Posts

Showing posts from September, 2023

Solo Travel ವಿಜಯಕರ್ನಾಟದಲ್ಲಿ

Image
 ಒಬ್ಬಂಟಿ ಪ್ರಯಾಣವೇ ಅತ್ಯದ್ಭುತ ಶಿಕ್ಷಕ. ಅದರಲ್ಲೂ ಪ್ರಯಾಣವು ನಾವು ಬಯಸುವಂತಹ ಪ್ರವಾಸವಾದರೆ ಅನುಭವದ ಅಗಾಧತೆಗೆ ಮಿತಿ ಇಲ್ಲ. ಎಷ್ಟೋ ಬಾರಿ ಒಂಟಿಯಾಗಿ ಪ್ರಯಾಣ ಮಾಡಿದ್ದರೂ, ಸ್ನೇಹಿತರ ಮತ್ತು ಕುಟುಂಬದ ಜೊತೆ ಪ್ರವಾಸ ಹೋದಾಗಲೂ ಸಹ ನನಗಾಗಿ ಸ್ವಲ್ಪ ಸಮಯವನ್ನು ಎತ್ತಿಟ್ಟುಕೊಳ್ಳುತ್ತೇನೆ. ಎಲ್ಲರ ಅಭಿರುಚಿ, ಆಸಕ್ತಿಯು ಒಂದೇ ಆಗಿರುವುದಿಲ್ಲ ಹಾಗಾಗಿ ನನಗೆ ವೈಯಕ್ತಿಕವಾಗಿ ಆಸಕ್ತಿ ಇರುವ ಜಾಗಗಳನ್ನು ನೋಡಲು ವಿಷಯಗಳನ್ನು ತಿಳಿದುಕೊಳ್ಳಲು ಕುಟುಂಬದ ಜೊತೆಯೊಳಗೂ ಸೋಲೋ ಪ್ರವಾಸವೊಂದು ಇದ್ದೇ ಇರುತ್ತದೆ. ಇದಕ್ಕೆ ನಾನಿಟ್ಟ ಹೆಸರು "ಜೊತೆಯೊಳಗೂ ಒಂದು ಸೋಲೋ ಟೈಮ್" .ಇಂತಹ ಒಂದು ಪ್ರವಾಸದಲ್ಲಿ ಸಿಕ್ಕ ಮರೆಯಲಾರದ ನೆನಪು ಎಂದರೆ ಅಲೆಕ್ಸ್ ಎನ್ನುವ ಪೊಲೀಸ್ ಅಧಿಕಾರಿ. ಆತ ಇಂಗ್ಲೆಂಡಿನ ಕೇಂಬ್ರಿಡ್ಜ್ ನಲ್ಲಿ ಪೊಲೀಸ್ ಅಧಿಕಾರಿ. ಮಕ್ಕಳ ಹಕ್ಕುಗಳ ಬಗ್ಗೆ ಪಿ.ಎಚ್‌ಡಿ ಕೂಡ ಮಾಡುತ್ತಿದ್ದರು. ಎಲ್ಲಿ ಹೋದರೂ ಮಕ್ಕಳ ಮತ್ತು ಮಹಿಳೆಯರ ಬಗ್ಗೆ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ತಿಳಿದುಕೊಳ್ಳುವುದು ಅದರ ಬಗ್ಗೆ ಕೆಲಸ ಮಾಡಿದವರನ್ನು, ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡುವುದು, ವೃತ್ತ ಪತ್ರಿಕೆಗಳನ್ನು ಓದುವುದು, ಸ್ಥಳೀಯ ಜನರನ್ನು ಮಾತನಾಡಿಸುವುದು, ಪುಸ್ತಕದಂಗಡಿಗೆ ಹೋಗುವುದು ನನ್ನ ಇಷ್ಟದ ಹವ್ಯಾಸ. ಆ ದಿನ ಲಂಡನ್ನಿನ ಬೀದಿಯಲ್ಲಿ ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿಟ್ಟಿದ್ದ ನವಜಾತ ಶಿಶುವಿನ ವಿಷಯವನ್ನು ಪತ್ರಿಕೆಯಲ್ಲಿ ಓದಿದ್ದೆ.

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

Image
  ಬಯಲು ಸೀಮೆಯ ಎಲ್ಲರ ಬಾಯಲ್ಲೂ ಕುಂದಾಪುರ ಹೆಸರು ಹೊರಳುವಂತೆ ಮಾಡಿದ್ದ ಚೈತ್ರ ಕುಂದಾಪುರ ಈಗ ವಂಚನೆ ಪ್ರಕರಣದಲ್ಲಿ ಆರೋಪಿ. ಆಕೆ ಅಪರಾಧಿ ಹೌದೋ ಅಲ್ಲವೋ ಎನ್ನುವುದನ್ನು ನ್ಯಾಯಾಲಯ ತೀರ್ಮಾನ ಮಾಡಲು ಸಮಯವಿದೆ. ಆದರೆ ಆಕೆಯ ಮಾತುಗಾರಿಕೆ ಮತ್ತು ಅದರ ವಿಷಯ ಎಲ್ಲವನ್ನೂ ಕಂಡ ಜನಮಾನಸ ಆಗಲೇ ಅವಳನ್ನು ಅಪರಾಧಿ ಸ್ಥಾನದಲ್ಲಿ ಅನಾಯಸವಾಗಿ ನೋಡುತ್ತಿದೆ. ವಿದ್ಯುನ್ಮಾನ ಮಾಧ್ಯಮಗಳು ಆಗಲೇ ನ್ಯಾಯಾಲಯಕ್ಕೆ ಸಡ್ಡು ಹೊಡೇದ ಪ್ರಕ್ರಿಯೆಯನ್ನು ಶುರು ಮಾಡಿವೆ. ಇವೆಲ್ಲದರ ನಡುವೆ ಚೈತ್ರ ಎನ್ನುವ ಹೆಣ್ಣು ಮಗಳು ಹಲವಾರು ಯುವತಿಯರಿಗೆ ಪಾಠದ ಹಾದಿ ತೋರಿದ್ದು ಮಾತ್ರ ಸುಳ್ಳಲ್ಲ. ಈಗ್ಗೆ ನಾಲ್ಕು ವರ್ಷಗಳ ಹಿಂದೆ ಸಮಿತಿಯ ಟೇಬಲ್ ಮುಂದೆ ಬಂದು ನಿಂತ ಯುವತಿಗೆ ಇನ್ನೂ 18 ತುಂಬಬೇಕಿತ್ತು. ಕೈ ಪೂರ್ತೀ ಸಿಂಹದ ಮುಖವುಳ್ಳ ಹನುಮಂತನ ಚಿತ್ರದ ಹಚ್ಚೆ. ಸ್ಪಷ್ಟ, ಸುಲಲಿತ ಕನ್ನಡ ಮಾತು. ಧರ್ಮ ಸಂರಕ್ಷಣೆ ಎನ್ನುವ ಅಫೀಮು ಕುಡಿಸಿದ್ದು ಅವಳ ದೊಡ್ಡಪ್ಪನ ಮಗ. ಇವಳೂ ಎಲ್ಲರ ಜೊತೆ ಊರೂರು ಸುತ್ತಿದಳು. ಹುಡುಗರ ಜೊತೆ ಜೈಕಾರ ಕೂಗುತ್ತಿದ್ದವಳಿಗೆ ಹೊತ್ತುಗೊತ್ತು ಇಲ್ಲದ ಜೀವನ ಅಭ್ಯಾಸ ಆಯಿತು. ತಂದೆ ಇದನ್ನು ವಿರೋಧಿಸಿ 10ನೆಯ ತರಗತಿಯನ್ನಾದರೂ ಓದಲಿ ಎನ್ನುವ ಆಸೆಯಿಂದ ಕೋಣೆಯೊಳಗೆ ಕೂಡಿ ಹಾಕುತ್ತಿದ್ದ. ಇವಳ ಧರ್ಮದಮಲು ಇಳಿಯಲೊಲ್ಲದು, ಅದಕ್ಕೆ ಸಾಥ್ ಕೊಡುತ್ತಿದ್ದ ಹುಡುಗರು. ಪದೇಪದೇ ಮನೆ ಬಿಟ್ಟು ಅವರೊಡನೆ ಹೋಗುತ್ತಿದ್ದಳು. ಮನೆಯವರು ಸೇರಿಸಿಕೊಳ್ಳದಾದರು. ಪ್ರೀತಿ ಮಾ

Message me for the book

Image
  "ಕಂಡಷ್ಟೂ ಪ್ರಪಂಚ " ಇದು ದೇಶ ವಿದೇಶಗಳ ವಿವಿಧ ಭಾಗಗಳಿಗೆ ಭೇಟಿ ಇತ್ತ ನನ್ನ ಪ್ರವಾಸ ಅನುಭವ ಕಥನ. ನಿಮ್ಮ ಶಾಲಾ ಕಾಲೇಜಿನ ಗ್ರಂಥಾಲಯಗಳಿಗೆ ತರಿಸಲು ವಿಳಾಸ ಮೆಸೇಜ್ ಮಾಡಿ. ಪುಸ್ತಕದ ಬೆಲೆ 300/- ರೂ Kandashtoo Mancha" This is my travel experience story of visiting different parts India and many other countries, written in Kannada language  To place order for the library of your school and colleges please message me the address. The price of the book is Rs. 300/-

ಕಂಡಷ್ಟೂ ಪ್ರಪಂಚ release

Image
  ಜೇನ್ ಡೀಮ್ಡ್ ಯೂನಿವರ್ಸಿಟಿಯ ರಿಜಿಸ್ಟ್ರಾರ್ Dr. ಜಿತೇಂದ್ರ ಶಾ, ಪ್ರೊ.ಗೀತಾ ಮಧುಸೂದನ್ ಮತ್ತು ಪ್ರೊ. ರಾಜೇಶ್ವರಿ ವೈ ಎಂ ಅವರುಗಳು ನೂರು ವಿದ್ಯಾರ್ಥಿಗಳ ಎದುರು ನನ್ನ ಪುಸ್ತಕ ಕಂಡಷ್ಟೂ ಪ್ರಪಂಚ ಪುಸ್ತಕವನ್ನು ಬಿಡುಗಡೆ ಮಾಡಿದರು. (12-08-2023) ಖುಷಿಯ ವಿಷಯ ಎಂದರೆ ಡಾ.ಶಾ ಅವರು " ನನಗೆ ಕನ್ನಡ ಓದಲು ಇನ್ನೂ ಬರುವುದಿಲ್ಲ ಆದರೆ ಓದಬಲ್ಲ ನನ್ನ ಸ್ನೇಹಿತರಿಗಾಗಿ ಈ ಪುಸ್ತಕ ಕೊಳ್ಳುತ್ತೇನೆ" ಎಂದದ್ದು ಮತ್ತು Ragging ಕಾನೂನು ಬಗ್ಗೆಯ ಉಪನ್ಯಾಸದ ನಂತರ ವಿದ್ಯಾರ್ಥಿಗಳು ಪ್ರವಾಸದ ಆಸಕ್ತಿ ಮತ್ತು ಅಭಿರುಚಿಯ ಬಗ್ಗೆ ನಾನೇ ಸಾಕು ಎಂದು ಹೊರಟು ಬರುವವರೆಗೂ ಚರ್ಚೆ ಮಾಡಿದ್ದು.😍 ನಿಮಗೆ ಪುಸ್ತಕ ಬೇಕಿದ್ದಲ್ಲಿ ನಿಮ್ಮ ವಿಳಾಸ ಮೆಸೇಜ್ ಮಾಡಿ. ಬೆಲೆ ರೂ.300/-

ಕಂಡಷ್ಟೂ ಪ್ರಪಂಚ ಕಂಡ ಬಾಗೆ

Image
  ದಿಗ್ಗಜ ಸಾಹಿತಿ Dr. ಶಾಂತಾ ನಾಗರಾಜ್ ಅವರು " ಕಂಡಷ್ಟೂ ಪ್ರಪಂಚ " ಪುಸ್ತಕದ ಬಗ್ಗೆ 👇 ಹೀಗೆ ಬರೆದಿದ್ದಾರೆ. Feeling ಖುಷಿ ಖುಷಿ....ನಿಮ್ಮ ಪ್ರತಿಗಾಗಿ ವಿಳಾಸ ಮೆಸೇಜ್ ಮಾಡಿ. ಬೆಲೆ ರೂ 300/- " - ‘ ಕಂಡಷ್ಟೂ ಪ್ರಪಂಚ ‘ ಸಕತ್ತಾಗಿಯೇ ಪ್ರಪಂಚ ದರ್ಶನ ಮಾಡಿಸಿತು. ಅದೆಷ್ಟೊಂದು ವಿಚಾರಗಳಲ್ಲಿ ಬೆರಗುಗೊಂಡೆನೆಂದರೆ , ಅದರ ಪಟ್ಟಿ ಮಾಡಬೇಕು.  ನಿಮ್ಮ ಜೀವನೋತ್ಸಾಹಕ್ಕೆ ನಿಮ್ಮ ಚಾಲನ ಮತ್ತು ಧಾರಣ ಶಕ್ತಿಗೆ ನಿಮಗಿರುವ ಅಮೋಘವಾದ ಕುತೂಹಲಗಳಿಗೆ ನಿಮ್ಮ ಬರವಣಿಗೆಯ ಚೆಂದದ ಶೈಲಿಗೆ ಅತ್ಯಂತ ಸಣ್ಣವಿಷಯವೆನಿಸುವುದನ್ನೂ ಸ್ವಾರಸ್ಯವಾಗಿ ವಿಸ್ತರಿಸುವ ನಿಮ್ಮ ಕಲ್ಪನಾ ಸಾಮರ್ಥ್ಯಕ್ಕೆ ಎಲ್ಲಕ್ಕೂ ನಮೋನಮಃ ಎನ್ನದೇ ಬೇರೆ ದಾರಿಯೇ ನನಗೆ ಕಾಣುತ್ತಿಲ್ಲ.  ನನ್ನ ಇನ್ನೊಂದು ಅನುಭವವನ್ನು ಇಲ್ಲಿ ಹೇಳಲೇ ಬೇಕು. ಒಂದು ಪ್ರಪಂಚದ ಮ್ಯಾಪ್ ಇಟ್ಟುಕೊಂಡು, ಈ ಪುಸ್ತಕದಲ್ಲಿನ ಅಧ್ಯಾಯಗಳ ಊರನ್ನು ಗುರುತಿಸುತ್ತಾ , ಒಂದಕ್ಕೊಂದು ಗೆರೆ ಎಳೆದು ಸೇರಿಸಿದರೆ , ಕೊನೆಯ ಅಧ್ಯಾಯ ಬರುವಹೊತ್ತಿಗೆ ಮ್ಯಾರಿನ ತುಂಬಾ ಗೀಚುಗಳಾಗಿ , ಅದರೊಳಗಿನಿಂದ ಸೈಕಲ್ ರಿಕ್ಷಾ ಹಿಡಿದ ಅಂಜಲಿ ರಾಮಣ್ಣ ನಸುನಗುತ್ತಿರುತ್ತಾರೆ ! ಇಡೀ ಪುಸ್ತಕ ಓದಿದ ಮೇಲೆ ರೋಲರ್ ಕೋಸ್ಟರ್ ನಲ್ಲಿ ಅಡ್ಡಡ್ಡ ಉದ್ದುದ್ದ ತಿರುಗಿದಂತಾಗಿ ತಲೆ ಸುತ್ತುವುದು ಖಂಡಿತಾ! ನಿಮ್ಮ ತುಂಟ ಮನ ಬೇಕೆಂದೇ ಚಾಪ್ಟರ್ ಗಳನ್ನು ಹೀಗೆ ಜೋಡಿಸಿರಬಹುದೆನ್ನುವ ಅನುಮಾನ ನನಗೆ.  ಅಭಿನಂದನೆಗಳು ಮತ್ತು ಪ್ರೀ

ಮತ್ತೊಮ್ಮೆ ಕಂಡಷ್ಟೂ ಪ್ರಪಂಚ ಬಗ್ಗೆ

Image
  ಲಿಮ್ಕಾ ದಾಖಲೆ ಹೊಂದಿರುವ ಸಾಹಿತಿಗಳ ಕುಟುಂಬದ ಉದಯ್ ಕುಮಾರ್ ಹಬ್ಬು ಅವರು ನನ್ನ ಕಂಡಷ್ಟೂ ಪ್ರಪಂಚ ಪುಸ್ತಕದ ಬಗ್ಗೆ ಹೀಗೆ ಬರೆದಿದ್ದಾರೆ.... "ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ವಕೀಲರು, ಅಂಲಣಕಾರರು ಮತ್ತು ಲೇಖಕರೂ ಆದ ಅಂಜಲಿ ರಾಮಣ್ಣ ಈ ವಿಶೇಷ್ಟವಾದ ಪ್ರವಾಸಿ ಕಥನ ಸಾಹಿತ್ಯ ಕೃತಿಯನ್ನು ಕಳಿಸಿದ್ದಾರೆ‌ ವಿಶೇಷ್ಟ ಯಾಕೆ ಎಂದರೆ ಇತರ ಪ್ರವಾಸಿ ಕಥನಗಳಂತೆ ಒಂದೇ ದೇಶದ ಪ್ರವಾಸ ಕಥನವಲ್ಲ. ಇಡೀ ಪ್ರಪಂಚಾದ್ಯಂತ ಇರುವ ವಿವಿಧ ದೇಶಗಳ ಹಾಗೂ ನಮ್ಮ‌ದೇಶದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಹೋಗಿ ತನ್ನದೆ ರೀತಿಯಿಂದ ಆ ಸ್ತಳಗಳನ್ನು ವೀಕ್ಷಿಸಿ ಅಲ್ಲಿನ ವಿಶಿಷ್ಟತೆಗಳ ಕುರಿತು ತನ್ನದೆ ಅನುಭವದ ಮಾತುಗಳಲ್ಲಿ ಕಾವ್ಯಮಯವಾಗಿ ಅಭಿವ್ಯಕ್ತಿಸುವುದು. ಇದರಿಂದ ಓದುಗರಿಗೆ ಆಗುವ ಪ್ರಯೋಜನವೇನೆಂದರೆ ಆ ತಾಣಗಳಿಗೆ ಹೋಗಿನೋಡುವ ಪ್ರೇರಣೆ ನೀಡುತ್ತದೆ. ಅಷ್ಟೆಲ್ಲ ದೇಶಗಳಿಗೆ ನಮ್ಮದೆ ದೇಶದ ಪ್ರವಾಸಿ ತಾಣಗಳಿಗೆ ಹೋಗಲು ಸಾಧ್ಯವಿಲ್ಲದಿರುವವರಿಗೆ  ಮನೆಯಲ್ಲೆ ಕುಳಿತು ಆ ಸ್ಥಳಗಳ ಸ್ವಾರಸ್ಯಕರ ಮಾಹಿತಿಗಳನ್ನು ಆಸ್ವಾದಿಸಿ ನಮ್ಮ ಜ್ಞಾನಸಿಂಧು ಕೋಶಕ್ಕೆ ಸೇರಿಕೊಂಡ ಧನ್ಯತೆ ನಮ್ಮದಾಗುತ್ತದೆ ಅಂಜಲಿಯು ಏಕಾಂಗಿಯಾಗಿ ತಾನು ಓದಿದ ಸ್ಥಳಗಳಿಗೆ  ಪ್ರವಾಸದ ಅಚ್ಚುಕಟ್ಟು ಯೋಜನೆಗಳೊಂದಿಗೆ ಹೊರಟುಬಿಡುತ್ತಾರೆ. ಅವರು ಈ ಪುಸ್ತಕದ ಕೊನೆಯ ಅಧ್ಯಾಯದಲ್ಲಿ ದೇಶ ವಿದೇಶಗಳಿಗೆ ಪ್ರವಾಸ ತಾಣಗಳಿಗೆ ಹೋಗುವವರಿಗೆ ಖಚಿತವಾದ ಮಾರ್ಗದರ್ಶಿ ಸಲಹೆಗಳನ್ನು ತಮ್ಮ ಪ್ರವಾಸಗಳ ಅನುಭವ