Posts

Showing posts from March, 2025

ಅವಳ ಇವಳ ಸುತ್ತ - Book read

Image
  ಪುಸ್ತಕದ ಹೆಸರು : " ಅವಳ ಇವಳ ಸುತ್ತ " ಲೇಖಕಿ : ಎಸ್ ಸುಶೀಲ ಚಿಂತಾಮಣಿ ಸಪ್ನಾ ಬುಕ್ ಹೌಸ್ ಪ್ರಕಟಣೆ  ಮನುಷ್ಯ ನೆಮ್ಮದಿಯಾಗಿ ಇದ್ದಾನೆ ಎನ್ನಲು ಒಂದೇ ಕಾರಣ ಸಾಕು ಆದರೆ ಬದುಕಿನಲ್ಲಿಯ ಅಶಾಂತಿಗೆ ನಾನಾ ಸ್ವರೂಪಗಳು. ಅದರಲ್ಲೂ ಹೆಂಗಸರು ದಾಂಪತ್ಯದೊಳಗೆ ಕತ್ತು ಹಿಸುಕಿಕೊಳ್ಳುತ್ತಲೇ ಕೆಲವೊಮ್ಮೆ ಕಣ್ಣ ನೀರಿಗೂ ತಾವು ಕೊಡಲಾಗದೆ ಬದುಕುವ ಸ್ಥಿತಿ ಬರಹಕ್ಕೆ ನಿಲುಕದು.  ಲೇಖಕಿ ಶ್ರೀಮತಿ ಎಸ್ ಸುಶೀಲ ಚಿಂತಾಮಣಿ ಅವರು ರಾಜ್ಯದ ಹಿರಿಯ ವಕೀಲರು. ಮೀಡಿಯೇಷನ್ ಕೇಂದ್ರದ ಮುಖ್ಯ ಸಂಧಾನಕಾರರು. ತಾವು ಕಂಡ, ನಿರ್ವಹಿಸಿದ ಪ್ರಕರಣಗಳನ್ನು 38 ಅಧ್ಯಾಯಗಳಲ್ಲಿ ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಅಧ್ಯಾಯಗಳ ಸಂಕ್ಷಿಪ್ತತೆ ನೋಡುವಾಗ ಅನಿಸಿದ್ದು ' ನೋವುಗಳನ್ನು ನಲಿವಿನಷ್ಟು ವಿಸ್ತರಿಸಲು ಅಕ್ಷರಗಳು ಶಕ್ಯವಲ್ಲ'. ಈ ಪುಸ್ತಕದಲ್ಲಿ ಪದಗಳಿಗಿಂತ ಮೌನದ್ದೇ ಹೆಚ್ಚು ಕೆಲಸ. ಓದುಗನ ಕೊರಳುಬ್ಬಿ ಬರದಿದ್ದರೆ ಅಕ್ಷರತೆಯ ಮೇಲಾಣೆ.  ಪ್ರತೀ ಹೆಣ್ಣಿನ ಜೀವನ ಯಾನವನ್ನು ಕೈಯಲ್ಹಿಡಿದ ಪುಸ್ತಕದಿಂದ ಕಣ್ಣಿನ ಮೂಲಕವೇ ನಮ್ಮದೇ ಪ್ರಯಾಣವಾಗಿಸಿಕೊಳ್ಳುವ ನಿಡಿದಾದ ನಿಟ್ಟುಸಿರು ' ಅವಳ ಇವಳ ಸುತ್ತ '. ಲೇಖಕಿಯೇ ಹೇಳಿರುವಂತೆ ' ಇದು ಹೆಣ್ಣು ಮಕ್ಕಳ ಸುತ್ತಲಿನ ಕೆಲವು ಘಟನೆಗಳ ಸಂಕಲನ. ಈ ಘಟನೆಗಳಲ್ಲಿ ಹಲವು ನಮ್ಮ ನಿಮ್ಮ ಕಣ್ಣಿಗೆ ಬಿದ್ದ ಅಥವಾ ನಮ್ಮ ನಿಮ್ಮ ಜೀವನದ ಘಟನೆಗಳೇ ಹೌದೇನೋ ಎನ್ನಿಸಲೂಬಹುದು ಎಲ್ಲೋ ಒಂದು ಕಡೆ ಇವು...

ಕಂಡಷ್ಟೂ ಪ್ರಪಂಚ - review

Image
  ಪುಸ್ತಕ ಪರಿಚಯ ೧೬೨: ಕಂಡಷ್ಟೂ ಪ್ರಪಂಚ ಲೇಖಕರು: ಅಂಜಲಿ ರಾಮಣ್ಣ ಪುಸ್ತಕಗಳು ಆಗಷ್ಟೇ ಗಮನ ಸೆಳೆಯುತ್ತಿದ್ದ ಬಾಲ್ಯದ ದಿನಗಳು ಎಂಬತ್ತರ ದಶಕ, ಆಗ "ಸುಧಾ" ವಾರಪತ್ರಿಕೆಯಲ್ಲಿ ಕನ್ನಡದ ಹಿರಿಯ ಲೇಖಕಿ ನೀಳಾದೇವಿಯವರ ಅಮೆರಿಕಾ ಪ್ರವಾಸ ಕಥನ ಧಾರಾವಾಹಿಯಾಗಿ ಬರುತ್ತಿತ್ತು (ಅದೂ ಮಕ್ಕಳ ಪುಟಗಳ ಆಸುಪಾಸಿನ ಪುಟಗಳಲ್ಲಿ). ಹೀಗಾಗಿ  ಗಮನ ಸೆಳೆದು ಓದಿಸಿಕೊಂಡ ಮೊದಲ ಪ್ರವಾಸ ಕಥನ ಅದು!!  ನಾವು ಕಂಡಿರದ ಇನ್ನೊಂದು ಸ್ಥಳಕ್ಕೆ ಭೇಟಿ ನೀಡಿ, ಆ ಪಯಣದ ಅನುಭವವನ್ನು ದಾಖಲಿಸಿ, ಓದುಗರರಲ್ಲಿ ಆಸಕ್ತಿ ಮೂಡಿಸಿ, ಅವರೂ ಆ ಪ್ರವಾಸ ಮಾಡುವಂತೆ ಪ್ರೇರೇಪಿಸುವುದಿರಲಿ, ಪ್ರವಾಸ ಮಾಡಲಾಗದಿದ್ದವರೂ ಮಾನಸಿಕವಾಗಿ ಆ ಅನುಭವವನ್ನು ಗಳಿಸುವಂತೆ ಮಾಡುವ ಈ ಸಾಹಿತ್ಯ ನಿಜಕ್ಕೂ ವಿಶಿಷ್ಟವೇ ಸರಿ.  ಪ್ರವಾಸ ಸಾಹಿತ್ಯದಲ್ಲಿ ನೋಡಿ ಅನುಭವಿಸಿದ್ದನ್ನು ಹಾಗೇ ದಾಖಲಿಸುವುದು ಒಂದು ಬಗೆ. ಪ್ರಸಿದ್ಧ ಸಾಹಿತಿಗಳಾದ ಗೊರೂರು, ಬೀಚಿ, ಟಿ.ಕೆ.ರಾಮರಾವ್, ಬಿ.ಜಿ.ಎಲ್ ಸ್ವಾಮಿ ಆ ದಿನಗಳಲ್ಲೇ ಇಂಥಹ ಕೃತಿ ನೀಡಿದವರು. ಇನ್ನು ಬರಿಯ ಪ್ರವಾಸದ ಅನುಭವಕ್ಕಷ್ಟೆ ಪ್ರಾಶಸ್ತ್ಯ ನೀಡದೆ ಆ ಸ್ಥಳಗಳ ಬಗೆಗೆ ಆಳವಾಗಿ ಕಲೆಹಾಕಿದ ಮಾಹಿತಿಗಳನ್ನೂ ಒಗ್ಗೂಡಿಸಿ, ಪ್ರವಾಸಾನುಭವದೊಂದಿಗೆ ಹೊಸೆದು ಓದುಗರರ ಆಸಕ್ತಿಯ ಆಯಾಮವನ್ನು ಹಿಗ್ಗಿಸಿ, ಓದಿದ ನಂತರವೂ ಇನ್ನಷ್ಟು ಅರಿಯಲು ಪ್ರಯತ್ನ ಪಡುವಂತೆ ಮಾಡುವುದು ಪ್ರವಾಸಿ ಸಾಹಿತ್ಯದ ಇನ್ನೊಂದು ಶೈಲಿ.  ನೇಮಿಚಂದ್ರ ಅವರ ಕೃತಿ...

ಆತ್ಮಹತ್ಯೆ ಬೆದರಿಕೆ - Law Point

Image
  ಅತುಲ್ ಸುಭಾಷ್ ಎನ್ನುವ ವ್ಯಕ್ತಿ ತನ್ನ ಹೆಂಡತಿ ಮತ್ತು ಆಕೆಯ ತಂದೆತಾಯಿ ಕೊಡುತ್ತಿರುವ ಕಾಟವನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎನ್ನುತ್ತಾ ನೂರಕ್ಕೂ ಹೆಚ್ಚು ಪುಟಗಳ ವಿವರ ಬರೆದಿಟ್ಟು ಅದರ ವೀಡಿಯೊ ಕೂಡ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿಷಯ ಇನ್ನೂ ಮರೆಯಲಾಗಿಲ್ಲ. ಮೇಲ್ನೋಟಕ್ಕೆ ಆತನ ಪತ್ನಿ ಅಪರಾಧಿಯಂತೆ ಕಾಣುತ್ತಿದ್ದಾಳೆ ಹಾಗಾಗಿ ತನಿಖೆ ಆಗಬೇಕು ಎಂದು ಉಚ್ಚನ್ಯಾಯಾಲವೂ ಹೇಳಿತ್ತು. ಈಗ ಆಕೆಗೆ ಜಾಮೀನು ಸಿಕ್ಕಿದೆ. ಈ ಘಟನೆಯ ನಂತರ ನೊಂದ ಗಂಡ ಎಂದು ಹೇಳಿಕೊಂಡು ಮತ್ತೊಂದು ಆತ್ಮಹತ್ಯೆಯೂ ಆಯಿತು. ವಿಷಾದವೆಂದರೆ ನಿನ್ನಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆಂಡತಿಯರನ್ನು ಬೆದರಿಸಲು ಗಂಡಂದಿರು ಇದನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ. ರೇವಮ್ಮನ ಅಣ್ಣನ ಮಗ ಜೈಲಿನಲ್ಲಿದ್ದಾನೆ. ಅವನ ಹೆಂಡತಿ ಜಾಮೀನು ಕೊಡಿಸಲು ಇವಳ ಹಿಂದೇರಿದ್ದಾಳೆ. ಆಗುವುದಿಲ್ಲ ಎಂದವಳಿಗೆ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ಒತ್ತಡ ಹಾಕುತ್ತಿದ್ದಾಳೆ. ಹೆದರಿದ ರೇವಮ್ಮ ಆಳುತ್ತಾ ಆಫೀಸಿಗೆ ಬಂದಿದ್ದಳು.  ನೀನೀಗ ನನ್ನ ಜೊತೆ ಓಡಿ ಬರದಿದ್ದರೆ, ಮದುವೆ ಆಗದಿದ್ದರೆ, ಮಲಗದಿದ್ದರೆ, ದುಡ್ಡು ಕೊಡದಿದ್ದರೆ, ಸಾಲ ಹಿಂದಿರುಗಿಸು ಅಂತ ಕೇಳಿದರೆ, ಬಾಡಿಗೆಗೆ ಮನೆ ಬಿಡಿಸಿದರೆ, ಕೆಲಸ ಕೊಡದಿದ್ದರೆ ಹೀಗೆ ಯಾವುದೇ ಕಾರಣವನ್ನು ಕೊಟ್ಟು “ನ...

ಪೊಲೀಸ್ ನೋಟಿಸ್ -- Law Point

Image
  ಕುಟುಂಬಗಳ ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದ ಪೂಜಾಳಿಗೆ ಸಿಕ್ಕಿದ್ದು ಸೋಮಾರಿ ಗಂಡ. ತನ್ನ ವಿದ್ಯೆಯೂ ಪಿಯುಸಿಯಷ್ಟೇ. ಸಾಲ ತಂದು ಬಾಡಿಗೆ ಮನೆಯ ಕೋಣೆಯಲ್ಲಿಯೇ ಬ್ಯೂಟಿಪಾರ್ಲರ್ ನಡೆಸುತ್ತಾ ಸಂಸಾರ ಸಾಕುತ್ತಿದ್ದಳು. ಇನ್ನು ಮೂರು ದಿನದಲ್ಲಿ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಬರಬೇಕು ಎನ್ನುವ ಫೋನ್ ಕರೆ ಬಂದಾಗ, ವಿವರ ಕೇಳಿದರೂ ಸಿಗದಿದ್ದಾಗ ಕಂಗಾಲಾಗಿ ಹೋದಳು. ಶ್ರೀಮತಿ ಮನೆಯಲ್ಲಿಯೇ ಸೀರೆ ವ್ಯಾಪಾರ ಮಾಡುತ್ತಿದ್ದಳು. ಸೀರೆ ಸಪ್ಲೈ ಮಾಡುತ್ತಿದ್ದವರ ಜೊತೆ ಹಣಕಾಸಿನ ವಿಷಯಕ್ಕೆ ವಾಗ್ವಾದವಾಗಿತ್ತು. ಅದಾದೊಂದೇ ವಾರದಲ್ಲಿ ಆತನ ಊರಿನ ಪೊಲೀಸ್ ಠಾಣೆಯಿಂದ ’ನಿಮ್ಮ ಮೇಲೆ ಎಫ್‍ಐಆರ್ ಆಗಿದೆ ಠಾಣೆಗೆ ಹಾಜರಾಗಬೇಕು’ ಎಂದಿದ್ದ ಪತ್ರವೊಂದು ಕೈಸೇರಿದಾಗ ಮನೆಯವರು ಇವಳನ್ನೇ ನಿಂದಿಸಿ ಆತಂಕ ಒಡ್ಡಿದ್ದರು. ಅವರುಗಳು ವ್ಯಾಪಾರ ಮಾಡಿಕೊಂಡಿರಬಹುದು, ಯಾರಿಗೋ ಜಾಮೀನು ನಿಂತಿರಬಹುದು, ಬ್ಯಾಂಕ್ ಸಾಲಕ್ಕೆ ಶ್ಯೂರಿಟಿ ಹಾಕಿರಬಹುದು, ಜಗಳ ಬಿಡಿಸಲು, ರಾಜಿ ನ್ಯಾಯ ಮಾಡಲು ಹೋಗಿದ್ದಿರಬಹುದು, ಆಸ್ತಿ ಕೊಳ್ಳುವಿಕೆ, ಕುಟುಂಬದ ಆಸ್ತಿ ಪಾಲುದಾರಿಕೆ ವಿಷಯಗಳು, ಚೆಕ್ ಬೌನ್ಸ್ ಆಗಿರುವಾಗ, ಸಾಲವನ್ನು ಹಿಂದಿರುಗಿ ಕೇಳಿರುವಾಗ, ಸಾಲ ತೀರಿಸಲು ಆಗದೆಯಿದ್ದಾಗ, ಉದ್ಯೋಗಸ್ಥ ಸ್ಥಳದಲ್ಲಿಯೋ, ಮನೆ ಮಾಲೀಕರ ಜೊತೆಯಲ್ಲಿಯೋ ನಡೆದ ಜಗಳ, ಗಾಡಿ ಓಡಿಸುತ್ತಿರುವಾಗ ರಸ್ತೆಯಲ್ಲಡ್ಡ ಬಂದವರ ಜೊತೆಗಾದ ವಾದವೂ ಇರಬಹುದು, ಯಾವುದೇ ವಿಷಯದಲ್ಲಿ ವ್ಯಕ್ತಿಯ ಮೇಲೆ ಪೊಲೀಸ್ ಠಾ...

ಆಧುನಿಕತೆ ಮತ್ತು ಸಮಾನತೆ - Oneindia Kannada

Image
 ಮಹಿಳಾ ದಿನಾಚರಣೆಗೆ Oneindia kannada ಈ ಅಂತರ್ಜಾಲ ಪತ್ರಿಕೆಯಲ್ಲಿ ಬರೆದ ಲೇಖನ. ಓದಿ ಅಭಿಪ್ರಾಯ ತಿಳಿಸಿ 🙏 *******  ಆಧುನಿಕ ಕುಟುಂಬವೆಂದರೆ ಯಾವುದು ಎನ್ನುವ ಪ್ರಶ್ನೆಯೊಂದಿಗೇ ಲಿಂಗತಾರತಮ್ಯದ ವಾಸ್ತವವನ್ನು ನಿಕಷಕ್ಕೆ ಒಳಪಡಿಸಬೇಕಿರುತ್ತದೆ. ಹೆಚ್ಚಿನ ವಿದ್ಯಾವಂತರ  ಕುಟುಂಬ ಆಧುನಿಕವೋ ಅಥವಾ ಆರ್ಥಿಕ ಸ್ಥಿತಿಯಲ್ಲಿ ಉತ್ತಮವಾಗಿರುವವರು ಆಧುನಿಕರೋ.   ವಿದ್ಯೆ ಮತ್ತು ಹಣಗಳಿಕೆಗೆ ಸಮನಾದ ಅನುಪಾತವಿಲ್ಲದ ಈ ಕಾಲಘಟ್ಟದಲ್ಲಿ ದಿನಮಾನಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮತ್ತು ಮಾನವೀಯ ಗುಣಗಳನ್ನು ಅಳವಡಿಸಿಕೊಂಡಿರುವ ಮನೋಭಾವವನ್ನು ’ಆಧುನಿಕತೆ ’ ಎಂದು ಒಪ್ಪಿಕೊಳ್ಳಲಾಗದ ದ್ವಂದ್ವದಲ್ಲಿ ಸಾಗುವಳಿ ಕಾಣುತ್ತಿದೆ ಇಂದಿನ ಸಮಾಜ.   ಸ್ನೇಹಿತೆಯೊಬ್ಬಳು ಪ್ರತಿಷ್ಟಿತ  ಸಂಸ್ಥೆಯಲ್ಲಿ ವಿಜ್ಞಾನಿ. ಗಂಡ ಭೌತಶಾಸ್ತ್ರದ ಪ್ರಾಧ್ಯಾಪಕ.  ಮಗ ವಿದೇಶದಲ್ಲಿ ಇಂಜಿನಿಯರ್. ಕಾಲೇಜು ಓದುತ್ತಿರುವ ಮಗಳು. ಮೆಟ್ರೋ ನಗರದಲ್ಲಿ ವಾಸವಿರುವ ಕುಟುಂಬ ಮೇಲ್ನೋಟಕ್ಕೆ ಆಧುನಿಕವೇ ಹೌದು. ಮಗಳನ್ನು ಮುಟ್ಟಿನ ದಿನದಲ್ಲಿ ಮನೆಯ ಮುಂಭಾಗದಲ್ಲಿ ಇರುವ ಕೋಣೆಯಲ್ಲಿ ಮೂರು ದಿನ ಇರಬೇಕು ಎನ್ನುವ ಆಚರಣೆಯನ್ನು ಆಕೆ ಮೈನೆರೆದ ದಿನದಿಂದಲೂ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.  ’ಇದೇನು ಈಗಿನ ಕಾಲದಲ್ಲೂ ಅದೂ ನಿಮ್ಮ ಮನೆಯಲ್ಲಿ ಹೀಗ್ಯಾಕೆ?’ ಎಂದು ಕೇಳಿದಾಗ ಬಂದ ಉತ್ತರ ’ನನಗದರಲ್ಲಿ ನಂಬಿಕೆಯಿಲ್ಲ ಆದರೇನು ಮಾಡಲಿ ಗಂಡ ಒ...

ಸವಾಲು ದಾಟುವ ಸಂಭ್ರಮ in VK

Image
  ಸವಾಲು ದಾಟುವ ಸಂಭ್ರಮ - ಮಹಿಳಾ ದಿನಾಚಾರಣೆಗಾಗಿ ಈ ದಿನದ ವಿಜಯಕರ್ನಾಟಕದಲ್ಲಿ ನಾ ಬರೆದ ಲೇಖನ ಹೇಗಿದೆ. ದಯವಿಟ್ಟು ಓದಿ 🙏 *******  ಅಭಿರುಚಿಯಿರುವವರಿಗೆ ಪ್ರವಾಸವೆನ್ನುವುದು ಆತ್ಮಸಾಂಗತ್ಯದ ಪರಮಾವಧಿ. ಅದರಲ್ಲೂ ಒಂಟಿಯಾಗಿ, ತಿಳಿಯದ ಜಾಗಕ್ಕೆ ಹೋಗುವ, ಅಪರಿಚಿತರೊಡನೆ ಒಡನಾಡುವ ಪ್ರವಾಸವೆಂದರೆ ಅಂತರಂಗಕ್ಕೆ ಪಯಣಿಸುವ ಕುಂಡಲಿನಿ ಯಾತ್ರೆಯಂತೆ.  ’ಜಗದ ಜಂಜಡ ಬೇಡ ನಿನಗೆ ನಾನು ಆಗುವೆ ಕಣ್ಣು ನಿನಗೆ’ ಎನ್ನುತ್ತಾ ಪಾರದರ್ಶಕ  ಗೆಳೆಯನೊಬ್ಬ ತನ್ನನ್ನೇ ಪ್ರೇಯಸಿಯಾಗಿಸಿಕೊಂಡಿದ್ದಾನೇನೋ ಎನ್ನುವಂತಹ ಅಮೂಲ್ಯ ಭಾವವನ್ನು ಅನುಭವಿಸಿದ್ದೇನೆ ಪ್ರವಾಸದಲ್ಲಿ.  ಉದ್ಯೋಗಸ್ಥ ಮಹಿಳೆ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗುವಾಗ ಇಲ್ಲದ ಕೌತುಕ, ಮೆಚ್ಚುಗೆ, ಒಂದು ತೂಕ ಅಸಹನೆ ಮಹಿಳೆಯೊಬ್ಬಳು ಒಂಟಿ ಪ್ರವಾಸಕ್ಕೆ ಹೊರಟಿದ್ದಾಳೆ ಎಂದರೆ ಇರುತ್ತದೆ ಎನ್ನುವುದು ಸೋಜಿಗ.  ಹಾಗೆ ಊರೂರು ಸುತ್ತುವವರು ತಮ್ಮ ಕುಟುಂಬದ ಹೊಣೆಯನ್ನು ಬದಿಗೊತ್ತಿರುವವರೋ, ಮತ್ತ್ಯಾವುದೇ ಯಾವುದೇ ಜವಾಬ್ದಾರಿ ಇಲ್ಲದವರೋ, ವಿಪರೀತ ದುಡ್ಡು ಇರುವವರಾಗಿರುತ್ತಾರೆ ಎನ್ನುವುದೇ ಬಹುಪಾಲು ಜನರ ಆಲೋಚನೆ.  ಆದರೆ ಎಲ್ಲವನ್ನೂ ನಿಭಾಯಿಸಿಯೂ ತನ್ನ ಆಸಕ್ತಿಗಾಗಿ ಸಮಯ ಮತ್ತು ಸೌಲಭ್ಯವನ್ನು ಒದಗಿಸಿಕೊಳ್ಳಲು ಮನಸ್ಸು ಮಾಡುವ ಮಹಿಳೆಯ ಬಗ್ಗೆ ಸಮಾಜಕ್ಕೆ ಅಸಡ್ಡೆ ಇರುವಂತೆಯೇ ತಮಗಾಗದ್ದನ್ನು ಮತ್ತೊಬ್ಬರು ಮಾಡುತ್ತಿದ್ದಾರೆ ಎನ್ನುವ ಖುಷಿ ಅನುಭವಿಸುವ...