Posts

Showing posts from April, 2025

Constitution ಮತ್ತು ಮಹಿಳಾ ಚಿಂತನೆ

Image
ಅಂಬೇಡ್ಕರ್ ಮತ್ತು ಮಹಿಳಾ ಚಿಂತನೆ ವಿಷಯದ ಬಗ್ಗೆ 14-04-2025 ಬೆಂಗಳೂರು ಆಕಾಶವಾಣಿಯಲ್ಲಿ ಆಡಿದ ಮಾತುಗಳು.

ಬಾಹ್ಯಾಕಾಶ ಯಾನ Book review

Image
  ಸುನೀತಾ ವಿಲಿಯಮ್ಸ್ ಆಕಾಶದಿಂದ ಭೂಮಿಗೆ ಹಿಂದಿರುಗಿ ಬಂದ ರೋಚಕ ಕ್ಷಣದಿಂದ ಬಾಹ್ಯಾಕಾಶ ವಿಷಯದಲ್ಲಿ ಎಲ್ಲರ ಆಸಕ್ತಿಯೂ ಹೆಚ್ಚಿದೆ ಎನ್ನುವುದರಲ್ಲಿ ಅನುಮಾನವಿಲ್ಲ.  ಬಾಹ್ಯಾಕಾಶ ಪರಿಕಲ್ಪನೆ ಮತ್ತು ವಿಸ್ತಾರ, ರಾಕೆಟ್ ವಿಜ್ಞಾನದ ಇತಿಹಾಸ, ಕಕ್ಷೆಯಲ್ಲಿ ತೂಕ ಇಲ್ಲದಿರುವಿಕೆ ಬಾಹ್ಯಾಕಾಶ ಸ್ಪರ್ಧೆ ಆರಂಭಿಕ ಕಾಲ ಹೇಗಿತ್ತು, ಮಾನವ ಸಹಿತ ಬಾಹ್ಯಾಕಾಶಯಾನಕ್ಕಾಗಿ ನೌಕೆಗಳ ಅಭಿವೃದ್ಧಿಯಾಗಿದ್ದು ಯಾವಾಗ ಮತ್ತು ಹೇಗೆ, ಬಾಹ್ಯಾಕಾಶದ ನಿಲ್ದಾಣ ಎಂದರೇನು, ಬಾಹ್ಯಾಕಾಶದಲ್ಲಿ ಆಘಾತಗಳು ಹೇಗೆ ಆಗುತ್ತವೆ, ಬಾಹ್ಯಾಕಾಶದ ಉಡುಪು ಏನಿರುತ್ತದೆ, ಅಂತರಿಕ್ಷದ ಕಡೆ ನಮ್ಮ ನಡೆಯ ಆರಂಭ ಮತ್ತು ಮುಂದುವರಿಕೆ ಹೇಗೆ, ಮೂಳೆ ಮತ್ತು ಸ್ನಾಯುಗಳ ಮೇಲೆ ಏನೆಲ್ಲಾ ಪರಿಣಾಮಗಳು ಆಗುತ್ತವೆ, ವಿಕಿರಣಗಳ ಪ್ರಭಾವ ಹೇಗೆ, ಬಾಹ್ಯಾಕಾಶದಲ್ಲಿ ಒಟ್ಟಾರೆ ಜೀವನ ಹೇಗಿರುತ್ತದೆ, ಅಂತರಿಕ್ಷದಲ್ಲಿ ಆಹಾರ ಏನು, ಬಾಹ್ಯಾಕಾಶ ನಿರ್ವಹಣೆ ಎಂದರೇನು ಅಂತರಿಕ್ಷದ ಪೂರ್ವ ತರಬೇತಿ ಹೇಗಿರುತ್ತದೆ, ಅಂತರಿಕ್ಷದಲ್ಲಿನ ಪ್ರಯೋಗಗಳು ಹೇಗಿರುತ್ತದೆ ಭವಿಷ್ಯದಲ್ಲಿ ಮಾನವ ಸಹಿತ ಗಗನಯಾನ ಸವಾಲುಗಳು ಮತ್ತು ಸಾಧ್ಯತೆಗಳು ಏನೆಲ್ಲ ಇರಬಹುದು ಹೀಗೆ ಅಂತರಿಕ್ಷಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣವಾದ ವಿವರಣೆ ನೀಡುತ್ತದೆ ಈ ಪುಸ್ತಕ. "ಇದುವರೆಗೂ ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಯಾವುದೇ ಕಾರಣದಿಂದ ಬಾಹ್ಯಾಕಾಶದಲ್ಲಿ ಮೃತರಾದ ಘಟನೆ ನಡೆದಿಲ್ಲ ಇಂತಹ ದುರ್ಘಟನೆ ...

ಸುಖ ಸಂಸಾರಕ್ಕೆ ನೂರು ಎಂಟು ಮಾತುಗಳು

Image
  ಈಗಿನ ಎಲ್ಲಾ ಅನಿಷ್ಟಗಳಿಗೂ ಕುಟುಂಬ ವ್ಯವಸ್ಥೆ ಶಿಥಿಲಗೊಳ್ಳುತ್ತಿರುವುದೇ ಕಾರಣ ಎಂದು ಬಲವಾಗಿ ನಂಬಿಕೆ ಬರುತ್ತಿರುವ ಈ ಹೊತ್ತಿನಲ್ಲಿ ಓದಲು ಸಿಕ್ಕ ಪುಸ್ತವಿದು. ಸಂಸಾರ ಮುರಿದು ಹೋಗಲು ಕಾರಣಗಳು ಏನು ಎಂದು ಯಾರನ್ನೇ ಕೇಳಿದರೂ ದೊಡ್ಡ ಪಟ್ಟಿಯೇ ನೀಡುತ್ತಾರೆ. ಆದರೆ  ಪ್ರಖ್ಯಾತ ಹಿರಿಯ ವಕೀಲರು ಮತ್ತು ಮಧ್ಯಾಸ್ಥಿಕೆಗಾರರು ಆಗಿರುವ ಲೇಖಕಿ ಎಸ್ ಸುಶೀಲ ಚಿಂತಾಮಣಿ ಅವರು  ತಮ್ಮ ಅನುಭವದ ಮೂಸೆಯಿಂದ ಬಂದ ನೂರೆಂಟು ಕಾರಣಗಳನ್ನು ವಿಸ್ತರಿಸಿರುವುದನ್ನು ಓದಿದಾಗ ನಮ್ಮದೇ ನಡವಳಿಕೆಗಳಿಗೆ ಕನ್ನಡಿ ಹಿಡಿದಂತೆ ಎನ್ನಿಸುತ್ತದೆ.  "ನನ್ನ ಸಂಸಾರದಲ್ಲಿ ನಾನು ಸರಿ"  ಎಂದುಕೊಳ್ಳುವ ಪ್ರತೀ ಮನಸ್ಸು "ನನ್ನ ಸಂಸಾರದಲ್ಲಿ ನಾವು ಸರಿ" ಎಂದುಕೊಳ್ಳಲು ದೊಡ್ಡ  ಪ್ರೇರೇಪಣೆಯೆಂತಿದೆ ಇದರಲ್ಲಿನ ಸಾಲುಗಳು. ನೂರೆಂಟು ಮಾತುಗಳು ಎನ್ನದೆ ನೂರು ಎಂಟು ಎಂದು ವಿಭಜಿಸಿ ನೀಡಿರುವ ಶೀರ್ಷಿಕೆ ಬಹಳ ಅರ್ಥಗರ್ಭಿತ. ನಮ್ಮನಮ್ಮ ಸoಸಾರದ ವಿಫಲತೆಗೆ ನೂರು ಕಾರಣ ಇಲ್ಲದೆ ಕೇವಲ ಎಂಟು ಸ್ವಭಾವವೂ ಇರಬಹುದು ಎನ್ನುವ ಯೋಚನೆಗೆ ತಾವು ನೀಡುತ್ತದೆ 108 ಸಂಕ್ಷಿಪ್ತ ಅಧ್ಯಾಯಗಳು.  ಗಂಡ ಹೆಂಡತಿಯ ಸಂಬಂಧ ಎಂದರೆ ಇಬ್ಬರೂ ಸೇತುವೆಯ ಮೇಲೆ ನಿತಂತೆ. ಒಬ್ಬರು ಆಕಾಶ ನೋಡುವಾಗ ಮತ್ತೊಬ್ಬರು ಕೆಳಗೆ ಹರಿಯುವ ನೀರನ್ನು ನೋಡುತ್ತಿರಬಹುದು. ಆದರೆ ಇಬ್ಬರೂ ನಿಂತಿರುವುದು ಸೇತುವೆಯ ಮೇಲೆ ಎನ್ನುವುದನ್ನು ಮರೆಯಲಾಗದು ಎಂಬರ್ಥದ ಮಾತುಗಳು ಯಾವ ಅಧ್ಯಾಯ...

Autistic ಜನರ ಹಕ್ಕುಗಳು Law Point

Image
  ರವಿ ಬಾಲ್ಯದಿಂದಲೂ ಬೇರೆ ಮಕ್ಕಳಿಗಿಂತ ವಿಭಿನ್ನ. ಶಾಲೆಯ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇಲ್ಲ. ವಯಸ್ಸಿಗೆ ಮೀರಿದ ದೇಹ. ಯಾರೊಂದಿಗೂ ಮಾತನಾಡಲು ಆಸಕ್ತಿ ಇಲ್ಲದ ಬಾಲಕನಿಗೆ ತಜ್ಞರು ಆಟಿಸಮ್ ವಿಕಲತೆ ಇರುವುದಾಗಿ ಹೇಳಿದರು. ಅವನ ಆಸಕ್ತಿಯನ್ನು ಗಮನಿಸಿ ಕ್ಯಾಂಡಲ್ ಮಾಡುವುದರಲ್ಲಿ ತರಬೇತಿ ಕೊಡಿಸಲಾಯ್ತು. ಖ್ಯಾತ ಗೃಹೋದ್ಯಮದವರು 15ರ ಇವನಿಗೆ ಸಂಬಳಕ್ಕೆ ಕೆಲಸ ಕೊಟ್ಟರು. ಬಾಲಕನ ಕೈಯೆಲ್ಲಾ ಮೇಣದಿಂದ ಸುಡಿಸಿಕೊಂಡು ಜಡ್ಡುಗಟ್ಟಿತ್ತು. ಅವನ ಸಮಸ್ಯೆ ಮತ್ತಷ್ಟು ಹೆಚ್ಚಿತು. 27 ವರ್ಷದ ಸಂತೋಷ್ ಶ್ರೀಮಂತ ಉದ್ಯಮಿಯ ಮಗ. ಯಾರೊಡನೆಯೋ ಬೆರೆಯದ, ತನ್ನದೇ ಲೋಕದಲ್ಲಿ ತಲ್ಲೀನನಾಗಿರುವವನಿಗೆ ಮದುವೆ ಮಾಡಿಸಿದರೆ ಸರಿಹೋಗುತ್ತಾನೆ ಎಂದ ಜ್ಯೋತಿಷ್ಯ ನಂಬಿ ಮದುವೆ ಮಾಡಿದ್ದಾರೆ. ಹೆಂಡತಿಗೆ ಇವನೊಡನೆ ಬಾಳುವುದು ಅಸಾಧ್ಯ ಎನ್ನುವುದು ಕೆಲವೇ ದಿನಗಳಲ್ಲಿ ತಿಳಿದಿದೆ. ವೈದ್ಯರು ಅವನ ಬಾಲ್ಯದಲ್ಲಿಯೇ ಆಟಿಸಮ್ ಇದೆ ಎಂದು ಹೇಳಿದ್ದರೂ ಯಾವುದೇ ಚಿಕಿತ್ಸೆ ಕೊಡಿಸದ ಪರಿಣಾಮ ಇವತ್ತು ಅವರ ಮದುವೆ ವಿಚ್ಚೇಧನಕ್ಕಾಗಿ ನ್ಯಾಯಾಲಯದಲ್ಲಿದೆ.  ಭಾರತದಲ್ಲಿ ಪ್ರತೀ 40 ವಯಸ್ಕ ಗಂಡಸರಲ್ಲಿ ಒಬ್ಬ ವ್ಯಕ್ತಿ ಆಟಿಸಮ್ ವೈಕಲ್ಯತೆಯಿಂದ ಬಳಲುತ್ತಿದ್ದಾರೆ  ಎನ್ನುತ್ತದೆ ಒಂದು ಅಂಕಿಅಂಶ. ಆದರೆ ಸಂವಿಧಾನದ ಪರಿಚ್ಚೇಧ 14 ಮತ್ತು 15 ಅವರುಗಳಿಗೆ ಕೂಡ ಯಾವುದೇ ತಾರತಮ್ಯವಿಲ್ಲದೆ ಬದುಕುವ ಹಕ್ಕನ್ನು ಖಾತ್ರಿ ಪಡಿಸಿದೆ. ಹಾಗಾಗಿಯೇ ಅವರುಗಳ ಅವಶ್ಯಕತೆಗಳನ್ನು ಗಮನಿಸಿ ಸ...

ಹೆಜ್ಜೇನು

Image
  ಪುಸ್ತಕದ ಹೆಸರು: ಹೆಜ್ಜೇನು ನಿರೂಪಕರು : ರವೀಂದ್ರ ಭಟ್ಟ ಐನಕೈ   ಪ್ರಕಾಶಕರು: ಡೀಡ್ ಸಂಸ್ಥೆ ಮೊದಲ ಮುದ್ರಣ: 2೦೦6  ಕೆಲವು ಪುಸ್ತಕಗಳು ಓದಿ ಮುಗಿಸಿಕೊಳ್ಳುವುದೇ ಇಲ್ಲ. ಆಗಾಗ್ಗೆ ಮನಸ್ಸು ಬಯಸುತ್ತಲೇ ಇರುತ್ತದೆ ಓದಲು ಇನ್ನೊಮ್ಮೆ, ಮತ್ತೊಮ್ಮೆ. ನನ್ನ ಸಂಗ್ರಹದಲ್ಲಿ ಇರುವ ಅಂತಹ ಪುಸ್ತಕಗಳಲ್ಲಿ ಹೆಜ್ಜೇನು ಒಂದು. ಹೆಜ್ಜೇನು ಆದಿವಾಸಿ ಮಹಿಳೆ ಜಾಜಿಯವರ ಆತ್ಮಕಥೆಯಾಗಿದೆ ಕನ್ನಡ ಸಾಹಿತ್ಯ ಸಂಸ್ಕೃತಿ ಹಾಗೂ ಭಾಷೆಯಲ್ಲಿ ಸಮುದಾಯಗಳ 'ವಾಕ್ ಇತಿಹಾಸ'ದ ದಾಖಲೆಯಾಗಿದೆ. ಇತಿಹಾಸವನ್ನು ಬರೆದಿಡಲು ಅಸಾಧ್ಯವಾದ ಸಮುದಾಯದ, ಜನಾಂಗದ ಪ್ರತಿನಿಧಿಯ ಇತಿಹಾಸವನ್ನು ಕಟ್ಟುವ ಪ್ರಯತ್ನ ಈ ಪುಸ್ತಕದಲ್ಲಿ ಇದೆ.  ನಾಗರಹೊಳೆಯ ಕಾಡಿನ ಮೂರ್ಕಲ್ ಎನ್ನುವಲ್ಲಿ ತಾಜ್ ಒಡೆತನದ ಪಂಚತಾರಾ ಹೋಟೆಲ್ ನಿರ್ಮಾಣವಾಗುತ್ತಿದ್ದಾಗ ಅದನ್ನು ವಿರೋಧಿಸಿ ಆದಿವಾಸಿಗಳು ಚಳುವಳಿಯಲ್ಲಿ ನಿರತರಾಗಿದ್ದರು. ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಪಂಚತಾರಾ ಹೋಟೆಲ್ ನಿರ್ಮಾಣ ಕಾಡಿನಲ್ಲಿ ಬೇಡ ಎಂದು ಹೇಳಿದ್ದರು.  ಆದಿವಾಸಿಗಳನ್ನು ಆಲಕ್ಷಿಸಿ, ಹೋಟೆಲ್ ನಿರ್ಮಾಣ ಕಾರ್ಯ ಮುಂದುವರೆದಿತ್ತು. ಒಂದು ದಿನ ಚಳುವಳಿ ನಿರತ ಆದಿವಾಸಿ ಮಹಿಳೆಯರನ್ನು ಮಹಿಳಾ ಪೊಲೀಸ್ ಪೇದೆಗಳು ದಸ್ತಗಿರಿ ಮಾಡಲು ಎಳೆದಾಡುತ್ತಿದ್ದರು.ಒಬ್ಬ ಹೆಣ್ಣುಮಗಳು ಧರಣಿ ಸ್ಥಳದಲ್ಲಿ ಮಲಗಿ ಬಿಟ್ಟಿದ್ದಳು. ಈಕೆಯನ್ನು ಪೇದೆಗಳು ಎಬ್ಬಿಸಲಾಗಲಿಲ್ಲ . ಆಕೆಯ ಕೈಕಾಲು ಜುಟ್ಟು ಹಿಡಿದು ಮೇ...

ಮಕ್ಕಳು ಮತ್ತು summer vacation

Image
  ಈಗ ಮಕ್ಕಳಿಗೆ ಶಾಲಾ ರಜ. ಬೆಳಗಿನ ವಾಕಿಂಗ್ ಹೋದಾಗ ಬೀದಿಬದಿಯಲ್ಲಿ ಆಡುತ್ತಿರುವ ಹತ್ತಾರು ಮಕ್ಕಳು ಸಿಗುತ್ತಾರೆ, ಮುದ್ದಾಗಿರುತ್ತಾರೆ ಕೂಡ. ಅದರ ಅರ್ಥ ನಾವುಗಳು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳಬಹುದು ಅಂತಲ್ಲ! ಬೀದಿಯಲ್ಲಿ ಆಡುತ್ತಿದ್ದಾರೆ ಎಂದ ಮಾತ್ರಕ್ಕೆ ಅವರುಗಳು ಹೊಟ್ಟೆಗಿಲ್ಲದವರು, ದಿಕ್ಕೆಟ್ಟವರು, ಗತಿಯಿಲ್ಲದವರು ಎನ್ನುವ ಷರಾ ಬರೆಯಬಹುದು ಅಂತಲ್ಲ! ಯಾವ ಶಾಲೆ, ಎಷ್ಟನೇ ತರಗತಿ, ಹೆಸರು ಏನು, etc etc ಮಾತುಗಳನ್ನು ಅವರೊಂದಿಗೆ ಆಡಬೇಕು ಅಂತಲ್ಲ! ಮನೆಯಲ್ಲಿ ಉಳಿದ ಊಟ ಅಥವಾ ಅಲ್ಲೇ ಇರುವ ಕೈಗಾಡಿಯಲ್ಲಿ ಪಲಾವ್, ಚಾಕಲೇಟ್ ವಗೈರೆ ಕೊಡಿಸಿ ನಮ್ಮ ಅಹಂ ತಣಿಸಿಕೊಳ್ಳಬೇಕು ಅಂತಲ್ಲ! ಅವರ ತಲೆಸವರುವ, ಕೆನ್ನೆ ಹಿಂಡುವ ಹಿರಿತನ ನಮಗಿದೆ ಅಂತಲ್ಲ! ನಮಗೊಂದು ಒಳ್ಳೆಯ ಹಾಸ್ಟೆಲ್ ಗೊತ್ತು ಅಲ್ಲಿ ಒಳ್ಳೆಯ ಅನುಕೂಲಗಳಿವೆ ಸೇರಿಸುತ್ತೀವಿ ಎಂದು ತಂದೆತಾಯಿಗಳಿಗೆ ಆಮಿಷ ತೋರಿಸಬೇಕು ಅಂತಲ್ಲ!   ಹಾಗಾಗಿ ನೋಟವನ್ನು ಮಾತ್ರ ಆಸ್ವಾದಿಸಿ ಮುಂದಕ್ಕೆ ಹೋಗೋಣ. ಕಂಡ ಮಕ್ಕಳು ನಿಜಕ್ಕೂ ಅಸುರಕ್ಷಿತ, ಆತಂಕದ ಸ್ಥಿತಿಯಲ್ಲಿ ಇದ್ದಾರೆ ಎನಿಸಿದರೆ ಮಾತ್ರ 1098 ಅಥವಾ 112 ಗೆ ಕರೆ ಮಾಡಬೇಕು ಅಷ್ಟೇ.  ಈಗ ಮಕ್ಕಳ ಸುರಕ್ಷತೆಯ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಚುರುಕಾಗಿದೆ. ಸರ್ಕಾರ ಹಲವಾರು ಯೋಜನೆಗಳಿಗೆ ಹಣವನ್ನೂ, ಸ್ಥಳವನ್ನೂ ನೀಡಿದೆ.  ಹಾಗಾಗಿ ನಾವುಗಳು ನಮ್ಮ ಪಾತ್ರವನ್ನು ನಿರ್ವಹಿಸಿದರೆ ಸಾಕು, ನಮ್...