Sedition in BNS 2023
ದೇಶದ್ರೋಹ ಎನ್ನುವುದು ಇಂಡಿಯನ್ ಪೀನಲ್ ಕೋಡ್ನ ಸೆಕ್ಷನ್ 124-A ಇದರ ಅಡಿಯಲ್ಲಿ ಘನಘೋರ ಅಪರಾಧ ಆಗಿತ್ತು.
ಇದೇ ಜುಲೈ 1ರಿಂದ ಜಾರಿಗೆ ಬರಲಿರುವ ಭಾರತೀಯ ನ್ಯಾಯ ಸಂಹಿತಾ, 2023 ರಲ್ಲಿ ಈ ಅಪರಾಧವನ್ನು (ಆ ಸೆಕ್ಷನ್ ಅನ್ನು) ತೆಗೆದು ಹಾಕಲಾಗಿದೆ.
ಹಾಗಾದರೆ ಇನ್ನು ಮುಂದೆ ದೇಶದ ಅಖಂಡತೆ, ಘನತೆ, ಮತ್ತು ಸುರಕ್ಷತೆಯ ಬಗ್ಗೆ ಬಾಯಿಗೆ ಬಂದದ್ದೆಲ್ಲಾ ಮಾತನಾಡಿ ಅರಗಿಸಿಕೊಳ್ಳಬಹುದು ಅಂತಲ್ಲ!
ಹೊಸ ಕಾನೂನಿನ ಸೆಕ್ಷನ್ 152 ರ ಅಡಿಯಲ್ಲಿ ಈ ದೇಶದ ಸಾರ್ವಭೌಮತ್ವಕ್ಕೆ, ಸುರಕ್ಷತೆಗೆ ಧಕ್ಕೆ ತರುವಂತಹ , ಅರಾಜಕತೆ ಉಂಟು ಮಾಡಬಹುದಾದಂತಹ ಭಾಷಣಗಳು, ಮಾತುಗಳು, ವಾಟ್ಸ್ಯಾಪ್ ಸಂದೇಶಗಳು, ಸಾಮಾಜಿಕ ಜಾಲತಾಣಗಳ ಪೋಸ್ಟಗಳು ಮತ್ತಿತರೆ ಚಟುವಟಿಕೆಗಳನ್ನು (ಸರಿಸುಮಾರು ಭಯೋತ್ಪಾದನ ಚಟುವಟಿಕೆ ಎಂದು ಪರಿಗಣಿಸಿ) ಅಪರಾಧ ಎಂದು ಗುರುತಿಸಲಾಗಿದೆ.
ಜಾಮೀನು ರಹಿತ ಈ ಅಪರಾಧಕ್ಕೆ 7 ವರ್ಷ ಜೈಲುವಾಸದಿಂದ ಜೀವಾವಧಿ ಶಿಕ್ಷೆ ಕೂಡ ಇದೆ.
ಹಾಗಂತ ದೇಶದಲ್ಲಿ ನಡೆಯುವ ತಪ್ಪುಗಳೆಡೆಗೆ ಪ್ರಶ್ನೆ ಒಡ್ಡುವುದೇ ಅಪರಾಧ ಅಲ್ಲ. ಸರ್ಕಾರ ಮತ್ತು ದೇಶ ಇವರೆಡರ ನಡುವಿನ ವ್ಯತ್ಯಾಸ ತಿಳಿದುಕೊಂಡು ನಮ್ಮ ಖಂಡನೆ ಯಾವುದರ ಕಡೆಗೆ ಇರಬೇಕು ಮತ್ತು ’ಹೇಗೆ’ ಇರಬೇಕು ಎನ್ನುವುದನ್ನು ಅರ್ಥ ಮಾಡಿಕೊಂಡು ಘನತೆಯಿಂದ ಕಾರ್ಯ ನಿರ್ವಹಿಸಬೇಕು ಅಷ್ಟೇ.
ಉದಾಹರಣೆಗೆ, ತೆರಿಗೆಯಿಂದ ಬೇಸತ್ತು ಕೀನ್ಯಾ ದೇಶದ ಪ್ರಜೆಗಳು ಅವರ ಸಂಸತ್ತಿಗೆ ಬೆಂಕಿ ಹಚ್ಚಿದರು ಎನ್ನುವ ಸುದ್ದಿ ಪ್ರಕಟ ಆಗಿದೆ. ಇದನ್ನು ನೋಡಿ ತೆರಿಗೆದಾರನೊಬ್ಬ ’ನಮ್ಮಲ್ಲೂ ಹೀಗೇ ಮಾಡಬೇಕು ಆದಾಯ ತೆರಿಗೆಯಿಂದ ಬೇಸತ್ತಿದ್ದೇವೆ’ ಎಂದು ಯಾವುದೇ ಸಾರ್ವಜನಿಕ (ಎಲೆಕ್ಟ್ರಾನಿಕ್ ಮಾಧ್ಯಮ ಸೇರಿದಂತೆ) ವೇದಿಕೆಯಲ್ಲಿ ಒಂದು ಸಂದೇಶವನ್ನು ರವಾನಿಸಿ ಅದರಿಂದ ಉತ್ತೇಜಿತಗೊಂಡು ಯಾರಾದರೂ ಇಂತಹ ಅಚಾತುರ್ಯದ ಕಾರ್ಯಕ್ಕೆ ಪ್ರಯತ್ನ ಪಟ್ಟರೆ ಹೀಗೆ ಹೇಳಿದವರಿಗೆ ಈ ಸೆಕ್ಷನ್ ಅಡಿಯಲ್ಲಿ ಶಿಕ್ಷೆ ಆಗಲಿದೆ.
#BNS
#BhartiyaNyayaSa
nhita2023
ಕಾನೂನು ಹಾಗೂ ಕಾನೂನಿನ ಪರಿಷ್ಕೃತ ಆದೇಶಗಳ ಬಗ್ಗೆ ತಿಳಿಸುತ್ತಿರುವುದಕ್ಕೆ ಧನ್ಯವಾದಗಳು 🙏😊
ReplyDelete