ಒಮ್ಮೆ ಪದವಿ ಕಾಲೇಜಿನ ವಿದ್ಯಾರ್ಥಿಗಳ ಜೊತೆಗಿನ ಸಂವಾದದ ವಿಷಯ ’ಮದುವೆಗೆ ಮುನ್ನ. . . ’ ಎಂದಿತ್ತು. ಹದಿಹರೆಯಕ್ಕೂ ಮೊದಲೇ ಪ್ರೀತಿ ಪ್ರೇಮ ಎನ್ನುವ ಭಾವ ಸ್ಫುರಣೆಯಿಂದ ಹಿಡಿದು ಐವತ್ತು ವರ್ಷಗಳ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರೆಗೂ ಯುವಕ ಯುವತಿಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಒಬ್ಬಳು ಯುವತಿ ’ನೋಡಿ ಮೇಡಮ್ ಯಾವುದೇ ಮದುವೆ ಮುರಿದು ಬಿದ್ದರೂ ಸಾಮಾನ್ಯವಾಗಿ ಹುಡುಗಿಯದ್ದೇ ತಪ್ಪು ಎನ್ನುವ ಮಾತೇ ಕೇಳಿ ಬರುತ್ತದೆ. ಆದರೆ ವಾಸ್ತವದಲ್ಲಿ ಅದು ಲವ್ ಮ್ಯಾರೇಜ್ ಇರಲಿ ಅಥವಾ ಅರೇಂಜ್ಡ್ ಮದುವೆಯೇ ಆಗಿರಲಿ ಆ ಹುಡುಗ ಹುಡುಗಿಯ ಮಧ್ಯೆ ಏನು ನಡೆದಿರುತ್ತದೆ ಎನ್ನುವುದು ಅವರಿಬ್ಬರಿಗೆ ಮಾತ್ರ ಗೊತ್ತಿರುತ್ತದೆ. ಸ್ವಭಾವದಲ್ಲಿ ಏನಾದರೂ ಹೆಚ್ಚು ಕಡಿಮೆ ಇದ್ದರೆ ಈಗೆಲ್ಲಾ ಆಪ್ತಸಮಾಲೋಚನೆ ಪಡೆಯುವ ಅನುಕೂಲ ಇದೆ ಹಾಗಾಗಿ ಸರಿಪಡಿಸಿಕೊಳ್ಳಬಹುದು. ಆದರೆ ದೈಹಿಕ ಹೊಂದಾಣಿಕೆ (Compatibility) ಇಲ್ಲದಿದ್ದರೆ ಯಾರಿಗೂ ಹೇಳಿಕೊಳ್ಳಲೂ ಆಗುವುದಿಲ್ಲ ಹಾಗಂತ ಜೀವನ ಪೂರ್ತೀ ಅನುಭವಿಸಲೂ ಆಗಲ್ಲ. ಅದಕ್ಕೆ ಮದುವೆಗೆ ಮುನ್ನ ಲಿವಿನ್ ರಿಲೇಷನ್ಶಿಪ್ನಲ್ಲಿ ಇದ್ದು ನಂತರ ಮದುವೆ ಆಗುವುದೇ ಒಳ್ಳೆಯದು’ ಎಂದಳು. ಆಕೆಯ ಮಾತುಗಳನ್ನು ಕೇಳಿದಾರಭ್ಯ ಈ ಸಂಬಂಧವನ್ನು ಹೊಸದೊಂದು ಆಯಾಮದಿಂದ ಅರ್ಥೈಸಿಕೊಳ್ಳುವ ಅವಕಾಶ ಸಿಕ್ಕಿತು. ಮದುವೆ ಎನ್ನುವುದು ಜೀವನದ ಅಂತಿಮ ಗುರಿ ಎನ್ನುವ ಮನೋಭಾವದಿಂದ ಸಮಾಜವು ಅದೊಂದು ಆಯ್ಕೆ ಎನ್ನುವಲ್ಲಿಗ...
ಮದುವೆಯಾದ ಪುರುಷ livin relationship ನಲ್ಲಿ ಇದ್ದರೆ ಅಪರಾಧ ಅಲ್ಲ ಅಂತ ಅಲಹಾಬಾದ್ ಕೋರ್ಟ್ ಹೇಳಿದೆ ಎನ್ನುವ ಸುದ್ದಿ ಓದಿ ಲಿವ್ ಇನ್ ಸಂಬಂಧಗಳ ಬಗ್ಗೆ ರಮ್ಯ ಕಲ್ಪನೆ ಮಾಡಿಕೊಂಡರೆ ನಿರಾಸೆ ಕಟ್ಟಿಟ್ಟ ಬುತ್ತಿ. ಅಲ್ಲಿನ ಪ್ರಕರಣದ Facts ಬೇರೆ ಮತ್ತು ಪಾರ್ಟಿಗಳು ಕೇಳಿಕೊಂಡಿದ್ದ ಪರಿಹಾರಕ್ಕೆ ಅನುಗುಣವಾಗಿ ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲ್ಲಿನ ಕೋರ್ಟ್ ತೀರ್ಪು ಕೊಟ್ಟಿದೆ ಅಷ್ಟೇ. Livin relationship ಎನ್ನುವುದರ ಮೂಲಭೂತ ಗುಣಲಕ್ಷಣ ಇಬ್ಬರಿಗೂ ಅಸ್ತಿತ್ವದಲ್ಲಿ ಇರುವ ಮದುವೆ ಇರಬಾರದು ಎನ್ನುವುದೇ ಆಗಿದೆ. ಒಬ್ಬಾಕೆ ಸುಮಾರು 10 ವರ್ಷಗಳಿಂದ ಸಂಬಂಧದಲ್ಲಿದ್ದಳು. ಸಂಬಂಧಕ್ಕೆ ತನ್ನ ನಂಬಿಕೆ, ಸಮಯ, ಯೌವನ, ಭಾವನೆ, ದೇಹವನ್ನೂ ವ್ಯಯಿಸಿದ್ದಳು. ಏಕಾಏಕಿ ಒಂದು ದಿನ ಆತ ಖೇಲ್ ಖತಂ ಟಾಟಾ ಬೈ ಬೈ ಎಂದು ಹೊರನಡೆದು ಬಿಟ್ಟ. ಚೂರಾದ ಅವಳು ಪೊಲೀಸರ ಬಳಿ ಹೋಗಲು ನಿರ್ಧರಿಸಿದಳು. ಅವಳು ಭಾವಿಸಿದಂತೆ ಅವನು ಮಾಡಿದ ಗಂಭೀರ ದ್ರೋಹಕ್ಕೆ ಕಾನೂನು ಅವನಿಗೆ ಶಿಕ್ಷೆ ನೀಡಬೇಕೆಂದು ಅವಳು ಬಯಸಿದಳು. ಆದರೆ ಕಾನೂನು ಎಂದಿಗೂ ಭಾವನಾತ್ಮಕ ಗಾಯವನ್ನು ಅದಕ್ಕೆ ಪರ್ಯಾಯವಾಗಿ ಗುರುತಿಸುವಷ್ಟು ಸಮರ್ಥವಾಗಿಲ್ಲ ಮತ್ತು ಅದು ಸಾಧ್ಯವೂ ಇಲ್ಲ. ಲಿವ್-ಇನ್ ಸಂಬಂಧವು ಸಬಲೀಕರಣದ ಸಂಬಂಧವಲ್ಲ, ಅದೊಂದು ಪರಸ್ಪರ ನಿರೀಕ್ಷೆಗಳ ಬಂಧವಾಗಿದೆ. ಸಾರ್ವಜನಿಕ ಪ್ರವಚನದಲ್ಲಿ, ಲಿವ್-ಇನ್ ಸಂಬಂಧಗಳನ್ನು ಸ್ವಾತಂತ್ರ್ಯ, ಆಯ್ಕೆ ಮತ್ತು ಆಧುನಿಕತೆ ಎಂದು ಬಿಂಬ...
ಪುಸ್ತಕದ ಹೆಸರು : " ಅವಳ ಇವಳ ಸುತ್ತ " ಲೇಖಕಿ : ಎಸ್ ಸುಶೀಲ ಚಿಂತಾಮಣಿ ಸಪ್ನಾ ಬುಕ್ ಹೌಸ್ ಪ್ರಕಟಣೆ ಮನುಷ್ಯ ನೆಮ್ಮದಿಯಾಗಿ ಇದ್ದಾನೆ ಎನ್ನಲು ಒಂದೇ ಕಾರಣ ಸಾಕು ಆದರೆ ಬದುಕಿನಲ್ಲಿಯ ಅಶಾಂತಿಗೆ ನಾನಾ ಸ್ವರೂಪಗಳು. ಅದರಲ್ಲೂ ಹೆಂಗಸರು ದಾಂಪತ್ಯದೊಳಗೆ ಕತ್ತು ಹಿಸುಕಿಕೊಳ್ಳುತ್ತಲೇ ಕೆಲವೊಮ್ಮೆ ಕಣ್ಣ ನೀರಿಗೂ ತಾವು ಕೊಡಲಾಗದೆ ಬದುಕುವ ಸ್ಥಿತಿ ಬರಹಕ್ಕೆ ನಿಲುಕದು. ಲೇಖಕಿ ಶ್ರೀಮತಿ ಎಸ್ ಸುಶೀಲ ಚಿಂತಾಮಣಿ ಅವರು ರಾಜ್ಯದ ಹಿರಿಯ ವಕೀಲರು. ಮೀಡಿಯೇಷನ್ ಕೇಂದ್ರದ ಮುಖ್ಯ ಸಂಧಾನಕಾರರು. ತಾವು ಕಂಡ, ನಿರ್ವಹಿಸಿದ ಪ್ರಕರಣಗಳನ್ನು 38 ಅಧ್ಯಾಯಗಳಲ್ಲಿ ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಅಧ್ಯಾಯಗಳ ಸಂಕ್ಷಿಪ್ತತೆ ನೋಡುವಾಗ ಅನಿಸಿದ್ದು ' ನೋವುಗಳನ್ನು ನಲಿವಿನಷ್ಟು ವಿಸ್ತರಿಸಲು ಅಕ್ಷರಗಳು ಶಕ್ಯವಲ್ಲ'. ಈ ಪುಸ್ತಕದಲ್ಲಿ ಪದಗಳಿಗಿಂತ ಮೌನದ್ದೇ ಹೆಚ್ಚು ಕೆಲಸ. ಓದುಗನ ಕೊರಳುಬ್ಬಿ ಬರದಿದ್ದರೆ ಅಕ್ಷರತೆಯ ಮೇಲಾಣೆ. ಪ್ರತೀ ಹೆಣ್ಣಿನ ಜೀವನ ಯಾನವನ್ನು ಕೈಯಲ್ಹಿಡಿದ ಪುಸ್ತಕದಿಂದ ಕಣ್ಣಿನ ಮೂಲಕವೇ ನಮ್ಮದೇ ಪ್ರಯಾಣವಾಗಿಸಿಕೊಳ್ಳುವ ನಿಡಿದಾದ ನಿಟ್ಟುಸಿರು ' ಅವಳ ಇವಳ ಸುತ್ತ '. ಲೇಖಕಿಯೇ ಹೇಳಿರುವಂತೆ ' ಇದು ಹೆಣ್ಣು ಮಕ್ಕಳ ಸುತ್ತಲಿನ ಕೆಲವು ಘಟನೆಗಳ ಸಂಕಲನ. ಈ ಘಟನೆಗಳಲ್ಲಿ ಹಲವು ನಮ್ಮ ನಿಮ್ಮ ಕಣ್ಣಿಗೆ ಬಿದ್ದ ಅಥವಾ ನಮ್ಮ ನಿಮ್ಮ ಜೀವನದ ಘಟನೆಗಳೇ ಹೌದೇನೋ ಎನ್ನಿಸಲೂಬಹುದು ಎಲ್ಲೋ ಒಂದು ಕಡೆ ಇವು...
Comments
Post a Comment