್ಲಿ  ವ್ಯಾಲೆಂಟೈನ್ ಎನ್ನುವ ಹೆಸರಿನ ಸಂತ ಇದ್ದನಂತೆ. ಅವನೂರಿನಲ್ಲಿ ರೋಮನ್ನರು ಆಳುತ್ತಿರುವಾಗ ಸೈನಿಕರಿಗೆ ಮದುವೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲಿಲ್ಲವಂತೆ. ಆದರೆ ಈ ಸಂತ ಕದ್ದು ಮುಚ್ಚಿ ಅವರಿಗೆಲ್ಲಾ ಮದುವೆ ಮಾಡಿಸುತ್ತಿದ್ದನಂತೆ. ಇದು ರೋಮಿನ ಸಾಮ್ರಾಟನಿಗೆ ಗೊತ್ತಾಗಿ ಸಂತ ವ್ಯಾಲೆಂಟೈನಿಗೆ ಮರಣದಂಡನೆ ವಿಧಿಸಿಬಿಟ್ಟನಂತೆ.  ಕೊನೆಯ ಉಸಿರು ನಿಲ್ಲುವಾಗ ಈತ ಜೈಲರ್ನ ಮಗಳಿಗೆ ’your valentine’ ಎಂದು ಬರೆದಿರುವ ಒಂದು ಚೀಟಿ ಕೊಟ್ಟನಂತೆ. ಅವತ್ತಿನಿಂದ ಸಂತನ ಹುಟ್ಟುಹಬ್ಬವಾದ 14ನೆಯ ಫೆಬ್ರವರಿಯನ್ನು ಕ್ರಿಶ್ಚಿಯನ್ನರು ಪ್ರೇಮ

Rosa Park ಕರೆಗಂಟೆ ಒತ್ತಿ ಕೌಟುಂಬಿಕ ದೌರ್ಜನ್ಯ ತಡೆಗಟ್ಟಿ

Image
  ಕರೆಗಂಟೆ ಒತ್ತಿ ಕೌಟುಂಬಿಕ ದೌರ್ಜನ್ಯ ತಡೆಗಟ್ಟಿ, ಎನ್ನುವುದು ಒಂದು ಆಂದೋಲನ . ಹೀಗೆ ಜಗಳ ಆಡುವಾಗ ಯಾರಾದರೂ ಹೋಗಿ ಅವರ ಮನೆಯ ಕರೆಗಂಟೆ ಒತ್ತಬೇಕು ಆಗ ಅದರಿಂದ ಜಗಳ ಮಾಡುವವರಿಗೆ ತಮ್ಮ ಮೇಲೆ ಇತರರ ಗಮನ ಇದೆ ಎನ್ನುವುದು ತಿಳಿಯುತ್ತದೆ ಎನ್ನುವ ಉದ್ದೇಶ. ಆದರೆ ಎಷ್ಟು ಯಶಸ್ವಿ ಆಯಿತು ಗೊತ್ತಿಲ್ಲ. ಕೌಟುಂಬಿಕ ದೌರ್ಜನ್ಯ ಒಂದು ಕ್ರಿಮಿನಲ್ ಅಪರಾಧ. ಹೆಂಡತಿ ಅಥವಾ ಗಂಡ ವಿರೋಧಿಸಿದರೂ, ನೋಡಿದವರು, ಕೇಳಿದವರು ಕೂಡ ದೂರು ನೀಡಬೇಕಿರುತ್ತದೆ. ಆದರೆ ಗಾಸಿಪ್ ಸಿಕ್ಕರೆ ಸಾಕು, ಪರರ ನೆಮ್ಮದಿ ನಮಗೆ ಯಾಕೆ ಎನ್ನುವ ಭಾವ ನಮ್ಮ ಸಮಾಜದ ಸಾಗುವಳಿಯಲ್ಲಿ ಬಿತ್ತನೆ ಆಗಿದೆ. ಹೀಗಿರುವಾಗ ನಮಗೆ ಯಾಕೆ ಬೇಕು ಎಂದು ಸುಮ್ಮನಾಗುವವರೇ ಹೆಚ್ಚು ಅದಕ್ಕೆ ದೌರ್ಜನ್ಯ ಒಂದು ಸರಪಳಿಯಂತೆ. Remember, Injustice done anywhere is a threat to justice done everywhere- Martin Luther King ಇವತ್ತು Rosa Parksಳ 109 (04 ಫೆಬ್ರವರಿ 1913) ನೆಯ ಜನ್ಮದಿನ. ಆವಳು ಹೇಳುತ್ತಾಳೆ "ನಾನು ಸ್ವಾತಂತ್ರ್ಯ ಬಯಸಿ ಹೋರಾಡುತ್ತೇನೆ ಏಕೆಂದರೆ ಉಳಿದವರು ಸ್ವತಂತ್ರರಾಗಲೀ ಎಂದು" #FamilyCourtಕಲಿಕೆ

Lord Rama in Indonesia

Image
  ಅದು ಬಾಲಿ ದ್ವೀಪ ಪ್ರವಾಸದ ಕೊನೆಯ ದಿನ. ಉಬುದ್ ಎನ್ನುವ ಸ್ಥಳದಿಂದ ಚಾಲಕ ಪುತು ಅಲಿತ್ ಅಸ್ತಿನಪುತ್ರನ ಜೊತೆ ಪಯಣ ಶುರುವಾಗಿತ್ತು I Gusti Ngurah Rai International ವಿಮಾನ ನಿಲ್ದಾಣದ ಕಡೆಗೆ. ’ಮಹಾಮೃತ್ಯುಂಜಯ ಸ್ತೋತ್ರವನ್ನು ರೆಕಾರ್ಡ್ ಮಾಡಿ ಕೊಡಿ’ ಎನ್ನುತ್ತಾ ತನ್ನ ಮೊಬೈಲ್ ಅನ್ನು ಕೈಗಿತ್ತಿದ್ದ ಅಲಿತ್. ಸಮಯ ಜಾರಿದ ದು:ಖದಲ್ಲಿ ವಿಷಾದ ಗೀತೆಯೊಂದನ್ನು ಹಾಡಿಕೊಳ್ಳುವ ಚಣ ಮೊದಲು ಅಲಿತ್ ’ಅಲ್ಲಿ ನೋಡಿ ರಾಮ’ ಎನ್ನುತ್ತಾ ವಾಹನ ದಟ್ಟಣೆಯಿದ್ದ ಒಂದು ಹೆದ್ದಾರಿಯ ಬದಿಯಲ್ಲಿ ಕಾರ್ ನಿಲ್ಲಿಸಿದ.  ಬಾಲಿಯ ರಸ್ತೆಗಳಲ್ಲಿ ಮಹಾಭಾರತ ಮತ್ತು ರಾಮಾಯಣದ ಹಲವಾರು ವ್ಯಕ್ತಿ ಚಿತ್ರಣಕ್ಕೆ ದೊಡ್ಡದೊಡ್ಡ ಮೂರ್ತ ರೂಪಕೊಟ್ಟು ಶಿಲ್ಪಗಳನ್ನು ಇಟ್ಟಿದ್ದಾರೆ. ರಸ್ತೆಗಳಲ್ಲಿ, ಸಿರಿವಂತರ ಮನೆಗಳ ಮುಂದೆ, ಅಲ್ಲಿನ ರಾಜನ ಅರಮನೆಯ ಹೆಬ್ಬಾಗಿಲಿನಲ್ಲಿ, ಮ್ಯೂಸಿಯಮ್ ಮತ್ತು ರಾಜಕೀಯ ಮುಖಂಡರುಗಳ ಕಚೇರಿಯ ಎದುರು ಹನುಮನ ಮೂರ್ತಿ ನೋಡಲು ಸಿಕ್ಕಿತ್ತು. ಅವನಿಗೆ ಅಲ್ಲಿ ಮನೆಯೊಳಗೆ ಜಾಗವಿಲ್ಲ. ಬ್ರಹ್ಮ ವಿಷ್ಣು ಮಹೇಶ್ವರರನ್ನು ದೇವರು ಎಂದು ಪ್ರಾರ್ಥಿಸುವ, ಪೂಜಿಸುವ ಇಂಡೋನೇಷಿಯಾ ಹಿಂದುಗಳು ಹನುಮ ದೇವರಲ್ಲ ದ್ವಾರಪಾಲಕ ಎನ್ನುತ್ತಲೇ ಮುಂದುವರೆದು ’ರಾಮಾಯಣ ಮಹಾಭಾರತ ನಮ್ಮ ಸಂಸ್ಕೃತಿ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಲಂಕೆಯನ್ನು ಸುಡುವಾಗಲೂ ಸೌಮ್ಯ, ಸ್ಥಿತಪ್ರಜ್ಞನಂತೆ ಇರುವ ಹನುಮನ ಮುಖಭಾವವನ್ನು ಮೈಮನಗಳಲ್ಲಿ ತುಂಬಿಕೊಂಡ ನನಗೆ ಅಲ್ಲಿನ ಹನುಮ