Posts

ನೂರು ಮಕ್ಕಳು ನೂರು ಪುಸ್ತಕ

Image
  " ನೂರು ಮಕ್ಕಳು ನೂರು ಪುಸ್ತಕ" ಈ ಯೋಜನೆಯ ಬಗ್ಗೆ ಬಹಳಷ್ಟು ಜನರು ಆಸಕ್ತಿ ತೋರಿಸಿ ಹೆಚ್ಚಿನ ವಿವರ ಕೇಳುತ್ತಿದ್ದೀರಿ. ನಿಮ್ಮೆಲ್ಲರಿಗೂ ನಾನು ಆಭಾರಿ. 🙏  ನೂರು ಮಕ್ಕಳು ನೂರು ಪುಸ್ತಕ ನನ್ನ ಸಂಸ್ಥೆ ಅಸ್ತಿತ್ವ ಲೀಗಲ್ ಟ್ರಸ್ಟ್ ನ ಯೋಜನೆಯಾಗಿದ್ದು ಡಿಸೆಂಬರ್ 2024ರ ಒಳಗೆ ನೂರು ಸ್ಥಳಗಳಲ್ಲಿ ನೂರು ಮಕ್ಕಳ ಕೈಯಲ್ಲಿ ನೂರು ಪುಸ್ತಕಗಳನ್ನು ಕೊಡಬೇಕು ಎನ್ನುವ ಆಸೆ ಇದೆ. ಈಗಾಗಲೇ ಆರು ಸ್ಥಳಗಳಲ್ಲಿ ಸುಮಾರು ಸಾವಿರದ ಇನ್ನೂರು ಮಕ್ಕಳನ್ನು ಪುಸ್ತಕ ಹಿಡಿದುಕೊಂಡು ಓದುವಂತೆ ಮಾಡಲಾಗಿದೆ. ಈ ಯೋಜನೆಯಲ್ಲಿ ತಾವುಗಳು ಭಾಗಿಯಾಗಿ ಪುಸ್ತಕಗಳನ್ನು ಕೊಡಿಸುವುದಾದರೆ ಅಥವಾ ಹಣ ಸಹಾಯ ಮಾಡುವುದಾದರೆ astitvalegal@gmail.com ಇಲ್ಲಿಗೆ email ಮಾಡಿ ವಿವರಗಳನ್ನು ನೀಡಲಾಗುತ್ತದೆ. ಈಗಾಗಲೇ ಈ ಯೋಜನೆಯಲ್ಲಿ ನಮ್ಮ ಬೆಂಬಲಕ್ಕೆ ನಿಂತು ಪುಸ್ತಕಗಳನ್ನು ಕೊಡಿಸಿರುವ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು 🙏😊 ಅಂಜಲಿ ರಾಮಣ್ಣ, ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು ' ಕೈಗೆ ಪುಸ್ತಕ ಕೊಡೋಣ, ಮಕ್ಕಳನ್ನು ಮನುಷ್ಯರನ್ನಾಗಿ ಮಾಡೋಣ ' 16- April -2024

My body my choice - ವಿಜಯಕರ್ನಾಟಕ

Image
  ಕಲಾರಾಧನೆಯ ಕಣ್ಣಿನಿಂದ, ಸೌಂದರ್ಯದ ಆಸ್ವಾದನೆಯ ಮನಸ್ಸಿನಿಂದ ನೋಡಿದಾಗ ಈ ವಿಡಿಯೋ ಅದ್ಭುತವಾಗಿ ಮೂಡಿ ಬಂದಿದೆ. ಇದನ್ನು ತಯಾರು ಮಾಡಿದವರೇ ಸಾರ್ವಜನಿಕವಾಗಿ ಹೇಳಿಕೊಂಡಂತೆ 'ಈ ವಿಡಿಯೋ ಮೂಲಕ ಮಹಿಳೆಯರಿಗೆ ಆಯ್ಕೆಯ ಹಕ್ಕು ಇದೆ ಎಂದು ಸಮಾಜಕ್ಕೆ ತಿಳಿಸುವುದಷ್ಟೇ ನಮ್ಮ ಉದ್ದೇಶ' ಎನ್ನುವ ಮಾತೂ ಬಹಳ ಆಕರ್ಷಣೀಯವಾಗಿದೆ. ಹಲವು ಕಾರಣಗಳಿಗೆ ವಿಡಿಯೋ ಗಂಭೀರವಾಗಿ ಗಮನ ಸೆಳೆದಿದೆ. ದೀಪಿಕಾ ಪಡುಕೋಣೆಯ ಬಗ್ಗೆ ಯಂತೂ ಬೆರಳು ತೋರಲು ಆಗುವುದೇ ಇಲ್ಲ. But... ಉದ್ದೇಶವನ್ನು ಸಾರಲು ಬಳಸಿಕೊಂಡಿರುವ ಪದಗಳು ಮನಸ್ಸಿರುವ ಮನುಷ್ಯ ರನ್ನು ಒಂದಷ್ಟರಮಟ್ಟಿಗೆ ಗೊಂದಲಕ್ಕೀಡು ಮಾಡುವುದಂತೂ ನಿಜ.  SEX ಎನ್ನುವ ಸುಂದರ ಮೂರಕ್ಷರದ ಪದವು ಇಲ್ಲಿ ಬಳಕೆಯಾಗಿರದಿದ್ದರೆ ಬಹುಶಃ ಇದಕ್ಕೆ ಈ ಪರಿಯ ಪ್ರಚಾರವೂ ದಕ್ಕುತ್ತಿರಲಿಲ್ಲವೇನೋ. ಮದುವೆಗೆ ಮೊದಲಿನ ಲೈಂಗಿಕ ಸಂಬಂಧ, ಮದುವೆಯಾಚೆಗಿನ ಸೆಕ್ಸ್, ಹೆಣ್ಣು ಹೆಣ್ಣನ್ನೇ ಕಾಮಿಸುವುದು, ಬೇಕಾಬಿಟ್ಟಿ ಮೈ ಬೆಳೆಸುವುದು, ಮನಸೋಯಿಚ್ಛೆ ಬಟ್ಟೆಧರಿಸುವುದು, ಮದುವೆ ಬೇಕೋ ಬೇಡವೋ, ಹೊತ್ತುಗೊತ್ತಿಗೆ ಗೂಡು ಸೇರುವುದೋ ಬೇಡವೋ, ಪ್ರೀತಿ ಸ್ಥಾಯಿಯಾಗಿರಬೇಕೋ ಜಂಗಮವಾಗಬೇಕೋ, ಹೀಗೆ ಇನ್ನೂ ಏನೇನನ್ನೋ 99 ಹೆಂಗಸರು 'ನನ್ನ ಆಯ್ಕೆ' ಎಂದು ಖಚಿತ ಧ್ವನಿಯಲ್ಲಿ ಸಾರಿ ಹೇಳುವಾಗ, ನನಗಂತೂ ತಪ್ಪು ಎನಿಸಲಿಲ್ಲ, ನಿಜ. ಹೆಣ್ಣಿಗೂ ಆಯ್ಕೆ ಎನ್ನುವ ಹಕ್ಕು ಇದೆ ಮತ್ತು ಅದು ಇತರರಿಗೆ ಇರುವಷ್ಟೇ ಸಮಾನವಾಗಿದೆ. ಎನ್ನುವುದನ್ನ

Adoption Human Trafficking

Image
  Sonu Gowda ಅವರ ನಡೆ ಕಾನೂನು ರೀತ್ಯಾ adoption ಅಂತೂ ಅಲ್ಲ. ಮಾನವ ಕಳ್ಳಸಾಗಾಣಿಕೆಯ ಕೋನವನ್ನೂ ಪರಿಗಣಿಸಬೇಕಿರುತ್ತದೆ. Talk in BTV on 22nd March 2023

Human Trafficking

Image
 14- ಮಾರ್ಚಿ, 2022 ದೂರದರ್ಶನ ಚಂದನ ವಾಹಿನಿಯಲ್ಲಿ ಬಾಲಕಾರ್ಮಿಕತೆಗಾಗಿ ಮಕ್ಕಳ ಸಾಗಾಣಿಕೆ ಬಗ್ಗೆ ನಡೆದ ಕಾರ್ಯಕ್ರಮದ ಲಿಂಕ್ ಇಲ್ಲಿದೆ. ನೋಡಿ, ಕೇಳಿ, ಅಭಿಪ್ರಾಯ ತಿಳಿಸಿ🙏 https://youtu.be/JwoA9JjEDKI?si=USY1AfqBHYXv-v9t

Pulse polio

Image
 3 ಮಾರ್ಚ್ 2024 ಇದೆ ಪಲ್ಸ್ ಪೋಲಿಯೋ ಅಭಿಯಾನ - ಮಗು ಹುಟ್ಟಿದಾಗಿನಿಂದ ತಾಯಿ - ಮಗು ಕಾರ್ಡಿನಲ್ಲಿ ಯಾವಯಾವ ಲಸಿಕೆ ಯಾವ ತಿಂಗಳು ಕೊಡಬೇಕು ಎಂದು ಬರೆದಿರುತ್ತಾರೆ. * ಅದರಂತೆಯೇ ಪೋಲಿಯೋ ಲಸಿಕೆ ಕೊಡಿಸುತ್ತಿದ್ದರೂ * ಎರಡು ದಿನಗಳ ಹಿಂದೆಯೇ ಪೋಲಿಯೋ ಡ್ರಾಪ್ಸ್ ಹಾಕಿಸಿದ್ದರೂ * ಅದೇ ವಾರದಲ್ಲಿ ಹಾಕಿಸುವ ದಿನಾಂಕ ಇದ್ದರೂ ' ಪಲ್ಸ್ ಪೋಲಿಯೋ ' ಗೆ ಅದರದೇ ಆದ ಮಹತ್ವ ಮತ್ತು ಅವಶ್ಯಕತೆ ಇದೆ.  ಹಾಗಾಗಿ ಐದು ವರ್ಷದ ಒಳಗಿನ ಶ್ರೀಮಂತ, ಬಡವ, ಮಧ್ಯಮ ಎಲ್ಲಾ ವರ್ಗದ, ಜಾತಿಯ, ಧರ್ಮದ ಮಕ್ಕಳಿಗೂ ' ಪಲ್ಸ್ ಪೋಲಿಯೋ ' ಹಾಕಿಸಲೇ ಬೇಕು. ಇಲ್ಲಿರುವ ವೈದ್ಯರುಗಳು ಮಗುವಿಗೆ ಪೋಲಿಯೋ ಲಸಿಕೆ ಹಾಕಿಸಿದ್ದರೂ ಪಲ್ಸ್ ಪೋಲಿಯೋ ಹನಿ ಕೊಡಿಸಬೇಕಿರುವ ಅವಶ್ಯಕತೆ ಬಗ್ಗೆ ದಯವಿಟ್ಟು ಕಾರಣ ಸಹಿತ ಬರೆಯಬೇಕು...ಇದನ್ನು ಓದಿದವರು, ಇದರ ಬಗ್ಗೆ ಮಾತನಾಡಬೇಕು. ಪೋಲಿಯೋ ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ಒಂದು ದೇಶ ಅದನ್ನು ನಿರ್ಮೂಲನೆ ಮಾಡಿದ್ದೇವೆ ಎಂದುಕೊಂಡು ಬೀಗುವ ಹಾಗಿಲ್ಲ. ದಯವಿಟ್ಟು ಎಲ್ಲರಿಗೂ ಹೇಳಿ...ಅವರ ಮನೆಯಲ್ಲಿ ಆ ವಯಸ್ಸಿನ ಮಕ್ಕಳು ಇಲ್ಲ ಎಂದು ಸುಮ್ಮನಿರಬೇಡಿ! #FamilyCourtಕಲಿಕೆ #ಮಕ್ಕಳಹಕ್ಕುಗಳಜಾಗೃತಿಸಪ್ತಾಹ

With Railway Police

Image
  ಬೆಂಗಳೂರು ಇನ್ನೂ ನೆಮ್ಮದಿಯಾಗಿ ಇದ್ದರೆ ಕಾರಣ ಇವರು. ಮಕ್ಕಳ ವಿಷಯದಲ್ಲಿ ಇವರಿಗೆ ಬೇಕಾದ್ದು "Three A s" ಎನ್ನುವ ಟಾನಿಕ್ (Apperence, Attitude, Approach). Railway ಪೊಲೀಸರಿಗೆ ಹೀಗೆ ಹೇಳಿ ಒಂದು ಸೆಲ್ಯೂಟ್ ಹಾಕಿ ಬಂದೆ. ಆಮೇಲೆ ಮಹಿಳಾ ಪೊಲೀಸರೊಡನೆ ಒಂದಷ್ಟು ಸಮಾಲೋಚನೆ. BOSCO Childline ಅವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜೊತೆಯಲ್ಲಿ ಇದ್ದವರು Mr. Ashok-DSP, Mr. Baramappa B Mallur - Inspector. 26th February 2019 Railway Superintendent of Police office , Bengaluru

ಸಬಲೀಕರಣ ಕಾನೂನು DISHA episode -1

Image
 Episode -1 DD ಚಂದನ ಸಬಲೀಕರಣ ಕಾನೂನುಗಳ.ಪರಿಚಯ

ದಿಶ - DISHA in Doordarshan

Image
  ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯವು  ಪ್ರಜಾ ಕೇಂದ್ರಿತ ನ್ಯಾಯದಾನ ವಿಧಾನವನ್ನು ರೂಪಿಸಲು ಹಾಕಿಕೊಂಡಿರುವ ಯೋಜನೆ 'ದಿಶ' (DISHA - Designing Innovative Solutions for  Holistic Access to Justice) ಮಹಿಳೆಯರು ಮಕ್ಕಳು ಅಲ್ಪಸಂಖ್ಯಾತರು  ಲಿಂಗತ್ವ ಅಲ್ಪಸಂಖ್ಯಾತರು ಹಿರಿಯ ನಾಗರಿಕರು ಮತ್ತು ಅಂಗವಿಕಲರು ಇವರುಗಳಿಗೆ ಕಾನೂನು ಮಾಹಿತಿಯನ್ನು ಕೊಡುವ ಯೋಜನೆಯಲ್ಲಿ ಈ ಸರಣಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ.  ದೂರದರ್ಶನ ಚಂದನ ವಾಹಿನಿಯ ಈ ಕಾರ್ಯಕ್ರಮದ ಉಸ್ತುವಾರಿ ಕೆಲಸ ನನಗೆ ನೀಡಿದೆ ಎನ್ನುವುದು ದೊಡ್ಡ ಖುಷಿ. ನಾಳೆಯಿಂದ ಪ್ರತೀ ಶನಿವಾರ ಪ್ರಸಾರವಾಗಿದೆ ಸರಣಿ. ನಾಳೆಯದರ ಬಗ್ಗೆ ಇಲ್ಲಿದೆ ವಿವರ. ದಯವಿಟ್ಟು ಕಾರ್ಯಕ್ರಮ ನೋಡಿ ಮತ್ತು ನೋಡಿಸಿ 🙏

Toilets in Government Offices

Image
2022 ರಲ್ಲೂ ಸರ್ಕಾರಿ ಕಚೇರಿಗಳಲ್ಲಿ ಮನುಷ್ಯರ ಉಪಯೋಗಕ್ಕೆ ಅರ್ಹ ಇರುವ ಶೌಚಾಲಯ ಇಲ್ಲ. ಕೂಡಲೇ ಕಟ್ಟಿಸಿ, ನಿರ್ವಹಿಸಿ ಎನ್ನುವ ಸರ್ಕಾರೀ ಆದೇಶ ಹೀಗಿದೆ.  ನೀವುಗಳು ಹೋದೆಡೆಯಲ್ಲಿ ಗಮನಿಸಿ, ದನಿ ಎತ್ತಿ please🙏 #ಕಂಡಲ್ಲಿಕೇಳು  

Post Valentine's day

Image
 18th February 2024  ’ನೀನಲ್ಲ ನೀನಲ್ಲಾ ಈ ಕರಿಮಣಿ ಮಾಲೀಕ ನೀನಲ್ಲಾ. . .’ ಎನ್ನುವ ರೀಲ್ಸ್‍ಗಳು ಅಂತರ್ಜಾಲದಲ್ಲಿ ಕೊರಳು ಕೊಂಕಿಸಿ, ಬೆರಳು ತಿರುಗಿಸಿ ಹಾಡಾಗುತ್ತಿರುವ ಹೊತ್ತಿನಲ್ಲಿ ಮತ್ತೊಂದು ವ್ಯಾಲೆಂಟೈನ್ ದಿವಸ ಬಂದು, ಮುಗಿದೂ ಹೋಗಿದೆ. ಮಾರನೆಯ ದಿನ ಕಸದ ಗಾಡಿಯಲ್ಲಿ ಬಗ್ಗಿ ನೋಡಿದಾಗ ಅಷ್ಟೊಂದು ಗುಲಾಬಿ ಶವಗಳು ಕಾಣಲಿಲ್ಲ. ಪ್ರೇಮಿಗಳು ಕಡಿಮೆಯಾಗಿಬಿಟ್ಟರೇನು! ಕ್ರಿಸ್ಮಸ್ ಮತ್ತು ವ್ಯಾಲೆಂಟೈನ್ ದಿವಸಗಳಲ್ಲಿ ಅವುಗಳದ್ದೇ ಕಥೆ ಹೊತ್ತು ತಯಾರಾಗುತ್ತವೆ ಹಲವಾರು ಇಂಗ್ಲೀಷ್ ರೋಮ್ಯಾಂಟಿಕ್ ಸಿನೆಮಾಗಳು. ಅರ್ಧ ವರ್ಷ ಅವುಗಳನ್ನು ನೋಡುತ್ತಾ ನಾ ಕೂಡ ಅದೇ ಭಾವದಲ್ಲಿ ಉಕ್ಕುತ್ತಿರುತ್ತೇನೆ. ಆದರೆ ಈ ಬಾರಿ ಅಂತಹ ಸಿನೆಮಾಗಳೂ ಬಂದಿಲ್ಲ. ಪ್ರೇಮಿಗಳು ರಜೆಯ ಮೇಲೆ ಹೋಗಿ ಬಿಟ್ಟರೋ ಏನೋ! ಒಂದಾನೊಂದು ಕಾಲದಲ್ಲಿ  ವ್ಯಾಲೆಂಟೈನ್ ಎನ್ನುವ ಹೆಸರಿನ ಸಂತ ಇದ್ದನಂತೆ. ಅವನೂರಿನಲ್ಲಿ ರೋಮನ್ನರು ಆಳುತ್ತಿರುವಾಗ ಸೈನಿಕರಿಗೆ ಮದುವೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲಿಲ್ಲವಂತೆ. ಆದರೆ ಈ ಸಂತ ಕದ್ದು ಮುಚ್ಚಿ ಅವರಿಗೆಲ್ಲಾ ಮದುವೆ ಮಾಡಿಸುತ್ತಿದ್ದನಂತೆ. ಇದು ರೋಮಿನ ಸಾಮ್ರಾಟನಿಗೆ ಗೊತ್ತಾಗಿ ಸಂತ ವ್ಯಾಲೆಂಟೈನಿಗೆ ಮರಣದಂಡನೆ ವಿಧಿಸಿಬಿಟ್ಟನಂತೆ.  ಕೊನೆಯ ಉಸಿರು ನಿಲ್ಲುವಾಗ ಈತ ಜೈಲರ್ನ ಮಗಳಿಗೆ ’your valentine’ ಎಂದು ಬರೆದಿರುವ ಒಂದು ಚೀಟಿ ಕೊಟ್ಟನಂತೆ. ಅವತ್ತಿನಿಂದ ಸಂತನ ಹುಟ್ಟುಹಬ್ಬವಾದ 14ನೆಯ ಫೆಬ್ರವರಿಯನ್ನು ಕ್ರಿಶ್ಚಿಯನ್ನರು ಪ್ರೇಮ

Rosa Park ಕರೆಗಂಟೆ ಒತ್ತಿ ಕೌಟುಂಬಿಕ ದೌರ್ಜನ್ಯ ತಡೆಗಟ್ಟಿ

Image
  ಕರೆಗಂಟೆ ಒತ್ತಿ ಕೌಟುಂಬಿಕ ದೌರ್ಜನ್ಯ ತಡೆಗಟ್ಟಿ, ಎನ್ನುವುದು ಒಂದು ಆಂದೋಲನ . ಹೀಗೆ ಜಗಳ ಆಡುವಾಗ ಯಾರಾದರೂ ಹೋಗಿ ಅವರ ಮನೆಯ ಕರೆಗಂಟೆ ಒತ್ತಬೇಕು ಆಗ ಅದರಿಂದ ಜಗಳ ಮಾಡುವವರಿಗೆ ತಮ್ಮ ಮೇಲೆ ಇತರರ ಗಮನ ಇದೆ ಎನ್ನುವುದು ತಿಳಿಯುತ್ತದೆ ಎನ್ನುವ ಉದ್ದೇಶ. ಆದರೆ ಎಷ್ಟು ಯಶಸ್ವಿ ಆಯಿತು ಗೊತ್ತಿಲ್ಲ. ಕೌಟುಂಬಿಕ ದೌರ್ಜನ್ಯ ಒಂದು ಕ್ರಿಮಿನಲ್ ಅಪರಾಧ. ಹೆಂಡತಿ ಅಥವಾ ಗಂಡ ವಿರೋಧಿಸಿದರೂ, ನೋಡಿದವರು, ಕೇಳಿದವರು ಕೂಡ ದೂರು ನೀಡಬೇಕಿರುತ್ತದೆ. ಆದರೆ ಗಾಸಿಪ್ ಸಿಕ್ಕರೆ ಸಾಕು, ಪರರ ನೆಮ್ಮದಿ ನಮಗೆ ಯಾಕೆ ಎನ್ನುವ ಭಾವ ನಮ್ಮ ಸಮಾಜದ ಸಾಗುವಳಿಯಲ್ಲಿ ಬಿತ್ತನೆ ಆಗಿದೆ. ಹೀಗಿರುವಾಗ ನಮಗೆ ಯಾಕೆ ಬೇಕು ಎಂದು ಸುಮ್ಮನಾಗುವವರೇ ಹೆಚ್ಚು ಅದಕ್ಕೆ ದೌರ್ಜನ್ಯ ಒಂದು ಸರಪಳಿಯಂತೆ. Remember, Injustice done anywhere is a threat to justice done everywhere- Martin Luther King ಇವತ್ತು Rosa Parksಳ 109 (04 ಫೆಬ್ರವರಿ 1913) ನೆಯ ಜನ್ಮದಿನ. ಆವಳು ಹೇಳುತ್ತಾಳೆ "ನಾನು ಸ್ವಾತಂತ್ರ್ಯ ಬಯಸಿ ಹೋರಾಡುತ್ತೇನೆ ಏಕೆಂದರೆ ಉಳಿದವರು ಸ್ವತಂತ್ರರಾಗಲೀ ಎಂದು" #FamilyCourtಕಲಿಕೆ

Lord Rama in Indonesia

Image
  ಅದು ಬಾಲಿ ದ್ವೀಪ ಪ್ರವಾಸದ ಕೊನೆಯ ದಿನ. ಉಬುದ್ ಎನ್ನುವ ಸ್ಥಳದಿಂದ ಚಾಲಕ ಪುತು ಅಲಿತ್ ಅಸ್ತಿನಪುತ್ರನ ಜೊತೆ ಪಯಣ ಶುರುವಾಗಿತ್ತು I Gusti Ngurah Rai International ವಿಮಾನ ನಿಲ್ದಾಣದ ಕಡೆಗೆ. ’ಮಹಾಮೃತ್ಯುಂಜಯ ಸ್ತೋತ್ರವನ್ನು ರೆಕಾರ್ಡ್ ಮಾಡಿ ಕೊಡಿ’ ಎನ್ನುತ್ತಾ ತನ್ನ ಮೊಬೈಲ್ ಅನ್ನು ಕೈಗಿತ್ತಿದ್ದ ಅಲಿತ್. ಸಮಯ ಜಾರಿದ ದು:ಖದಲ್ಲಿ ವಿಷಾದ ಗೀತೆಯೊಂದನ್ನು ಹಾಡಿಕೊಳ್ಳುವ ಚಣ ಮೊದಲು ಅಲಿತ್ ’ಅಲ್ಲಿ ನೋಡಿ ರಾಮ’ ಎನ್ನುತ್ತಾ ವಾಹನ ದಟ್ಟಣೆಯಿದ್ದ ಒಂದು ಹೆದ್ದಾರಿಯ ಬದಿಯಲ್ಲಿ ಕಾರ್ ನಿಲ್ಲಿಸಿದ.  ಬಾಲಿಯ ರಸ್ತೆಗಳಲ್ಲಿ ಮಹಾಭಾರತ ಮತ್ತು ರಾಮಾಯಣದ ಹಲವಾರು ವ್ಯಕ್ತಿ ಚಿತ್ರಣಕ್ಕೆ ದೊಡ್ಡದೊಡ್ಡ ಮೂರ್ತ ರೂಪಕೊಟ್ಟು ಶಿಲ್ಪಗಳನ್ನು ಇಟ್ಟಿದ್ದಾರೆ. ರಸ್ತೆಗಳಲ್ಲಿ, ಸಿರಿವಂತರ ಮನೆಗಳ ಮುಂದೆ, ಅಲ್ಲಿನ ರಾಜನ ಅರಮನೆಯ ಹೆಬ್ಬಾಗಿಲಿನಲ್ಲಿ, ಮ್ಯೂಸಿಯಮ್ ಮತ್ತು ರಾಜಕೀಯ ಮುಖಂಡರುಗಳ ಕಚೇರಿಯ ಎದುರು ಹನುಮನ ಮೂರ್ತಿ ನೋಡಲು ಸಿಕ್ಕಿತ್ತು. ಅವನಿಗೆ ಅಲ್ಲಿ ಮನೆಯೊಳಗೆ ಜಾಗವಿಲ್ಲ. ಬ್ರಹ್ಮ ವಿಷ್ಣು ಮಹೇಶ್ವರರನ್ನು ದೇವರು ಎಂದು ಪ್ರಾರ್ಥಿಸುವ, ಪೂಜಿಸುವ ಇಂಡೋನೇಷಿಯಾ ಹಿಂದುಗಳು ಹನುಮ ದೇವರಲ್ಲ ದ್ವಾರಪಾಲಕ ಎನ್ನುತ್ತಲೇ ಮುಂದುವರೆದು ’ರಾಮಾಯಣ ಮಹಾಭಾರತ ನಮ್ಮ ಸಂಸ್ಕೃತಿ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಲಂಕೆಯನ್ನು ಸುಡುವಾಗಲೂ ಸೌಮ್ಯ, ಸ್ಥಿತಪ್ರಜ್ಞನಂತೆ ಇರುವ ಹನುಮನ ಮುಖಭಾವವನ್ನು ಮೈಮನಗಳಲ್ಲಿ ತುಂಬಿಕೊಂಡ ನನಗೆ ಅಲ್ಲಿನ ಹನುಮ

Solo Travel ವಿಜಯಕರ್ನಾಟದಲ್ಲಿ

Image
 ಒಬ್ಬಂಟಿ ಪ್ರಯಾಣವೇ ಅತ್ಯದ್ಭುತ ಶಿಕ್ಷಕ. ಅದರಲ್ಲೂ ಪ್ರಯಾಣವು ನಾವು ಬಯಸುವಂತಹ ಪ್ರವಾಸವಾದರೆ ಅನುಭವದ ಅಗಾಧತೆಗೆ ಮಿತಿ ಇಲ್ಲ. ಎಷ್ಟೋ ಬಾರಿ ಒಂಟಿಯಾಗಿ ಪ್ರಯಾಣ ಮಾಡಿದ್ದರೂ, ಸ್ನೇಹಿತರ ಮತ್ತು ಕುಟುಂಬದ ಜೊತೆ ಪ್ರವಾಸ ಹೋದಾಗಲೂ ಸಹ ನನಗಾಗಿ ಸ್ವಲ್ಪ ಸಮಯವನ್ನು ಎತ್ತಿಟ್ಟುಕೊಳ್ಳುತ್ತೇನೆ. ಎಲ್ಲರ ಅಭಿರುಚಿ, ಆಸಕ್ತಿಯು ಒಂದೇ ಆಗಿರುವುದಿಲ್ಲ ಹಾಗಾಗಿ ನನಗೆ ವೈಯಕ್ತಿಕವಾಗಿ ಆಸಕ್ತಿ ಇರುವ ಜಾಗಗಳನ್ನು ನೋಡಲು ವಿಷಯಗಳನ್ನು ತಿಳಿದುಕೊಳ್ಳಲು ಕುಟುಂಬದ ಜೊತೆಯೊಳಗೂ ಸೋಲೋ ಪ್ರವಾಸವೊಂದು ಇದ್ದೇ ಇರುತ್ತದೆ. ಇದಕ್ಕೆ ನಾನಿಟ್ಟ ಹೆಸರು "ಜೊತೆಯೊಳಗೂ ಒಂದು ಸೋಲೋ ಟೈಮ್" .ಇಂತಹ ಒಂದು ಪ್ರವಾಸದಲ್ಲಿ ಸಿಕ್ಕ ಮರೆಯಲಾರದ ನೆನಪು ಎಂದರೆ ಅಲೆಕ್ಸ್ ಎನ್ನುವ ಪೊಲೀಸ್ ಅಧಿಕಾರಿ. ಆತ ಇಂಗ್ಲೆಂಡಿನ ಕೇಂಬ್ರಿಡ್ಜ್ ನಲ್ಲಿ ಪೊಲೀಸ್ ಅಧಿಕಾರಿ. ಮಕ್ಕಳ ಹಕ್ಕುಗಳ ಬಗ್ಗೆ ಪಿ.ಎಚ್‌ಡಿ ಕೂಡ ಮಾಡುತ್ತಿದ್ದರು. ಎಲ್ಲಿ ಹೋದರೂ ಮಕ್ಕಳ ಮತ್ತು ಮಹಿಳೆಯರ ಬಗ್ಗೆ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ತಿಳಿದುಕೊಳ್ಳುವುದು ಅದರ ಬಗ್ಗೆ ಕೆಲಸ ಮಾಡಿದವರನ್ನು, ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡುವುದು, ವೃತ್ತ ಪತ್ರಿಕೆಗಳನ್ನು ಓದುವುದು, ಸ್ಥಳೀಯ ಜನರನ್ನು ಮಾತನಾಡಿಸುವುದು, ಪುಸ್ತಕದಂಗಡಿಗೆ ಹೋಗುವುದು ನನ್ನ ಇಷ್ಟದ ಹವ್ಯಾಸ. ಆ ದಿನ ಲಂಡನ್ನಿನ ಬೀದಿಯಲ್ಲಿ ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿಟ್ಟಿದ್ದ ನವಜಾತ ಶಿಶುವಿನ ವಿಷಯವನ್ನು ಪತ್ರಿಕೆಯಲ್ಲಿ ಓದಿದ್ದೆ.

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

Image
  ಬಯಲು ಸೀಮೆಯ ಎಲ್ಲರ ಬಾಯಲ್ಲೂ ಕುಂದಾಪುರ ಹೆಸರು ಹೊರಳುವಂತೆ ಮಾಡಿದ್ದ ಚೈತ್ರ ಕುಂದಾಪುರ ಈಗ ವಂಚನೆ ಪ್ರಕರಣದಲ್ಲಿ ಆರೋಪಿ. ಆಕೆ ಅಪರಾಧಿ ಹೌದೋ ಅಲ್ಲವೋ ಎನ್ನುವುದನ್ನು ನ್ಯಾಯಾಲಯ ತೀರ್ಮಾನ ಮಾಡಲು ಸಮಯವಿದೆ. ಆದರೆ ಆಕೆಯ ಮಾತುಗಾರಿಕೆ ಮತ್ತು ಅದರ ವಿಷಯ ಎಲ್ಲವನ್ನೂ ಕಂಡ ಜನಮಾನಸ ಆಗಲೇ ಅವಳನ್ನು ಅಪರಾಧಿ ಸ್ಥಾನದಲ್ಲಿ ಅನಾಯಸವಾಗಿ ನೋಡುತ್ತಿದೆ. ವಿದ್ಯುನ್ಮಾನ ಮಾಧ್ಯಮಗಳು ಆಗಲೇ ನ್ಯಾಯಾಲಯಕ್ಕೆ ಸಡ್ಡು ಹೊಡೇದ ಪ್ರಕ್ರಿಯೆಯನ್ನು ಶುರು ಮಾಡಿವೆ. ಇವೆಲ್ಲದರ ನಡುವೆ ಚೈತ್ರ ಎನ್ನುವ ಹೆಣ್ಣು ಮಗಳು ಹಲವಾರು ಯುವತಿಯರಿಗೆ ಪಾಠದ ಹಾದಿ ತೋರಿದ್ದು ಮಾತ್ರ ಸುಳ್ಳಲ್ಲ. ಈಗ್ಗೆ ನಾಲ್ಕು ವರ್ಷಗಳ ಹಿಂದೆ ಸಮಿತಿಯ ಟೇಬಲ್ ಮುಂದೆ ಬಂದು ನಿಂತ ಯುವತಿಗೆ ಇನ್ನೂ 18 ತುಂಬಬೇಕಿತ್ತು. ಕೈ ಪೂರ್ತೀ ಸಿಂಹದ ಮುಖವುಳ್ಳ ಹನುಮಂತನ ಚಿತ್ರದ ಹಚ್ಚೆ. ಸ್ಪಷ್ಟ, ಸುಲಲಿತ ಕನ್ನಡ ಮಾತು. ಧರ್ಮ ಸಂರಕ್ಷಣೆ ಎನ್ನುವ ಅಫೀಮು ಕುಡಿಸಿದ್ದು ಅವಳ ದೊಡ್ಡಪ್ಪನ ಮಗ. ಇವಳೂ ಎಲ್ಲರ ಜೊತೆ ಊರೂರು ಸುತ್ತಿದಳು. ಹುಡುಗರ ಜೊತೆ ಜೈಕಾರ ಕೂಗುತ್ತಿದ್ದವಳಿಗೆ ಹೊತ್ತುಗೊತ್ತು ಇಲ್ಲದ ಜೀವನ ಅಭ್ಯಾಸ ಆಯಿತು. ತಂದೆ ಇದನ್ನು ವಿರೋಧಿಸಿ 10ನೆಯ ತರಗತಿಯನ್ನಾದರೂ ಓದಲಿ ಎನ್ನುವ ಆಸೆಯಿಂದ ಕೋಣೆಯೊಳಗೆ ಕೂಡಿ ಹಾಕುತ್ತಿದ್ದ. ಇವಳ ಧರ್ಮದಮಲು ಇಳಿಯಲೊಲ್ಲದು, ಅದಕ್ಕೆ ಸಾಥ್ ಕೊಡುತ್ತಿದ್ದ ಹುಡುಗರು. ಪದೇಪದೇ ಮನೆ ಬಿಟ್ಟು ಅವರೊಡನೆ ಹೋಗುತ್ತಿದ್ದಳು. ಮನೆಯವರು ಸೇರಿಸಿಕೊಳ್ಳದಾದರು. ಪ್ರೀತಿ ಮಾ

Message me for the book

Image
  "ಕಂಡಷ್ಟೂ ಪ್ರಪಂಚ " ಇದು ದೇಶ ವಿದೇಶಗಳ ವಿವಿಧ ಭಾಗಗಳಿಗೆ ಭೇಟಿ ಇತ್ತ ನನ್ನ ಪ್ರವಾಸ ಅನುಭವ ಕಥನ. ನಿಮ್ಮ ಶಾಲಾ ಕಾಲೇಜಿನ ಗ್ರಂಥಾಲಯಗಳಿಗೆ ತರಿಸಲು ವಿಳಾಸ ಮೆಸೇಜ್ ಮಾಡಿ. ಪುಸ್ತಕದ ಬೆಲೆ 300/- ರೂ Kandashtoo Mancha" This is my travel experience story of visiting different parts India and many other countries, written in Kannada language  To place order for the library of your school and colleges please message me the address. The price of the book is Rs. 300/-

ಕಂಡಷ್ಟೂ ಪ್ರಪಂಚ release

Image
  ಜೇನ್ ಡೀಮ್ಡ್ ಯೂನಿವರ್ಸಿಟಿಯ ರಿಜಿಸ್ಟ್ರಾರ್ Dr. ಜಿತೇಂದ್ರ ಶಾ, ಪ್ರೊ.ಗೀತಾ ಮಧುಸೂದನ್ ಮತ್ತು ಪ್ರೊ. ರಾಜೇಶ್ವರಿ ವೈ ಎಂ ಅವರುಗಳು ನೂರು ವಿದ್ಯಾರ್ಥಿಗಳ ಎದುರು ನನ್ನ ಪುಸ್ತಕ ಕಂಡಷ್ಟೂ ಪ್ರಪಂಚ ಪುಸ್ತಕವನ್ನು ಬಿಡುಗಡೆ ಮಾಡಿದರು. (12-08-2023) ಖುಷಿಯ ವಿಷಯ ಎಂದರೆ ಡಾ.ಶಾ ಅವರು " ನನಗೆ ಕನ್ನಡ ಓದಲು ಇನ್ನೂ ಬರುವುದಿಲ್ಲ ಆದರೆ ಓದಬಲ್ಲ ನನ್ನ ಸ್ನೇಹಿತರಿಗಾಗಿ ಈ ಪುಸ್ತಕ ಕೊಳ್ಳುತ್ತೇನೆ" ಎಂದದ್ದು ಮತ್ತು Ragging ಕಾನೂನು ಬಗ್ಗೆಯ ಉಪನ್ಯಾಸದ ನಂತರ ವಿದ್ಯಾರ್ಥಿಗಳು ಪ್ರವಾಸದ ಆಸಕ್ತಿ ಮತ್ತು ಅಭಿರುಚಿಯ ಬಗ್ಗೆ ನಾನೇ ಸಾಕು ಎಂದು ಹೊರಟು ಬರುವವರೆಗೂ ಚರ್ಚೆ ಮಾಡಿದ್ದು.😍 ನಿಮಗೆ ಪುಸ್ತಕ ಬೇಕಿದ್ದಲ್ಲಿ ನಿಮ್ಮ ವಿಳಾಸ ಮೆಸೇಜ್ ಮಾಡಿ. ಬೆಲೆ ರೂ.300/-

ಕಂಡಷ್ಟೂ ಪ್ರಪಂಚ ಕಂಡ ಬಾಗೆ

Image
  ದಿಗ್ಗಜ ಸಾಹಿತಿ Dr. ಶಾಂತಾ ನಾಗರಾಜ್ ಅವರು " ಕಂಡಷ್ಟೂ ಪ್ರಪಂಚ " ಪುಸ್ತಕದ ಬಗ್ಗೆ 👇 ಹೀಗೆ ಬರೆದಿದ್ದಾರೆ. Feeling ಖುಷಿ ಖುಷಿ....ನಿಮ್ಮ ಪ್ರತಿಗಾಗಿ ವಿಳಾಸ ಮೆಸೇಜ್ ಮಾಡಿ. ಬೆಲೆ ರೂ 300/- " - ‘ ಕಂಡಷ್ಟೂ ಪ್ರಪಂಚ ‘ ಸಕತ್ತಾಗಿಯೇ ಪ್ರಪಂಚ ದರ್ಶನ ಮಾಡಿಸಿತು. ಅದೆಷ್ಟೊಂದು ವಿಚಾರಗಳಲ್ಲಿ ಬೆರಗುಗೊಂಡೆನೆಂದರೆ , ಅದರ ಪಟ್ಟಿ ಮಾಡಬೇಕು.  ನಿಮ್ಮ ಜೀವನೋತ್ಸಾಹಕ್ಕೆ ನಿಮ್ಮ ಚಾಲನ ಮತ್ತು ಧಾರಣ ಶಕ್ತಿಗೆ ನಿಮಗಿರುವ ಅಮೋಘವಾದ ಕುತೂಹಲಗಳಿಗೆ ನಿಮ್ಮ ಬರವಣಿಗೆಯ ಚೆಂದದ ಶೈಲಿಗೆ ಅತ್ಯಂತ ಸಣ್ಣವಿಷಯವೆನಿಸುವುದನ್ನೂ ಸ್ವಾರಸ್ಯವಾಗಿ ವಿಸ್ತರಿಸುವ ನಿಮ್ಮ ಕಲ್ಪನಾ ಸಾಮರ್ಥ್ಯಕ್ಕೆ ಎಲ್ಲಕ್ಕೂ ನಮೋನಮಃ ಎನ್ನದೇ ಬೇರೆ ದಾರಿಯೇ ನನಗೆ ಕಾಣುತ್ತಿಲ್ಲ.  ನನ್ನ ಇನ್ನೊಂದು ಅನುಭವವನ್ನು ಇಲ್ಲಿ ಹೇಳಲೇ ಬೇಕು. ಒಂದು ಪ್ರಪಂಚದ ಮ್ಯಾಪ್ ಇಟ್ಟುಕೊಂಡು, ಈ ಪುಸ್ತಕದಲ್ಲಿನ ಅಧ್ಯಾಯಗಳ ಊರನ್ನು ಗುರುತಿಸುತ್ತಾ , ಒಂದಕ್ಕೊಂದು ಗೆರೆ ಎಳೆದು ಸೇರಿಸಿದರೆ , ಕೊನೆಯ ಅಧ್ಯಾಯ ಬರುವಹೊತ್ತಿಗೆ ಮ್ಯಾರಿನ ತುಂಬಾ ಗೀಚುಗಳಾಗಿ , ಅದರೊಳಗಿನಿಂದ ಸೈಕಲ್ ರಿಕ್ಷಾ ಹಿಡಿದ ಅಂಜಲಿ ರಾಮಣ್ಣ ನಸುನಗುತ್ತಿರುತ್ತಾರೆ ! ಇಡೀ ಪುಸ್ತಕ ಓದಿದ ಮೇಲೆ ರೋಲರ್ ಕೋಸ್ಟರ್ ನಲ್ಲಿ ಅಡ್ಡಡ್ಡ ಉದ್ದುದ್ದ ತಿರುಗಿದಂತಾಗಿ ತಲೆ ಸುತ್ತುವುದು ಖಂಡಿತಾ! ನಿಮ್ಮ ತುಂಟ ಮನ ಬೇಕೆಂದೇ ಚಾಪ್ಟರ್ ಗಳನ್ನು ಹೀಗೆ ಜೋಡಿಸಿರಬಹುದೆನ್ನುವ ಅನುಮಾನ ನನಗೆ.  ಅಭಿನಂದನೆಗಳು ಮತ್ತು ಪ್ರೀ

ಮತ್ತೊಮ್ಮೆ ಕಂಡಷ್ಟೂ ಪ್ರಪಂಚ ಬಗ್ಗೆ

Image
  ಲಿಮ್ಕಾ ದಾಖಲೆ ಹೊಂದಿರುವ ಸಾಹಿತಿಗಳ ಕುಟುಂಬದ ಉದಯ್ ಕುಮಾರ್ ಹಬ್ಬು ಅವರು ನನ್ನ ಕಂಡಷ್ಟೂ ಪ್ರಪಂಚ ಪುಸ್ತಕದ ಬಗ್ಗೆ ಹೀಗೆ ಬರೆದಿದ್ದಾರೆ.... "ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ವಕೀಲರು, ಅಂಲಣಕಾರರು ಮತ್ತು ಲೇಖಕರೂ ಆದ ಅಂಜಲಿ ರಾಮಣ್ಣ ಈ ವಿಶೇಷ್ಟವಾದ ಪ್ರವಾಸಿ ಕಥನ ಸಾಹಿತ್ಯ ಕೃತಿಯನ್ನು ಕಳಿಸಿದ್ದಾರೆ‌ ವಿಶೇಷ್ಟ ಯಾಕೆ ಎಂದರೆ ಇತರ ಪ್ರವಾಸಿ ಕಥನಗಳಂತೆ ಒಂದೇ ದೇಶದ ಪ್ರವಾಸ ಕಥನವಲ್ಲ. ಇಡೀ ಪ್ರಪಂಚಾದ್ಯಂತ ಇರುವ ವಿವಿಧ ದೇಶಗಳ ಹಾಗೂ ನಮ್ಮ‌ದೇಶದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಹೋಗಿ ತನ್ನದೆ ರೀತಿಯಿಂದ ಆ ಸ್ತಳಗಳನ್ನು ವೀಕ್ಷಿಸಿ ಅಲ್ಲಿನ ವಿಶಿಷ್ಟತೆಗಳ ಕುರಿತು ತನ್ನದೆ ಅನುಭವದ ಮಾತುಗಳಲ್ಲಿ ಕಾವ್ಯಮಯವಾಗಿ ಅಭಿವ್ಯಕ್ತಿಸುವುದು. ಇದರಿಂದ ಓದುಗರಿಗೆ ಆಗುವ ಪ್ರಯೋಜನವೇನೆಂದರೆ ಆ ತಾಣಗಳಿಗೆ ಹೋಗಿನೋಡುವ ಪ್ರೇರಣೆ ನೀಡುತ್ತದೆ. ಅಷ್ಟೆಲ್ಲ ದೇಶಗಳಿಗೆ ನಮ್ಮದೆ ದೇಶದ ಪ್ರವಾಸಿ ತಾಣಗಳಿಗೆ ಹೋಗಲು ಸಾಧ್ಯವಿಲ್ಲದಿರುವವರಿಗೆ  ಮನೆಯಲ್ಲೆ ಕುಳಿತು ಆ ಸ್ಥಳಗಳ ಸ್ವಾರಸ್ಯಕರ ಮಾಹಿತಿಗಳನ್ನು ಆಸ್ವಾದಿಸಿ ನಮ್ಮ ಜ್ಞಾನಸಿಂಧು ಕೋಶಕ್ಕೆ ಸೇರಿಕೊಂಡ ಧನ್ಯತೆ ನಮ್ಮದಾಗುತ್ತದೆ ಅಂಜಲಿಯು ಏಕಾಂಗಿಯಾಗಿ ತಾನು ಓದಿದ ಸ್ಥಳಗಳಿಗೆ  ಪ್ರವಾಸದ ಅಚ್ಚುಕಟ್ಟು ಯೋಜನೆಗಳೊಂದಿಗೆ ಹೊರಟುಬಿಡುತ್ತಾರೆ. ಅವರು ಈ ಪುಸ್ತಕದ ಕೊನೆಯ ಅಧ್ಯಾಯದಲ್ಲಿ ದೇಶ ವಿದೇಶಗಳಿಗೆ ಪ್ರವಾಸ ತಾಣಗಳಿಗೆ ಹೋಗುವವರಿಗೆ ಖಚಿತವಾದ ಮಾರ್ಗದರ್ಶಿ ಸಲಹೆಗಳನ್ನು ತಮ್ಮ ಪ್ರವಾಸಗಳ ಅನುಭವ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್

Image
 ಉದ್ಯೋಗಸ್ಥ ಮಹಿಳೆಯರಿಗಾಗಿ ಸರ್ಕಾರ ನಡೆಸುತ್ತಿರುವ ಹಾಸ್ಟೆಲ್ ಸೌಕರ್ಯದ ಬಗ್ಗೆ DD ಚಂದನದಲ್ಲಿ ದಿನಾಂಕ 07-08-2023 ರಂದು ಓ ಸಖಿ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಂಪೂರ್ಣ ಮಾಹಿತಿ ನೀಡಲಾಯಿತು. ವಿಷಯ ತಿಳಿಯಲು ಈ ವೀಡಿಯೋ ನೋಡಿ.  

Garden of caves -Meghalays

Image
  ಅದೊಂದು ದಟ್ಟ ಅರಣ್ಯ. ಅರಣ್ಯ ಎಂದಮೇಲೆ ನೂರೆಂಟು ರಹಸ್ಯವೂ ಜೊತೆಯಾಗಿತ್ತು. ಎಂಟು ಎಕರೆಗಳ ಜಾಗದಲ್ಲಿ ಪರ್ವತದಿಂದ ಇಳಿದು ಪ್ರಪಾತದಲ್ಲಿ ಪ್ರಕೃತಿ ಗುಹೆಯಾಗಿ ಮೈಚಾಚಿದ್ದಳು. ಗುಹೆ ಎಂದರೆ ಬರಿಯ ಗುಹೆಯಲ್ಲವೋ ಜಾಣ ಎನ್ನುತ್ತಾ ಒಳಗೆ ಹನ್ನೊಂದು ಜಲಪಾತಗಳಲ್ಲಿ ಹರಿಯುತ್ತಿದ್ದಳು. ಎಪ್ಪತ್ತೆರಡು ಬೆಟ್ಟೇಣುಗಳಲ್ಲಿ ಗುಟ್ಟಾಗಿದ್ದಳು. ಹತ್ತಾರು ತಾಮ್ರ ಬಣ್ಣದ ಮೂಲವೇ ಕಾಣದಂತೆ ನೇತಾಡುವ ಕಲ್ಪದರುಗಳ ಜೋಕಾಲಿಯಾಗಿದ್ದಳು. ಪಕ್ಕದಲ್ಲಿ ಹಸಿರಾಗಿ ಹಬ್ಬಿದ್ದಳು. ಹಕ್ಕಿಯ ಕಲರವಕ್ಕೆ ತಾವು ನೀಡುತ್ತಾ ನಡುನಡುವೆ ಬೆಳಕಿನ ಕಿಂಡಿಯಾಗಿ ದೂರದ ಆಕಾಶ ತೋರುತ್ತಿದ್ದಳು. ನುಣುಪು ಚಿಕ್ಕ್ಬಂಡೆಯಲ್ಲಿ ತೂಕಡಿಸುತ್ತಾ ಹಾಸಿಗೆಯಾಗಿದ್ದಳು ಅದಕ್ಕೆ ಸಪೂಟಾದ ಕಲ್ಲನ್ನೇ ದಿಂಬಿನ ಆಕಾರದಲ್ಲಿ ಅರಳಿಸಿದ್ದಳು. ದುಂಬಿಗಾಗಿ ಹೂವಾಗಿದ್ದಳು. ಹೃದಯಾಕಾರದ ಹಾಸುಕಲ್ಲಿನಲ್ಲಿ ನೀರು ನಿಲ್ಲಿಸಿ ಕನ್ನಡಿಯಾಗಿದ್ದಳು. ಹೀಗೆಲ್ಲಾ ಇದ್ದ ಪ್ರಕೃತಿ ಸಿಕ್ಕಿದ್ದು ಖಸಿ ಪರ್ವತಶ್ರೇಣಿಯ ನಟ್ಟ ನಡುವಿನಲ್ಲಿ. ಚಿರಾಪುಂಜಿಯಿಂದ ಹತ್ತು ಕಿಲೋಮೀಟರ‍್ಗಳ ಅಂತರದಲ್ಲಿ. ಮೇಘಾಲಯದಲ್ಲಿ. ನೂರಕ್ಕೂ ಮಿಗಿಲಾದ ಗುಹೆಗಳನ್ನು ತನ್ನೊಳಗೆ ಇರಿಸಿಕೊಂಡಿರುವ ರಾಜ್ಯ ಮೇಘಾಲಯ. ಏಕಶಿಲಾ ಗುಹೆ ಅಂತ ಒಂದು ಜಾಗವನ್ನು ತೋರಿಸಿದ್ದ ಚಾಲಕ ಬುರಿತ್. ಯಾಕೋ ಪ್ರವಾಸಿಗರನ್ನು ಉತ್ಪ್ರೇಕ್ಷೆಯಲ್ಲಿಯೇ ಕರೆಯುತ್ತಿದೆ ಎನ್ನಿಸಿತು ಆ ಜಾಗ. “ಏನು ಬುರಿತ್ ಅಷ್ಟು ದೂರದಿಂದ ಬಂದವಳನ್ನು ಈ ಗುಹೆ ತೋರಿಸಿ ನಿರಾಸೆ ಮ

Talk in News 1st TV

Image
 ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ಎಂದು ಬ್ರಹ್ಮಚಾರಿಗಳು ಬಯಸಿಯೂ ಹೆಣ್ಣು ಸಿಗದೆ ಒಂಟಿ ಕಣ್ಣಲ್ಲಿ ಅಳುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂದು News 1st TV ಯವರು ಮೊನ್ನೆ (18-06-2023) ಕೇಳಿದಾಗ ಇಷ್ಟು ಹೇಳಿದೆ. ಸಮಯ ಆದಾಗ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.  https://youtu.be/X8S5pnXQJDc

Special Markets of Chirapunji

Image
    ಮನೆಯಿಂದ ಹೊರಟಾಗ ಚಿರಾಪುಂಜಿ ಎಂದರೆ ಪ್ರೈಮರಿ ಶಾಲೆಯಲ್ಲಿ ಹೇಳಿಕೊಟ್ಟಿದ್ದಂತೆ ಭಾರತದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಎನ್ನುವುದು ಮಾತ್ರ ತಲೆಯಲ್ಲಿ ಇತ್ತು.   ಶಿಲ್ಲಾಂಗ್ನಿಂದ ಒಂದುವರೆ ಗಂಟೆಯ ಪ್ರಯಾಣ ಮಾತ್ರ ಎಂದಾಗ ಖುಷಿಯೋ ಖುಷಿ. ಹೋಗ್ತಾನೇ ಇದ್ದರೂ ಎಲ್ಲೂ ಚಿರಾಪುಂಜಿ ಅಂತ ಬೋರ್ಡ್ ಕಾಣದೆ ಚಾಲಕ ಬುರಿತ್ ಧೊತ್‍ದಾಂಗ್‍ನನ್ನು ಕೇಳಿದೆ. “ನೀವೀಗ ಚಿರಾಪುಂಜಿಯಲ್ಲಿಯೇ ಇದ್ದೀರ” ಎಂದ. ಹೌದು, ಚಿರಾಪುಂಜಿಯ ಮೂಲ ಹೆಸರು ಸೋಹ್ರಾ. ನಾಲಿಗೆ ಹೊರಳದ ಬ್ರಿಟೀಷರು ಚಿರಾಪುಂಜಿ ಎಂದಿದ್ದಾರೆ. ಇಂದಿಗೂ ಇಲ್ಲಿನ ಜನ ಸೋಹ್ರಾ ಎಂತಲೇ ಕರೆಯುವುದು. ಇಲ್ಲಿ ಈಗ ಪುಸ್ತಕಗಳಲ್ಲಿ ಓದಿದ ಹಾಗೆ ಮಳೆ ಬರುವುದಿಲ್ಲ. ಖಸಿ ಬೆಟ್ಟಗಳ ಸಾಲಿನ ನಟ್ಟನಡುವೆ ಹಸಿರಾಡುತ್ತಾ ಇರುವ ಈ ಊರಿಗೆ ಬೇಸಿಗೆಯ ಧಾಳಿ ಆಗಿದೆ. ಹೆಚ್ಚಿದ ಗಣಿಗಾರಿಕೆಗೆ ಮಳೆ ಬೆಚ್ಚಿಬಿದ್ದಿದೆ. ಫ್ಯಾನ್ ಇಲ್ಲದೆ ಇರಲು ಕಷ್ಟ ಎನ್ನುವಷ್ಟೇ ಬಿಸಿ ಏರಿಬಿಟ್ಟಿದೆ.   ಇನ್ನೂ ಅರ್ಧ ದಿನ ಸಮಯ ಇತ್ತು ಕತ್ತಲಾಗಲು. ಸ್ಥಳೀಯರು ಹೋಗುವ ಮಾರುಕಟ್ಟೆಗೆ ಹೋಗುವುದು ನನಗೆ ಬಲು ಅಚ್ಚುಮೆಚ್ಚು. ಹೊರಟಾಗ “ಇವತ್ತು ಮಾರುಕಟ್ಟೆ ಇಲ್ಲ, ನಾಳೆ ಇದೆ” ಎಂದ ಸೆರಿನಿಟಿ ಟ್ರ್ಯಾವೆಲೆರ್ಸ್ ಇನ್ನ್ ತಂಗುದಾಣದ ಮಾಲೀಕ ಮಿಚೇಲ್. “ಅರೆ, ಅದೇನು ಸಂತೆಯೇ ನಿಗಧಿತ ದಿನದಲ್ಲಿ ಇರಲು” ಎನ್ನುವ ಪ್ರಶ್ನೆಗೆ ಅಲ್ಲಿದ್ದವರೆಲ್ಲಾ ಕೊಟ್ಟ ವಿವರ ಆಸಕ್ತಿದಾಯಕವಾಗಿತ್ತು. ಬೆಳಿಗ್ಗೆ ಹತ್ತು ಗಂಟೆಗೆ ನಿಂತಿದ್ದೆ ಐವ್

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

Image
  ಎರಡನೆಯ ಬಾರಿಗೆ ಈ ಮಕ್ಕಳನ್ನು ರಸ್ತೆಯಲ್ಲಿ ಸಿಕ್ಕರು ಎನ್ನುವ ಕಾರಣಕ್ಕೆ ಪೋಲೀಸರು ತಂದು ನಿಲ್ಲಿಸಿದ್ದರು. ಕಂಕುಳಲ್ಲಿ ಒಣಗಿದ ಪಿಳ್ಳೆಯೊಂದನ್ನು ಎತ್ತಿಕೊಂಡು, ಸಿಂಬಳ ಸುರಿಸುತ್ತಾ ತಪ್ಪು ಹೆಜ್ಜೆ ಇಡುತ್ತಿದ್ದ ಇನ್ನೊಂದು ಮಗುವೊಂದನ್ನು ದರದರ ಎಳೆದುಕೊಂಡು ಅಳುತ್ತಾ ಬಂದು ನಿಂತಳು ತಾಯಿ. ಗಂಡನನ್ನು ಕರೆದುಕೊಂಡು ಬರಲು ತಾಕೀತು ಮಾಡಲಾಯಿತು. ಅದೇ ಸ್ಥಿತಿಯಲ್ಲಿ ಇಬ್ಬರೂ ಬಂದು ನಿಂತರು. ಹಿಂದಿನ ರಾತ್ರಿ ಅವನು ಮದ್ಯದಲ್ಲಿ ಮಿಂದೆದ್ದಿದ್ದ ಎನ್ನುವುದರಲ್ಲಿ ಅನುಮಾನವೇ ಇರಲಿಲ್ಲ. ಸಿಟ್ಟು ನೆತ್ತಿಗೇರಿತು. “ಸಾಕಲು ಯೋಗ್ಯತೆ ಇಲ್ಲದಿದ್ದ ಮೇಲೆ ಅದ್ಯಾಕೆ ಮಕ್ಕಳು ಮಾಡಿಕೊಳ್ಳುತ್ತೀರ? ಏನಮ್ಮ ನಿನಗೆ ನಾಚಿಕೆ ಆಗಲ್ಲ್ವಾ?” ಅಂತ ಜೋರು ದನಿ ಮಾಡಿದೆ. ಕೂಡಲೇ ಗೊಳೋ ಅಂತ ಅವಳ ದನಿ ನನ್ನದಕ್ಕಿಂತ ದುಪ್ಪಟ್ಟಾಯ್ತು. “ನಾಚಿಕೆ ಏನ್ ಮೇಡಂ ಜೀವನಾನೇ ಸಾಕಾಗಿದೆ. ಈ ಮಕ್ಕಳಿಗೆ ಅನ್ನಕ್ಕೆ ಒಂದು ದಾರಿ ಮಾಡಿ ಕೊಡಿ ನೀವು ಇವನನ್ನೂ ಬಿಟ್ಟು ಎಲ್ಲಾದರು ಹೋಗಿ, ದುಡ್ಕೊಂಡು ತಿನ್ನ್ಕೋತೀನಿ” ಎನ್ನುತ್ತಾ ಅಳು ಮುಂದುವರೆಸಿದಳು. ಆರು ವರ್ಷಗಳ ಹಿಂದೆ ಮದುವೆಯಾದವಳ ಗಂಡ ಕುಡುಕ. ಎರಡು ಹೆಣ್ಣು ಮಕ್ಕಳನ್ನು ಕೈಗಿತ್ತು ಅಪಘಾತದಲ್ಲಿ ಸತ್ತಿದ್ದ. “ಗಂಡು ದಿಕ್ಕಿಲ್ಲದೆ ಹೆಂಗೆ ಬಾಳ್ವೆ ಮಾಡೋದು ಮೇಡಂ” ಎಂದಳು. ಅದಕ್ಕೇ ಹೀಗೆ ಮುಂದೆ ನಿಂತಿದ್ದವನನ್ನು ಮದುವೆಯಾಗಿದ್ದಳು. “ ಇವನಿಗೆ ಅವರಪ್ಪ ಕೊಟ್ಟಿರೋ ಮನೆ ಇದೆ ಮೇಡಂ. ನೀನು ಮಕ್ಕಳನ್ನು ನೋಡಿಕೊಂಡು ಮನೆಯ