Posts

Gandhi in Gadag

Image
  ಇಳಿದುಕೊಂಡಿದ್ದ ಅತಿಥಿಗೃಹದಿಂದ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ ಹತ್ತಿರ ಹತ್ತಿರ ಒಂದೂವರೆ   ಕಿಲೋಮೀಟರ್ಗಳ ದೂರ. ಸುತ್ತಲೂ ಕೆಮ್ಮಣ್ಣಿನ ಒಣ ಬಯಲು, ನೆತ್ತಿಯ ಬೈತಲೆಯಂತೆ ಕಡೆದಿದ್ದ ಮಣ್ಣಿನ ಡೊಂಕು ಸಪೂಟು ರಸ್ತೆ.   ಹೆಜ್ಜೆಗಳು ನೀರೆತ್ತುವ ಏತದಂತೆ ಏರಬೇಕಿತ್ತು ಅಷ್ಟೇ. ಬೆಂಗಳೂರಿನಲ್ಲಿ ಆಗತಾನೆ ಹುಟ್ಟುತ್ತಿದ್ದ ಸೂರ್ಯ ಅಲ್ಲಾಗಲೇ ಶಾಖವಾಗಿಬಿಟ್ಟಿದ್ದ. ಸೆರಗ ಹೊದ್ದು ಸರಸರನೆ ನಡೆವಾಗ ಸಭಾಂಗಣಕ್ಕೆ ಇಪ್ಪತ್ತು ಹೆಜ್ಜೆ ಮೊದಲೇ ಕಂಡ ಬೋರ್ಡಿನಲ್ಲಿತ್ತು ’ಸಾಬರಮತಿ ಆಶ್ರಮ’. ಹೆತ್ತೂರಿಂದ ವಿದೇಶದವರೆಗೂ ಕಂಡಿದ್ದ ಪುಣ್ಯಾತ್ಮ ಇಲ್ಲೂ ಕಂಡಿದ್ದ. ಆಸಕ್ತಿ ಬಿಸಿಲಿನಂತೆಯೇ ಏರುತ್ತಿತ್ತು. ಕಾರ್ಯಕ್ರಮದ ಸಮಯ ಬಂದಿತ್ತು. ಹಿಂದಿರುಗುವ ಮೊದಲು ಇಲ್ಲಿನ ಗಾಂಧಿಯ ಭೇಟಿ ಆಗಲೇ ಬೇಕು ಎಂದುಕೊಂಡು ಮುಂದೆ ಹೋದೆ.          ಆ ದಿನ ಮಕ್ಕಳ ಹಕ್ಕುಗಳ ಗ್ರಾಮಸಭೆ, ಪರಿಣಾಮಕಾರಿ ಆಯೋಜನೆ ಮತ್ತು ಜಾರಿ ಕುರಿತು ಕರ್ನಾಟಕ   ರಾಜ್ಯ ಮಟ್ಟದ ಸಮ್ಮೇಳನವನ್ನು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ಇವರು ಆಯೋಜಿಸಿದ್ದರು. ಉಪಸ್ಥಿತಿಗಾಗಿ ಹೋಗಿದ್ದೆ. ಮಾತುಕತೆಗಳಲ್ಲಿ ಕುಲಪತಿ ಪ್ರೊ.ವಿಷ್ಣುಕಾಂತ್ ಎಸ್ ಚಟಪಲ್ಲಿ ಅವರು “ಬೆಳಗಿನ ಭಜನೆಗೆ ನೀವು ಬರುತ್ತೀರ ಎಂದುಕೊಂಡಿದ್ದೆ” ಎಂದಾಗ ಅಲ್ಲಿನ ಸಾಬರಮತಿಯ ಬಗೆಗಿನ ಕುತೂಹಲ ಮತ...

Child marriage prevention Lecture in Tumakur a report

Image
 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತುಮಕೂರು, ಇವರು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವಜನ ಮೇಳ ಕಾರ್ಯಕ್ರಮದಲ್ಲಿ, ಬಾಲ್ಯವಿವಾಹ ನಿಷೇಧ ಕುರಿತು ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ ಬಳಿ 9ನೇ ತರಗತಿಯ ಇಬ್ಬರು ಬಾಲಕಿಯರು ಬಂದು " ನಿಮ್ಮ ಮಾತು ಕೇಳುತ್ತಿರುವಾಗ I went little emotional " ಎಂದು ಹೇಳಿದ್ದು ದಿನವನ್ನು ಸಾರ್ಥಕ ಗೊಳಿಸಿತ್ತು. ಪತ್ರಿಕಾ ವರದಿ ಇಲ್ಲಿದೆ. 25.02.2023

Reaction on state budget 2023

Image
             ಬಜೆಟ್ ಎಂದರೆ ಹಾಗೆ, ಬಾಯಿ ಹೊಲೆದು ಮೂಗಿಗೆ ತುಪ್ಪ ಸವರೋದು, ಕೈಬೆರಳುಗಳ ತುದಿಗೆ   ಚಾಕಲೇಟನ್ನೂ ಮೆತ್ತುವುದು. ಆದರಲ್ಲೂ ಚುನಾವಣೆ ಎನ್ನುವ ನರಸಿಂಹ ಹೊಸಲಿನ ನಡುವಲ್ಲಿ ಕುಳಿತಿರುವಾಗ ಮಂಡಿತವಾಗುವ   ಬಜೆಟ್ ಕಶ್ಯಪ ಬ್ರಹ್ಮನ ಸುಕುಮಾರನೇ ಸರಿ.    ಎಂದಿನಂತೆ, ಈ ವರ್ಷದ ರಾಜ್ಯ ಆಯವ್ಯಯದಲ್ಲೂ ಹೊಸಹೊಸ ಘೋಷಣೆಗಳಾಗಿವೆ. ಅದು ಎಷ್ಟರ ಮಟ್ಟಿಗೆ ಅನುಮೋದನೆ ಪಡೆದು ಸಮಯಕ್ಕೆ ಸರಿಯಾಗಿ ಜಾರಿಗೆ ಬರಲಿದೆ ಎನ್ನುವುದು ಉತ್ತರವಿಲ್ಲದ ಪ್ರಶ್ನೆ. ಮೊನ್ನೆ ಸಿದ್ದರಾಮಯ್ಯನವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆಜಿ ಉಚಿತ ಅಕ್ಕಿ ಎಂದ ಧ್ವನಿ ಮುಗಿಯುವ ಮೊದಲೇ ಮುಖ್ಯಮಂತ್ರಿಗಳು 6 ಕೆಜಿ ಕೊಡಲು ಮುಂದಾಗಿದ್ದಾರೆ. ಆದರೆ ಕೊನೆ ಮನೆಯ ಒಲೆಯ ಮೇಲೆ ಅಕ್ಕಿ ನೆಮ್ಮದಿಯ ಕುದಿಯಾಗುವವರೆಗೂ ಇದು ರಾಜಕೀಯವಾಗಿ ಬೇಯುವ ಬೇಳೆಯೇ ಹೊರತು ನಿಜಾರ್ಥದ ಸಾಮಾಜಿಕ ನ್ಯಾಯ ಅಲ್ಲ. ಆಸ್ಪತ್ರೆಯಲ್ಲಿ ಮಗು ಹೆತ್ತು ತಮ್ಮತಮ್ಮ ಮನೆಗೆ ಹೋಗಲು ನಲುಗುವ ಬಾಣಂತಿ ಮಗುವಿಗೆ ’ನಗು ಮಗು ವಾಹನ’ ಎನ್ನುವ ಯೋಜನೆ ಅತ್ಯಾವಶ್ಯಕವಾದದ್ದು. ಇದಿಲ್ಲದೆ ಕರೋನಾ ಸಮಯದಲ್ಲಿ ಒದ್ದಾಡಿದ ಜನರನ್ನು ಮರೆಯಲು ಸಾಧ್ಯವೇ ಇಲ್ಲ. ~ಆಸಿಡ್ ಧಾಳಿಯಿಂದ ನೊಂದವರಿಗೆ 3 ಸಾವಿರ ಮಾಸಾಶನವನ್ನು 10 ಸಾವಿರಕ್ಕೆ ಏರಿಸಿರುವುದು ಸ್ವಾಗತಾರ್ಹ ಆದರೆ ಅವರುಗಳ ಶಸ್ತ್ರಚಿಕಿತ್ಸೆಗೆ ನೀಡುತ್ತಿರುವ...

Traing to CMPOs of Tumkur and Bengaluru Urban

Image
  ದಿನಾಂಕ 6 ಜನವರಿ 2023 ರಂದು ತುಮಕುರು ಜಿಲ್ಲೆಯ ಬಾಲ್ಯವಿವಾಹ ತಡೆಗಟ್ಟುವಿಕೆ ಅಧಿಕಾರಿಗಳಿಗೆ ಕಾನೂನು ಮತ್ತು ನಿಗಧಿತ ಪ್ರಕ್ರಿಯೆ ಬಗ್ಗೆ ತರಬೇತಿ ಕೊಟ್ಟೆ. ಬಾಲ್ಯವಿವಾಹ 0% ಆದರೆ ನೀವುಗಳು ತೆಗೆದು ಕೊಳ್ಳುತ್ತಿರುವ ಸಂಬಳಕ್ಕಿಂತ ಒಂದುವರೆ ಪಟ್ಟು ಹೆಚ್ಚಿನ ಸಂಬಳ ಪಡೆಯಬಹುದು ಮತ್ತು ಅದಕ್ಕೆ ನೀವು ಅರ್ಹರಿದ್ದೀರ ಎಂದಾಗ ಅವರುಗಳು ಚಕಿತರಾಗಿದ್ದು ಸುಳ್ಳಲ್ಲ. ಬಾಲ್ಯವಿವಾಹ ಎಂದರೆ ಕೇವಲ ಹೆಣ್ಣು ಮಕ್ಕಳ ದೇಹಕ್ಕೆ ಸಂಬಂಧ ಪಟ್ಟ ವಿಷಯ ಅಲ್ಲ ಈ ದೇಶದ ಆರ್ಥಿಕತೆಗೂ ಸಂಬಂಧ ಪಟ್ಟಿದ್ದಾಗಿದೆ. ಬೆಂಗಳೂರು ನಗರ ಜಿಲ್ಲೆಯ ಬಾಲ್ಯವಿವಾಹ ನಿಷೇಧಾಧಿಕಾರಿಗಳಿಗೆ ಕಾನೂನು ಮತ್ತು ನಿಗಧಿತ ಕಾರ್ಯವಿಧಾನದ ತರಬೇತಿ ಕೊಡುವಾಗ ಹಾಜರಿದ್ದ ಯುವ ಪೊಲೀಸ್ ಒಬ್ಬರು ತರಬೇತಿಯ ಕೊನೆಯಲ್ಲಿ "ಮೇಡಮ್, ನಾನು ಪ್ರೊಬೇಷನರಿಯಲ್ಲಿ ಇದ್ದಾಗ ಒಮ್ಮೆ ನಿಮ್ಮ ಬಳಿ ಫೋನ್ ನಲ್ಲಿ ಮಾತನಾಡಬೇಕಾದ ಸಂದರ್ಭ ಬಂತು. ಆಗ ನಮ್ಮ ಇನ್ಸ್ಪೆಕ್ಟರ್ ಆ ಮೇಡಂ ಜೊತೆ ಎಚ್ಚರಿಕೆಯಿಂದ ಮಾತನಾಡು ಅಂತ ಹೇಳಿದ್ದರು. ಈಗಿನಂತೆ ಆಗಲೂ ನಿಮ್ಮ ಮಾತುಗಳು ನನಗೆ ತುಂಬಾ ಸಹಾಯ ಆಯ್ತು" ಎಂದಾಗ ...... ನಿರಾಸೆ ಎನ್ನುವ ಗಂಧ ಗಾಳಿಯಲ್ಲಿ ತೇಲಿ ಬಂದಾಗ ಇಂತಹ ಘಂ ಎನ್ನುವ ಮಾತುಗಳು ಉಚ್ಛ್ವಾಸ ಆಗಿ ಮತ್ತೆ ಮತ್ತೆ ’ರಸ್ತೆಗೆ’ ಇಳಿಸುತ್ತದೆ. ಮನದ ಭಾವಿಯಿಂದ ನೀರು ಸೇದಿಸುವ ಎಲ್ಲರಿಗೂ ಅದೆಷ್ಟು ಋಣವಿದೆ!

National Girl Child Day at Samrakshana CCi-28th Jan 2023

Image
ದಿನಾಂಕ 28 ಜನವರಿ 2023ರಂದು ಸಂರಕ್ಷಣಾ ಮಕ್ಕಳ ಪಾಲನಾ ಕೇಂದ್ರದ ಮಕ್ಕಳು ತಮ್ಮ ಅರಿವಿಗೆ ನಿಲುಕಿದಂತೆ ಬಾಲ್ಯವಿವಾಹ ಬೇಡ ಎನ್ನುವುದರ ಬಗ್ಗೆ ಒಂದು ಕಿರುನಾಟಕ ಮಾಡಿ ಹೆಣ್ಣು ಮಕ್ಕಳ ದಿನಾಚರಣೆ ಮಾಡಿದರು. ಶಕ್ತಿ ಸೋರಿಹೋಗದಂತೆ ತಡೆಯುವ ಬಿರಡೆಗಳು ಮಕ್ಕಳು.

ಆಂದೋಲನ ಪತ್ರಿಕೆಯಲ್ಲಿ

Image
              “ಹುಟ್ಟಿದ ಊರನು ಬಿಟ್ಟು ಬಂದಮೇಲೆ ಇನ್ನೇನು ಬಿಡುವುದು ಬಾಕಿ ಇದೆ. . .ಪರದೇಸಿ ಎದ್ದೇಳು ಕೊನೆ ಬಸ್ಸು ಟೈಮಾಗಿದೆ”  ಅಂತ ಹಾಡಾಗುತ್ತಿದ್ದ FM ಕೆಡಿಸಿಯೇ ಬಿಟ್ಟಿತು ತಲೆಯನ್ನು.  ಮೈಸೂರಿಗೆ ನಾನು ಹೋಗಿ ಒಂದು ತಿಂಗಳಾಯ್ತು ಅಂದರೆ ನನಗೆ ಕೊನೆ ಬಸ್ಸಿನ ಟೈಮ್ ಆಯ್ತೇ ಎನ್ನುವ ಆತಂಕದಿಂದಲೇ ಹಾಡನ್ನು ಪೂರ್ತೀ ಕೇಳಿದೆ. ಅಬ್ಬಬ್ಬಾ, ಭಾವನೆಗಳ ಹೊಟ್ಟೆಯನ್ನು ಹೇಗೆ ಕಿವುಚಿ ಬಿಟ್ಟಿದ್ದಾರೆ ಎಂದರೆ ಅಪ್ಪನ ಆಲದ ಮರಕ್ಕೆ ಜೋತು ಬೀಳದಿದ್ದರೆ ಭೂಮಿಗೆ ಬಂದಿದ್ದೇ ದಂಡ ಎನ್ನುವಂತೆ. ಅದಕ್ಕೇ ಇರಬೇಕು ಈಗ ಎಲ್ಲರೂ ಮರಳಿ ಮಣ್ಣಿಗೆ ಎನ್ನುವುದನ್ನು ಅಕ್ಷರಶಃ ಪಾಲಿಸಲು ಮುಂದಾಗುತ್ತಿರುವುದು ಮತ್ತು ಒಂದಷ್ಟು ಸೋಲುತ್ತಿರುವುದು ಕೂಡ.             ಪರಿಚಯದವನೊಬ್ಬ ತನ್ನ 20ನೆಯ ವಯಸ್ಸಿನಲ್ಲಿಯೇ ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹ ಮಾಡಿಕೊಂಡು ಅಮೇರಿಕೆಯ ಪಾಲಾಗಿದ್ದ. ಮಾತನಾಡಿದಾಗಲೆಲ್ಲಾ ಮೈಸೂರಿನ ನೆನಪಿನಲ್ಲಿ ನರಳುತ್ತಿದ್ದ. ಇನ್ನು ತಡೆಯಲು ಆಗುತ್ತಿಲ್ಲ ಎನಿಸಿದಾಗ ಗಂಟುಮೂಟೆಯನ್ನು ಮೈಸೂರಿಗೆ ಪಾರ್ಸೆಲ್ ಮಾಡಿ ಮಂಡಿಮೊಹಲ್ಲದಲ್ಲಿ ಇರುವ ತನ್ನ ಹುಟ್ಟು ಮನೆಯನ್ನು ಕಸಮುಸರೆ ಮಾಡಿ, ಪಾಯಸದ ತಪ್ಪಲೆಯಂತಾಗಿಸಿ ಸೆಕೆಂಡ್ ಇನ್ನಿಂಗ್ಸ್ ಜೀವನ ಶುರು ಮಾಡಿಯೇ ಬಿಟ್ಟ. ನಿತ್ಯವೂ ಕುಕ್ಕರಳ್ಳಿ ಕೆರೆ ದಂಡೆಯ ವಾಕಿಂಗ್. ತನ್ನನ್ನು ಸಾಫ್...

Talk on Girl child day in Doordarshan

Image
 

Girl child day 2023

Image
 18-24ಜನವರಿ ರಾಷ್ಟ್ರೀಯ ಹೆಣ್ಣು ಮಕ್ಕಳ ಸಪ್ತಾಹ ಆಚರಿಸಲು ಕೇಂದ್ರ ಸರ್ಕಾರದ ಆದೇಶ ಆಗಿದೆ.  ಎಲ್ಲಾ ರಾಜ್ಯಗಳಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇರಳ ರಾಜ್ಯದ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ದಿನಗಳಲ್ಲಿ ರಜೆ ನೀಡಲು ನಿರ್ಧರಿಸಿದ್ದಾರೆ. ಇವತ್ತಿನ Bangalore Mirror ಪತ್ರಿಕೆಯಲ್ಲಿ ನಾನು ಹೇಳಿರುವುದು ಹೀಗಿದೆ;  Anjali Ramana chairperson of the child welfare committee said "The authorities should provide basic infrastructure at schools for the girl students in rural areas" "Boys should be sensitized on how education for girls will help the economy of India" "I am also not in favour of the government sanctioning menstrual leave for girl students" "The main focus of the national girl child day should be on reducing the psychological gap between boys and girls" "The events planned on the occasion of national girl child day should not make boys feel that girls are being unnecessarily pampered" said Anjali Ramanna   https://bangaloremirror.indiatimes.com/bangalore/others/empowering...

1098 on School and Colleges' walls

Image
 ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಗಮನಿಸಿ ಮತ್ತು ಇಲ್ಲಿ ಓದುವವರು ಮಾಹಿತಿಯನ್ನು ಹಂಚಿಕೊಳ್ಳಿ. ಕಾಲೇಜಿನ ಗೋಡೆಯ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅನ್ನು ವಿವರದೊಂದಿಗೆ ಕಡ್ಡಾಯವಾಗಿ ಬರೆಸಬೇಕು. ವಿದ್ಯಾರ್ಥಿಗಳ ನೋಟ್ ಬುಕ್ನಲ್ಲಿ ಪ್ರಿಂಟ್ ಹಾಕಿಸಬೇಕು. Assembly/ ಬೆಳಗಿನ ಪ್ರಾರ್ಥನೆ ಸಮಯದಲ್ಲಿ ಎಲ್ಲರಿಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕು ಎನ್ನುವ ಸರ್ಕಾರಿ ಸುತ್ತೋಲೆ ಇದೆ ಮತ್ತು ಅದು ಇಲ್ಲಿ ಇದೆ.

High court on Suicide/ಆತ್ಮಹತ್ಯೆ ಕಾನೂನು

Image
 ನೀನೀಗ ನನ್ನ ಜೊತೆ ಓಡಿ ಬರದಿದ್ದರೆ, ಮದುವೆ ಆಗದಿದ್ದರೆ, ಮಲಗದಿದ್ದರೆ, ದುಡ್ಡು ಕೊಡದಿದ್ದರೆ, ಸಾಲ ಹಿಂದಿರುಗಿಸು ಅಂತ ಕೇಳಿದರೆ.....etc etc ಕಾರಣ ಕೊಟ್ಟು;  ನಾನು ನಿನ್ನ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀನಿ - ಎನ್ನುವ ಬೆದರಿಕೆಗೆ ಬಗ್ಗಬೇಡಿ, ನಿಮ್ಮ ತಪ್ಪು ಇಲ್ಲದಿರುವಾಗ ಹೆದರಬೇಡಿ...ಸಾಯುವವನು ಸಾಯಲಿ !! ಹೀಗೆ ನಾನು ನೂರು ಬಾರಿ ಹೇಳುತಿರ್ತೀನಿ, ಒಂದಷ್ಟು ಬಾರಿ ಬರೆದಿದ್ದೀನಿ ಕೂಡ. ಈಗ ನೋಡಿ ಶಂಖದಿಂದ ಬಿದ್ದಿದೆ ತೀರ್ಥ. ಕರ್ನಾಟಕ ಉಚ್ಚನ್ಯಾಯಾಲಯವು, CRIMINAL PETITION No.7001/2019 Noushad Ahmed Vs State by  Cantonment Railway Police Station ಈ ಪ್ರಕರಣದಲ್ಲಿ;  ಆತ್ಮಹತ್ಯೆ ಮಾಡಿಕೊಂಡವನು, ಹೆಸರು ಬರೆದಿದ್ದಾನೆ ಎನ್ನುವ ಕಾರಣಕ್ಕೆ ಆ ವ್ಯಕ್ತಿ ತಪ್ಪಿತಸ್ಥ ಎಂದಲ್ಲ. ಹಾಗೆಯೇ ಅವನನ್ನು ಅರೆಸ್ಟ್ ಮಾಡುವ ಅಗತ್ಯವೂ ಇಲ್ಲ ಆದರೆ ತನಿಖೆ ಮಾಡಬಹುದು ಅಷ್ಟೇ ಎನ್ನುವ ತೀರ್ಪು ಕೊಟ್ಟಿದೆ. ಇನ್ನೂ ಓದಿಗೆ ಈ ಲಿಂಕ್ ಒತ್ತಿ https://udayakala.news/how-to-handle-threat-of-suicide-be-addressed/ #FamilyCourtಕಲಿಕೆ

What was found in the bags of students

Image
 ಈ ಮೇಲಿನ YouTube link ನಲ್ಲಿ ಶೀರ್ಷಿಕೆಯ ವಿಷಯದ ಬಗ್ಗೆ ನನ್ನ ಮಾತಿದೆ. ಕೇಳಿ ಅಭಿಪ್ರಾಯ ತಿಳಿಸಿ.

Protection of Advocates

Image
 ಕೆಲವೇ ವಕೀಲರು AC ಚೇಂಬರ್ ನಲ್ಲಿ ಕೆಲಸ ಮಾಡುತ್ತಾರೆ, ಇನ್ನೂ ಕೆಲವೇ ಕೆಲವರು ಶ್ರಮಪಟ್ಟು ಆಸ್ತಿ ಪಾಸ್ತಿ ಮಾಡಿಕೊಳ್ಳುತ್ತಾರೆ, ಒಂದಷ್ಟೆ ವಕೀಲರು ಆಗೊಮ್ಮೆ ಈಗೊಮ್ಮೆ ವಿದೇಶ ಪ್ರವಾಸ ಮಾಡುತ್ತಾರೆ..... ಇವರೆಲ್ಲರ ಸಮಾಧಾನಕ್ಕೆ ಕಾರಣ ಇವತ್ತು ತಮ್ಮ ತಮ್ಮ ಖರ್ಚಿನಲ್ಲಿ ಬೆಳಗಾವಿಗೆ ತೆರಳಿ " ರಾಜ್ಯ ವಕೀಲರ ರಕ್ಷಣಾ ಕಾಯಿದೆ " ಜಾರಿಗೆ ತರಬೇಕು ಎಂದು ಪ್ರತಿಭಟನೆ ಮಾಡಿದಾರಲ್ಲ ಆ ನನ್ನ ವಕೀಲ ಸಹೋದರ, ಸಹೋದರಿಯರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ನಿಜ ಸ್ವರೂಪ ಇದು ಎಂದು ತೋರಿಸಿಕೊಟ್ಟಿದ್ದಾರೆ. ಕಂದಾಯ ಸಚಿವ ಅಶೋಕ್ ಅವರು bill ಮಂಡಿಸುವ ಭರವಸೆ ಕೊಟ್ಟಿದ್ದಾರೆ. ಪ್ರತಿಭಟನೆ ಮುಗಿದಿದೆ. ಎಲ್ಲಾ ವಕೀಲರುಗಳಿಗೆ ಒಂದು ಹೆಮ್ಮೆಯ salute!🙏 27-12-2022

Actor Abhinaya Imprisoned

Image
 ಇಪ್ಪತ್ತು ವರ್ಷಗಳು ನ್ಯಾಯಾಲಯದಲ್ಲಿ ನಡೆದ ಪ್ರಕರಣ. ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ ಆಗಿದೆ. ಆಕೆಯ ಅತ್ತಿಗೆ 2002ರಲ್ಲಿ ವರದಕ್ಷಿಣೆ ಕಿರುಕುಳದ ಬಗ್ಗೆ ಕೊಟ್ಟಿದ್ದ ದೂರು. ಇದರ ಬಗ್ಗೆ ಈ ದಿನ ಪವರ್ ಟಿವಿ ಯಲ್ಲಿ 5-6 ನಿಮಿಷಗಳು ಮಾತನಾಡಿದ್ದು ಈ ವಿಡಿಯೋದಲ್ಲಿ ಇದೆ.  ಕೆಳನ್ಯಾಯಾಲಯ ಖುಲಾಸೆಗೊಳಿಸಿದ್ದ ಪ್ರಕರಣಕ್ಕೆ ಉಚ್ಚನ್ಯಾಯಾಲಯ ಶಿಕ್ಷೆ ನೀಡಿದೆ. ಅಚ್ಚರಿ ಹೌದು, ವಿಚಿತ್ರ ಅಲ್ಲ. ಆಸಕ್ತರು ವಿಡಿಯೋ ನೋಡಿ🙏

Department of Defence production, Ministry of Defence, Government of India

Image
 ದಿನಾಂಕ 28 ನವೆಂಬರ್ 2022ರಂದು Department of Defence production, Ministry of Defence, Government of India ಅವರು Elimination of Violence against women and Human Rights of Women and Children ಬಗ್ಗೆ ಮಾತನಾಡಲು ಅವಕಾಶ ಕೊಟ್ಟಿದ್ದರು. ದೇಶದೆಲ್ಲೆಡೆಯಿಂದ 137 ಅಫೀಸಿನಿಂದ ಅಧಿಕಾರಿಗಳು ಭಾಗವಹಿಸಿದ್ದರು. ಒಂದು ಗಂಟೆಯ ಕಾಲ ಮಾತನಾಡಿದೆ. ನನಗನಿಸಿದ ಮುಖ್ಯಾಂಶಗಳು ಹೀಗಿವೆ; * Eliminate the discrimination to eliminate the violence. * We shall have to walk an extra mile to become Human beings. * Feminism is not a claim to Equality but for equal existence. It is an awareness given to the society about Co-existence. * unless the subtleness of violence is understood, Society cannot be programed for its elimination. * I raise voice not expecting the justice would be done but to make the injustice known. ಇದು ನಿಜಕ್ಕೂ ನನಗೆ ಸಮಾಧಾನ ಕೊಟ್ಟ ಕಾರ್ಯಕ್ರಮ. ಅವಕಾಶಕ್ಕಾಗಿ Department of Defence production, Ministry of Defence, Government of India ಇವರಿಗೆ ಧನ್ಯವಾದಗಳು.

Human Trafficking Law - ಮಾನವ ಕಳ್ಳ ಸಾಗಾಣಿಕೆ

Image
 ದಿನಾಂಕ 30-06-2022 ರಂದು  'ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಜೀತ ಪದ್ಧತಿ ಬಾಲಕಾರ್ಮಿಕ ಪದ್ಧತಿ ತಡೆಗಟ್ಟುವಿಕೆ"  ಕುರಿತು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೈಸೂರು ಇವರ ಸಹಯೋಗದೊಂದಿಗೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯವರು  ಏರ್ಪಡಿಸಿದ್ದ ಒಂದು ದಿನದ ಯೂಟ್ಯೂಬ್ ತರಬೇತಿಯಲ್ಲಿ; ಅಂಜಲಿ ರಾಮಣ್ಣ ಅಧ್ಯಕ್ಷರು ಮಕ್ಕಳ.ಕಲ್ಯಾಣ ಸಮಿತಿ ಬೆಂಗಳೂರು ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು

Surrogacy Law

Image
 ಅ ಕ್ಟೊಬರ್ 2021ರಂದು ಆರೋಗ್ಯ ಸಚಿವ ಸುಧಾಕರ್ ಅವರು ಹೇಳುತ್ತಾರೆ “ಆಧುನಿಕ ಮಹಿಳೆ ಒಬ್ಬಳೇ ಇರಲು ಬಯಸುತ್ತಾಳೆ. ವಿವಾಹವಾದರೂ ಮಗು ಹೆರಲು ಇಷ್ಟ ಪಡುತ್ತಿಲ್ಲ, ಬಾಡಿಗೆ ತಾಯಿಯಿಂದ ಮಗು ಪಡೆಯಲು ಬಯಸುತ್ತಿದ್ದಾಳೆ” ಎಂದು.  ಒಬ್ಬ ಮಹಿಳೆ ಹೀಗೆ ತನ್ನಿಷ್ಟಕೆ ಅನುಗುಣವಾಗಿ ಬಾಡಿಗೆ ತಾಯಂದಿರಿಂದ ಮಕ್ಕಳನ್ನು ಪಡೆಯಬಹುದು ಎಂದರೆ ಒಟ್ಟು 19 ಪುಟಗಳ 54 ಮುಖ್ಯ ಸೆಕ್ಷನ್‍ಗಳ ಸ್ಯಾರೋಗೆಸಿ (ನಿರ್ವಹಣೆ) ಕಾನೂನು-2021 ಹಾಗೂ 69 ಪುಟಗಳ 35 ರೂಲ್ಸ್ ಜೊತೆಗೆ 19 ನಮೂನೆಗಳನ್ನು ಹೊಂದಿರುವ ಸ್ಯಾರೋಗೆಸಿ ನಿಬಂಧನೆಗಳು-2022 ಇವುಗಳನ್ನು ಜಾರಿಗೆ ತರುವ ಅವಶ್ಯಕತೆಯಾದರೂ ಏನಿತ್ತು?! ಮೊನ್ನೆಮೊನ್ನೆ ನಯನತಾರ ಎನ್ನುವ ಪ್ರಖ್ಯಾತ ನಟಿ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದಾಗ ಕೆಲವು ಜನರು ಟೈಮ್ ಪಾಸ್ ಮಾತಿನಂತೆ ಹಗುರವಾಗಿ ಹೇಳಿದ್ದು “ಮದುವೆ ಮಾಡಿಕೊಂಡು ಲಕ್ಷಣವಾಗಿ ಮಕ್ಕಳು ಹೆರಕ್ಕೆ ಏನಂತೆ?” ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಕೆಲವರ ಮಾತು “ಮಕ್ಕಳು ಮಾಡಿಕೊಂಡ ಮೇಲೆ ಮದುವೆ ಯಾಕೆ? ನಮ್ಮ ಸಂಸ್ಕೃತಿ ಹಾಳಾಗುತ್ತಿದೆ.”   ತಮ್ಮದೂ ಒಂದು ಮಾತಿರಲಿ ಎಂದುಕೊಳ್ಳುವ ಕೆಲವರು ಹೇಳಿದ್ದು “ಊರಲೆಲ್ಲಾ ಅನಾಥ ಮಕ್ಕಳು ಬಿದ್ದಲೆಯುತ್ತಿವೆ. ಅವುಗಳನ್ನು ದತ್ತು ತೆಗೆದುಕೊಂಡು ಸಾಕಬಾರದೇ?”. ಇನ್ನೂ ಒಂದಷ್ಟು ತಲೆಗಳು “ಹೆಂಗಸರಿಗೆ ತಮ್ಮ ಸೌಂದರ್ಯ ಉಳಿದರೆ ಸಾಕು, ಸಮಾಜ ಏನಾದರೇನಂತೆ?” ಎಂದವು. ಹೀಗೇ ಇನ್ನೂ ತರಹಾವರಿ ವಾಕ್ಯಗಳನ್ನು ಓ...

ಬಾಲ್ಯವಿವಾಹ - ಜನಶಕ್ತಿ ಮೀಡಿಯಾ

Image
 ದಡಬಡಗುತ್ತಾ ಆಫೀಸಿನಿಂದ ಬಂದು.... ದಬದಬ ಅಂತ ಮುಖ ತೊಳ್ಕೊಂಡು... ಚಕ್ಚಕ್ ಆಗಿ ಕೆನ್ನೆಗೆ ಸುಣ್ಣ ಬಣ್ಣ ಸವರಲಾರದೆ.... ಫಟಾಫಟ್ ಫೋನಿನಲ್ಲಿ ಜನಶಕ್ತಿ ಮೀಡಿಯಾದ ನೇರ ಕಾರ್ಯಕ್ರಮಕ್ಕೆ login ಆದೆ.... ಠುಸ್ ಅಂತ ಫೋನ್ hang ಮಾಡ್ಕೊಂತು.... ಗಬ್ಬಕ್ ಅಂತ laptop ನಲ್ಲಿಮಾಡಿಕೊಂಡು ಮಾತು ಶುರು ಮಾಡಿದರೂ.... ನಡ್ನಡುವೆ ನೆಟ್ವರ್ಕ್ ಮನೆಗೆ ಹೋಗಿ ಬರ್ತಿತ್ತು.... ಹಾಗಾಗಿ ನನ್ನ ಮಾತು ಕೂಡ "ಬಾಲ್ಯವಿವಾಹದ side effect ನಂತೆ" ಆಗಿದೆ. ವಿಮಲ ಹಾಗೂ ರೂಪ ಹಾಸನ ಅವರು ಸಮಾಜಮುಖಿ ದುಡಿತವನ್ನು ದಕ್ಕಿಸಿಕೊಂಡವರು, ಅವರೊಂದಿಗೆ ಅವಕಾಶ ಒಲಿದು ಬಂದದ್ದೇ ದೊಡ್ಡದು. ಒಮ್ಮೆ ನೋಡಿ, ಕೇಳಿ ಅವ್ರಿವರಿಗೂ ಹೇಳಿ🙏

ನಲಿವು ಎಂದೂ ವ್ಯಕ್ತಿಗತ ; ನೋವು ಯಾವತ್ತಿಗೂ ಸಾಮುದಾಯಿಕ

Image
(ಕರ್ನಾಟಕ ಲೇಖಕಿಯರ ಸಂಘದ , ಸಾಹಿತ್ಯ ಸಂಚಯ ಕಾರ್ಯಕ್ರಮದಲ್ಲಿ ಆಡಿದ ಮಾತುಗಳು)  *ಕಾನೂನು, ಮಹಿಳೆ ಮತ್ತು ಅರಿವು* ಎಲ್ಲರಿಗೂ ನಮಸ್ಕಾರ. ಇಂದಿನ ಆಹ್ವಾನ ಪತ್ರಿಕೆಯಲ್ಲಿ ಉಪನ್ಯಾಸಕಿ ಎನ್ನುವ ದೊಡ್ಡ ಪದ ಬಳಸಿದ್ದಾರೆ. ಆದರೆ ಉಪನ್ಯಾಸ ಮಾಡಲು ಆಳವಾದ ಅಧ್ಯಯನ ಇರಬೇಕು ಮತ್ತು ಉಪನ್ಯಾಸಕಿ ಆಗಲು ಅರ್ಹತೆ ಇರಬೇಕು. ಇವೆರಡು ನನ್ನ ಬಳಿ ಇಲ್ಲ. ಹಾಗಾಗಿ ಇದು ಉಪನ್ಯಾಸ ಅಲ್ಲ. ನಿಮ್ಮೆಲ್ಲರ ವಿನಾಕಾರಣ ವಿಶ್ವಾಸಕ್ಕೆ ಮಣಿದು ನನ್ನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಂದಿದ್ದೇನೆ ಮತ್ತು ಅದರ ಮೂಲಕವೇ ಬೆಳೆಯಬೇಕು ಎನ್ನುವ ಆಸೆಯಿಂದ ಇಲ್ಲಿದ್ದೇನೆ. ಒಂದಷ್ಟು  ವರ್ಷಗಳ ಹಿಂದೆ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕಾನೂನು ತರಬೇತಿ ನೀಡಲು ಹೋಗಿದ್ದಾಗ, ಮಹಿಳಾ ಐಏಎಸ್ ಅಧಿಕಾರಿಯೊಬ್ಬರು ಮಹಿಳೆಯರೂ ಉಯಿಲು ಮಾಡಬಹುದು ಎನ್ನುವ ವಿಷಯವೇ ತಮಗೆ ತಿಳಿದಿರಲಿಲ್ಲ ಎಂದು ಹೇಳಿಕೊಂಡಾಗ   ಮೊದಲ ಬಾರಿಗೆ ಒಬ್ಬ ಮಹಿಳೆಯಾಗಿ ನನ್ನ ಜವಾಬ್ದಾರಿಯ ಅರಿವಾಯ್ತು. ಅದಕ್ಕೂ ಮೊದಲಿನಿಂದಲೇ, ಅಸ್ತಿತ್ವ ಸಂಸ್ಥೆಯನ್ನು ಸ್ಥಾಪಿಸಿದಾಗಿನಿಂದ ಮಹಿಳೆಯರು ಮತ್ತು ಮಕ್ಕಳು ಎನ್ನುತ್ತಾ ಕೆಲಸ ಮಾಡುತ್ತಿದ್ದರೂ, ಈ ಘಟನೆ ಮೊದಲ ಬಾರಿಗೆ ನನ್ನ ಜವಾಬ್ದಾರಿಯನ್ನು ಕೇಂದ್ರಿಕೃತಗೊಳಿಸಿಕೊಟ್ಟಿದ್ದು. ಇದರಿಂದ ನಾನು ಕಲಿತ ಪಾಠ ಅಂದರೆ ಕಲಿಯುವುದು ಎಷ್ಟು ಒಳ್ಳೆಯದೋ ಕಲಿತು ಸುಮ್ಮನಿರುವುದು ಅಷ್ಟೇ ಕೆಟ್ಟದು ಅಂತ. ನಮ್ಮ ಸಂವಿಧಾನದ ಮೂಲಭೂತ...

ಕರೋನ ತೋರಿದ ತವರು

Image
 ಇವತ್ತಿನ ಆಂದೋಲನ ಪತ್ರಿಕೆಯಲ್ಲಿ ಕರೋನ ತೋರಿಸಿದ ತವರೂರ ಸುಖ.... ಓದುತ್ತೀರಲ್ಲ 🙏🙏🙏 “ ಜೀವನದಲ್ಲಿ ಎದುರಿಸಲು ಆಗುವುದೇ ಇಲ್ಲ ಎನ್ನುವ ಕಷ್ಟ ಯಾವುದೂ ಇರವುದಿಲ್ಲ. ಯಾವ ನೋವೂ ತಾತ್ಕಾಲಿಕ. ಸಂತೋಷ ಪಡುವುದು ನಮ್ಮ ಕೈಯಲ್ಲಿಯೇ ಇದೆ” ಹೀಗೆಲ್ಲಾ ಇನ್ನೂ ತರಹಾವರಿ ವಾಕ್ಯಗಳನ್ನು ಬಲು ಮಧುರವಾದ ದನಿಯಲ್ಲಿ ಹರಿಯಬಿಡುತ್ತೇನೆ ಟೇಬಲ್‍ನ ಈಚೆ ಬದಿಯಿಂದ ಎದುರು ಕುಳಿತವರಿಗೆ. ಒಮ್ಮೆ ಹೀಗೇ ಭಾರೀಭಾರೀ ತೂಕದ ಮಾತುಗಳನ್ನು ಆಡಿ ಬೀಗುತ್ತಿದ್ದೆ.  ಕೇಳಿಸಿಕೊಂಡ ಒಬ್ಬಾಕೆ “ ಮೇಡಮ್, ನಿಮಗೆ ಬರೀ ಹೇಳಕ್ಕೆ ಬರತ್ತೆ ಅಷ್ಟೆ. ನಿಮಗೂ ಒಂದ್ಸರ್ತಿ ಈ ರೀತಿಯ ಕಷ್ಟ ಬಂದ್ರೆ ಗೊತ್ತಾಗತ್ತೆ, ಎಷ್ಟ್ ನೋವು ಅಂತ” ಎಂದು ಪಟ್ ಅಂತ ಹೇಳಿ ಟಪಕ್ ಅಂತ ಎದ್ದು ಹೋಗಿದ್ದಳು.  ಆಕೆಯ ಕಷ್ಟ ಏನಿತ್ತು ಅಂದರೆ ೮-೧೦ ತಿಂಗಳಿಂದ ಒಂದಲ್ಲ ಒಂದು ಕಾರಣಕ್ಕೆ ತಾಯಿ ಮನೆಗೆ ಹೋಗಲು ಆಗಿರಲಿಲ್ಲ. ಅದೇ ನೆಪಕ್ಕೆ ಗಂಡ ಹೆಂಡತಿಯರ ನಡುವೆ ರಾತ್ರಿ ಜಗಳಗಳು. ಅವನಿಗೆ ಸಿಟ್ಟು ಇವಳಿಗೆ ಸಿಡುಕು. ಓಹೋ, ಎಷ್ಟು ಬಾಲಿಶ ಇದು. ಸ್ವಲ್ಪವೂ ಪ್ರೌಢಿಮೆ ಇಲ್ಲದವಳು. ಎಂತಹಾ ಹೆಂಗಸಪ್ಪ ಇವಳು. ಹೀಗೆಲ್ಲಾ ಅಂದುಕೊಂಡಿದ್ದೆ. ಪಾದಕ್ಕೆ ನೀರು ತಾಕಿದರೆ ಮಾತ್ರ ಕೈ ಗೋವಿಂದನ ಭಂಗಿಗೆ ಹೋಗೋದು ಅಂತ ತಿಮ್ಮಪ್ಪನ ಭಕ್ತರೊಬ್ಬರು ಹೇಳಿದ್ದನ್ನು ಅರ್ಥವಾಗಿಸಿದ್ದು ಹಾಗೂ ಈ ಮೇಲಿನಾಕೆಯ ಶಾಪ ತಟ್ಟಿಸಿದ್ದು ಕರೋನ ಎನ್ನುವ ಏಳು ಕೊಂಡಲ ವಾಡ! ಅಬ್ಬಾ! ಎಷ್ಟೆಲ್ಲಾ ಬದಲಾಗಿ ಹೋಯಿತು. ನ...

ಇದು ನಿನಗಾಗಿ - International Gil Child Day concluding part

Image
 

ಇದು ನಿನಗಾಗಿ -International Girl Child Day-10

Image
 

ಇದು ನಿನಗಾಗಿ - International Girl Child Day-9

Image
 

ಇದು ನಿನಗಾಗಿ -8

Image
 

ಮಕ್ಕಳ ಹಕ್ಕು, ಮೊದಲ ಹುಡುಗ

Image
 ಈ ಸಂಪರ್ಕ ಸಂಖ್ಯೆಯೊಡನೆ ಮಾತು ನಿಂತು ಮೂರು ತಿಂಗಳಾಗಿತ್ತೇ?! ಗಮನಕ್ಕೇ ಬರಲಿಲ್ಲವಲ್ಲ. ಎಂದುಕೊಳ್ಳುತ್ತಲೇ ಬಂದಿದ್ದ ಆಡಿಯೋ ಸಂದೇಶವನ್ನು ತೆರೆದೆ “ ಲೇ ಲೇ ರಾಮಣ್ಣನ ಮಗಳೇ. . .” ಎಂದು ರಾಗವಾಗಿ ಹಾಡಿದ್ದ ಅವನು. ಆ ರಾಗಕ್ಕೆ ತಾಳವಾಗುವ ಮನಸ್ಸು ಇರಲಿಲ್ಲ. ಆದರೆ ಉತ್ತರಿಸುವುದು ಬೇಕಾಗಿತ್ತು. ಪ್ರಾಮಾಣಿಕವಾಗಿ ಹೇಳಿದೆ “ ಪಾಪ ಆ ಹುಡುಗಿ ಹತ್ತಿರ ಸೆಕ್ಶನ್ 94ರಲ್ಲಿ ಹೇಳಿರುವ ಯಾವ ದಾಖಲೆಯೂ ಇಲ್ಲ. ಏನು ಮಾಡೋದು ಅಂತ ಯೋಚಿಸ್ತಿದ್ದೀನಿ” ಎಂದೆ.  ಪ್ರತಿ ಬಾರಿಯಂತೆ ಈಗ ಅವನು ಸಿಡುಕಲಿಲ್ಲ. “ನೀನೊಂದು ಗೂಬೆ’ ಎಂದು ದೂರಲಿಲ್ಲ. “ನಿನ್ನಿಂದ ರೊಮ್ಯಾಂಟಿಕ್ ಮಾತು impossible” ಎಂದು ಬೈಯಲಿಲ್ಲ.  ಸಮಾಧಾನದಿಂದ “ಓಹ್ ಹೌದಾ. . .” ಎನ್ನುತ್ತಲೇ ಒಂದೆರಡು ಸಲಹೆಗಳನ್ನು ಕೊಟ್ಟ. ಸಲೀಂ ನನ್ನ ಜೀವದ ಅವಿಭಾಜ್ಯ ಅಂಗ. ಜೀವನವನ್ನು ಹಂಚಿಕೊಂಡವ. ಅಮೇರಿಕೆಯಲ್ಲಿ ಇದ್ದಾನೆ. ನಮ್ಮಿಬ್ಬರದು ಹುಟ್ಟಿದಾರಭ್ಯ ಏತಿ ಎಂದರೆ ಪ್ರೇತಿ ಎನ್ನುವ ಬಂಧ. ನನ್ನ ಯಾವ ಗುರಿಗಳೂ ಅವನದಲ್ಲ. ಅವನ ಯಾವ ಕನಸುಗಳೂ ನನ್ನನ್ನು ರೋಮಾಂಚನ ಗೊಳಿಸಿದ್ದೇ ಇಲ್ಲ. ಕಲ್ಪನೆಗಳನ್ನೂ ನಮ್ಮಿಬ್ಬರ ಸಾಮ್ಯತೆಯೇ ಇಲ್ಲ. ಅವನದ್ದು ಬೆಳಗ್ಗೆ ಒಂಭತ್ತರಿಂದ ಸಂಜೆ ಐದಕ್ಕೆ ನಿಗಧಿಗೊಂಡ ಶೈಲಿ. ನನ್ನದು ಹಿಡಿದ ಕೆಲಸ ಮುಗಿಸಿ, ತಕ್ಷಣವೇ ಮತ್ತೊಂದನ್ನು ತೆರೆದಿಟ್ಟುಕೊಂಡು ಕೂರುವ ಹೊತ್ತುಗತ್ತು ಇಲ್ಲದ ಅಭಿರುಚಿ. ಅಗಾಧ ವ್ಯತ್ಯಯಗಳಲ್ಲೂ ನನ್ನನ್ನು ಹುಚ್ಚನಂತೆ ಪ್ರೀತಿಸುತ...

ಇದು ನಿನಗಾಗಿ -0Girl Child Day-7

Image
 

ಇದು ನಿನಗಾಗಿ - Girl Child Day-6

Image
 

ಇದು ನಿನಗಾಗಿ - Girl Child Day-5

Image
 

ಇದು ನಿನಗಾಗಿ -Girl Child Day-4

Image
 ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕಾಗಿ, ಕಂಪನಾಂಕ Tele Radio ಜೊತೆ ಅಸ್ತಿತ್ವ ಟ್ರಸ್ಟ್ ನ ಜಂಟಿ ಅಭಿಯಾನ "ಇದು ನಿನಗಾಗಿ" ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಿದ ಕಥೆಗಳನ್ನು ಹೇಳುತ್ತಾರೆ ಸ್ಪೂರ್ತಿಗೊಂಡವರು. ಕೇಳಿ, ಕೇಳಿಸಿ ಮತ್ತು ಹೇಳಿ.... "ಮಗಳೇ ನಿನ್ನ ಹಕ್ಕಿಗಾಗಿ ದನಿ ಎತ್ತು ಮಗಳೇ ನಿನ್ನ ಹಕ್ಕಿಗಾಗಿ ಎದ್ದು ನಿಲ್ಲು!" #GenerationEquality

ಇದು ನಿನಗಾಗಿ - Girl Child Day-3

Image
 ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕಾಗಿ, ಕಂಪನಾಂಕ Tele Radio ಜೊತೆ ಅಸ್ತಿತ್ವ ಟ್ರಸ್ಟ್ ನ ಜಂಟಿ ಅಭಿಯಾನ "ಇದು ನಿನಗಾಗಿ" ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಿದ ಕಥೆಗಳನ್ನು ಹೇಳುತ್ತಾರೆ ಸ್ಪೂರ್ತಿಗೊಂಡವರು. ಕೇಳಿ, ಕೇಳಿಸಿ ಮತ್ತು ಹೇಳಿ.... "ಮಗಳೇ ನಿನ್ನ ಹಕ್ಕಿಗಾಗಿ ದನಿ ಎತ್ತು ಮಗಳೇ ನಿನ್ನ ಹಕ್ಕಿಗಾಗಿ ಎದ್ದು ನಿಲ್ಲು!" #GenerationEquality

ಇದು ನಿನಗಾಗಿ - Girl Child Day -2

Image
 ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕಾಗಿ, ಕಂಪನಾಂಕ Tele Radio ಜೊತೆ ಅಸ್ತಿತ್ವ ಟ್ರಸ್ಟ್ ನ ಜಂಟಿ ಅಭಿಯಾನ "ಇದು ನಿನಗಾಗಿ" ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಿದ ಕಥೆಗಳನ್ನು ಹೇಳುತ್ತಾರೆ ಸ್ಪೂರ್ತಿಗೊಂಡವರು. ಕೇಳಿ, ಕೇಳಿಸಿ ಮತ್ತು ಹೇಳಿ.... "ಮಗಳೇ ನಿನ್ನ ಹಕ್ಕಿಗಾಗಿ ದನಿ ಎತ್ತು ಮಗಳೇ ನಿನ್ನ ಹಕ್ಕಿಗಾಗಿ ಎದ್ದು ನಿಲ್ಲು!" #GenerationEquality

ಇದು ನಿನಗಾಗಿ - Girl Child day

Image
 ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕಾಗಿ, ಕಂಪನಾಂಕ Tele Radio ಜೊತೆ ಅಸ್ತಿತ್ವ ಟ್ರಸ್ಟ್ ನ ಜಂಟಿ ಅಭಿಯಾನ "ಇದು ನಿನಗಾಗಿ" ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಿದ ಕಥೆಗಳನ್ನು ಹೇಳುತ್ತಾರೆ ಸ್ಪೂರ್ತಿಗೊಂಡವರು. ಕೇಳಿ ಕೇಳಿಸಿ ಮತ್ತು ಹೇಳಿ..... "ಮಗಳೇ ನಿನ್ನ ಹಕ್ಕಿಗಾಗಿ ದನಿ ಎತ್ತು ನಿನ್ನ ಹಕ್ಕಿಗಾಗಿ ಎದ್ದು ನಿಲ್ಲು"

ಮನೋದೇಗುಲದ ಅವನ ಮೂರ್ತಿಗೆ ನೀಲಿಯಿಲ್ಲ, ನವಿಲು ಗರಿಯಿಲ್ಲ, ಚಕ್ರದ ಭಾರವಿಲ್ಲ. . .

Image
  DUÀ £Á®Ì£Éà vÀgÀUÀwAiÀİèzÉÝ. UɼÉAiÀÄgÀ §¼ÀUÀ zÉÆqÀØzÀÄ. £ÀªÀÄä ªÀÄ£ÉAiÀÄ ºÀeÁgÀzÀ°è, DUÉÆªÉÄä FUÉÆªÉÄä J®ègÀÆ ¸ÉÃj ¸ÁA¸ÀÌöÈwPÀ ¸ÀAeÉ ªÀÄd ªÀiÁrÛzÀݪÀÅ. F ¨Áj GvÀÛgÀ£À ¥ËgÀĵÀ £ÁlPÀ ªÀÄvÀÄÛ gÁzsÁ PÀȵÀÚgÀ £ÀÈvÀå. £À£ÀUÉ gÁzsÉ ¥ÁvÀæ ªÀiÁqÉâÃPÀÆAvÀ §®Ä D¸É. DzÀgÉ §tÚ £ÉÆÃqÉÆÃ K£ÉÆÃ zÉÆqÀØ ªÀÄPÀ̼Éî¯Áè £À£ÀߣÀÄß PÀȵÀÚ£À ªÀiÁr ¤°è¹âlÄÖç! M®èzÀ ªÀÄ£À¹ì¤AzÀ vÀ¯É PÉÆAqÉUÉ £À«®ÄUÀj ¹Q̹PÉÆAqÀÄ, ªÉÄÊUɯÁè ¤Ã° §½zÉÆÌAqÀÄ, PÉÆ¼À®£ÀÄß G¯ÁÖ¥À¯ÁÖ »rzÀÄ ªÀÄÄR H¢¹PÉÆAqÀÄ ¤AwzÉÝ.  EµÀÄÖ ©lÖgÉ £À£ÀUÀÆ CªÀ¤UÀÆ SÁ¸À ¥ÀjZÀAiÀĪÉägÀ°®è. CµÀÖ«Ä vÉÆnÖ®£ÀÄß ¥ÀPÀÌzÀ CAiÀÄåAUÁgï ªÀÄ£ÉAiÀÄ°è £ÉÆÃqÀÄwÛzÀÝzÀÄÝ ©lÖgÉ CªÀ£À£ÀÄß ªÀÄvÉÛ®Æè ¸ÀA¢ü¸À¯ÁUÀ¢zÀÝPÉÌ F ¸ÁävÀð ºÉtÄÚ N¢zÀÄÝ ²®Ä¨ÉAiÀÄ ¥ÀzÀvÀ®zÀ°è C£ÀÄߪÀ PÁgÀtªÀÇ E¢ÝÃvÀÄ. “ K¸ÀÄ £ÀªÀÄä gÀPÀëPÀ £ÀªÀÄä ¥Á¥À vÉÆ¼ÉzÀ ¸ÀAvÉÆÃµÀ GPÉÌ GPÀÄÌvÉÛÃ. . . . . ” CAvÀ ºÁqÉÆÌÃAqÉà ¨Á¯ÁåwèÁ®å PÀ¼ÉzÀÄ, PÁ¯ÉÃdÄ PÀtÄÚ vÉgÉzÉÆqÀ£É ¥ÀjZÀAiÀĪÁVzÀÄÝ ¸À°ÃA. CAzÉäÃ¯É £À£ÉÆß¼ÀUÉ UÉÆÃPÀįÁµÀÖ«Ä ZÀ¥ÀàgÀ J¢ÝÃvÀÄ vÁ£É ºÉÃUÉ?!   £À£Àß CªÀÄä J¯Áè ¥ÀÆeÉ ºÀ§âUÀ¼ÀÄ §zÀÄQ...