ನೀನೀಗ ನನ್ನ ಜೊತೆ ಓಡಿ ಬರದಿದ್ದರೆ, ಮದುವೆ ಆಗದಿದ್ದರೆ, ಮಲಗದಿದ್ದರೆ, ದುಡ್ಡು ಕೊಡದಿದ್ದರೆ, ಸಾಲ ಹಿಂದಿರುಗಿಸು ಅಂತ ಕೇಳಿದರೆ.....etc etc ಕಾರಣ ಕೊಟ್ಟು; ನಾನು ನಿನ್ನ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀನಿ - ಎನ್ನುವ ಬೆದರಿಕೆಗೆ ಬಗ್ಗಬೇಡಿ, ನಿಮ್ಮ ತಪ್ಪು ಇಲ್ಲದಿರುವಾಗ ಹೆದರಬೇಡಿ...ಸಾಯುವವನು ಸಾಯಲಿ !! ಹೀಗೆ ನಾನು ನೂರು ಬಾರಿ ಹೇಳುತಿರ್ತೀನಿ, ಒಂದಷ್ಟು ಬಾರಿ ಬರೆದಿದ್ದೀನಿ ಕೂಡ. ಈಗ ನೋಡಿ ಶಂಖದಿಂದ ಬಿದ್ದಿದೆ ತೀರ್ಥ. ಕರ್ನಾಟಕ ಉಚ್ಚನ್ಯಾಯಾಲಯವು, CRIMINAL PETITION No.7001/2019 Noushad Ahmed Vs State by Cantonment Railway Police Station ಈ ಪ್ರಕರಣದಲ್ಲಿ; ಆತ್ಮಹತ್ಯೆ ಮಾಡಿಕೊಂಡವನು, ಹೆಸರು ಬರೆದಿದ್ದಾನೆ ಎನ್ನುವ ಕಾರಣಕ್ಕೆ ಆ ವ್ಯಕ್ತಿ ತಪ್ಪಿತಸ್ಥ ಎಂದಲ್ಲ. ಹಾಗೆಯೇ ಅವನನ್ನು ಅರೆಸ್ಟ್ ಮಾಡುವ ಅಗತ್ಯವೂ ಇಲ್ಲ ಆದರೆ ತನಿಖೆ ಮಾಡಬಹುದು ಅಷ್ಟೇ ಎನ್ನುವ ತೀರ್ಪು ಕೊಟ್ಟಿದೆ. ಇನ್ನೂ ಓದಿಗೆ ಈ ಲಿಂಕ್ ಒತ್ತಿ https://udayakala.news/how-to-handle-threat-of-suicide-be-addressed/ #FamilyCourtಕಲಿಕೆ