High court on Suicide/ಆತ್ಮಹತ್ಯೆ ಕಾನೂನು
ನೀನೀಗ ನನ್ನ ಜೊತೆ ಓಡಿ ಬರದಿದ್ದರೆ, ಮದುವೆ ಆಗದಿದ್ದರೆ, ಮಲಗದಿದ್ದರೆ, ದುಡ್ಡು ಕೊಡದಿದ್ದರೆ, ಸಾಲ ಹಿಂದಿರುಗಿಸು ಅಂತ ಕೇಳಿದರೆ.....etc etc ಕಾರಣ ಕೊಟ್ಟು;
ನಾನು ನಿನ್ನ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀನಿ - ಎನ್ನುವ ಬೆದರಿಕೆಗೆ ಬಗ್ಗಬೇಡಿ, ನಿಮ್ಮ ತಪ್ಪು ಇಲ್ಲದಿರುವಾಗ ಹೆದರಬೇಡಿ...ಸಾಯುವವನು ಸಾಯಲಿ !!
ಹೀಗೆ ನಾನು ನೂರು ಬಾರಿ ಹೇಳುತಿರ್ತೀನಿ, ಒಂದಷ್ಟು ಬಾರಿ ಬರೆದಿದ್ದೀನಿ ಕೂಡ.
ಈಗ ನೋಡಿ ಶಂಖದಿಂದ ಬಿದ್ದಿದೆ ತೀರ್ಥ.
ಕರ್ನಾಟಕ ಉಚ್ಚನ್ಯಾಯಾಲಯವು,
CRIMINAL PETITION No.7001/2019
Noushad Ahmed Vs State by
Cantonment Railway Police Station
ಈ ಪ್ರಕರಣದಲ್ಲಿ;
ಆತ್ಮಹತ್ಯೆ ಮಾಡಿಕೊಂಡವನು, ಹೆಸರು ಬರೆದಿದ್ದಾನೆ ಎನ್ನುವ ಕಾರಣಕ್ಕೆ ಆ ವ್ಯಕ್ತಿ ತಪ್ಪಿತಸ್ಥ ಎಂದಲ್ಲ. ಹಾಗೆಯೇ ಅವನನ್ನು ಅರೆಸ್ಟ್ ಮಾಡುವ ಅಗತ್ಯವೂ ಇಲ್ಲ ಆದರೆ ತನಿಖೆ ಮಾಡಬಹುದು ಅಷ್ಟೇ ಎನ್ನುವ ತೀರ್ಪು ಕೊಟ್ಟಿದೆ.
ಇನ್ನೂ ಓದಿಗೆ ಈ ಲಿಂಕ್ ಒತ್ತಿ https://udayakala.news/how-to-handle-threat-of-suicide-be-addressed/
#FamilyCourtಕಲಿಕೆ
ಖಂಡಿತಾ ಇದೊಂದು ಮುಖ್ಯ ವಿಚಾರ. ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು
ReplyDelete